ಈ ಪುಟವನ್ನು ಪ್ರಕಟಿಸಲಾಗಿದೆ



೯೬

ಪರಂತಪವಿಜಯ


ಅಧ್ಯಾಯ ೧೩.

ಮಾರನೆಯ ದಿನ ಸಾಯಂಕಾಲ, ಶಂಬರನು ರತ್ನಾಕರದಲ್ಲಿ ಕಾಮಮೋಹಿನಿಯನ್ನು ಇಟ್ಟು, ಅಲ್ಲಿಂದ ತನ್ನ ಮನೆಗೆ ಬಂದನು.ಅವನು, ತಾನು ಮಾಡಿದ ದುಷ್ಕೃತ್ಯಗಳಿಗೆ ಏನು ಪ್ರತಿಕಾರವಾಗುವುದೋ ಎಂದು ಭಯಪಡುತ್ತಲೇ ಇದ್ದನು. ಆಗ ಕಲಾವತಿಯು ತಾನು ಕತ್ತು ಮಿಸುಗಿದ್ದರಿಂದ ಸಾಯಲಿಲ್ಲವೆಂಬುದಾಗಿ ಗೊತ್ತಾಯಿತು. ಬಳಿಕ ಬಹಳ ವ್ಯಸನಾಕ್ರಾಂತನಾಗಿ ನಿಟ್ಟುಸಿರನ್ನು ಬಿಟ್ಟು, ತಾನು ಮಾಡಿದ ಕೃತ್ಯವನ್ನು ಇವಳು ಬೈಲುಮಾಡುವಳೆಂಬುದಾಗಿಯೂ, ಅದರಿಂದ ತನಗೆ ತೊಂದರೆಯುಂಟಾಗುವುದೆಂಬುದಾಗಿಯೂ ಭಯಪಟ್ಟನು.
  ಆಗ “ ಕಲಾವತಿ ಸಾಯಲಿಲ್ಲ. ಅವಳು ಸತ್ತಿದ್ದರೆ ಚೆನ್ನಾಗಿತ್ತು ಅವಳು ಜೀವಂತಳಾಗಿರುವವರೆಗೂ ನನಗೆ ಬಹಳ ವಿಪತ್ತುಂಟು. ನಾನು ಅವಳಿಗೆ ಮಾಡಿದ ಅಪಕಾರವನ್ನು ಅವಳು ಎಂದಿಗೂ ಮರೆಯಳು. ಇನ್ನೇನು ಪ್ರಮಾದ ಬರುವುದೊ ತಿಳಿಯದು. ನಾನು ಮಾಡಿದ ಸಂಕಲ್ಪವು ಘಟಿಸಲಿಲ್ಲ. ದೈವಚಿತ್ತವು ಬೇರೆಯಾಯಿತು. ಈಗ ಭಯಪಟ್ಟು ಪ್ರಯೋಜನವಿಲ್ಲ. ನನ್ನ ಕರ್ಮಫಲವನ್ನು ನಾನೇ ಅನುಭವಿಸಬೇಕು!" ಇತ್ಯಾದಿ ರೀತಿಯಲ್ಲಿ ಚಿಂತಿಸುತ್ತಿದ್ದನು.
  ಈ ರೀತಿಯಾಗಿ ತನ್ನಲ್ಲಿ ತಾನೆ ಮಾತನಾಡಿಕೊಳ್ಳುತ್ತಿರುವಾಗ, ಕಲಾವತಿಯ ಜವಾನನು ಬಂದನು.
ಶಂಬರ-ಏನಯ್ಯ : ನಿನ್ನ ಯಜಮಾನತಿಯು ಎಲ್ಲಿರುವಳು?
ಜವಾನ- ಅವಳು ಹೊರಟುಹೋದಳು, ಸ್ವಾಮಿ!
ಶಂಬರ -ಹೊರಟುಹೋದಳೇ! ಎಲ್ಲಿಗೆ ಹೋದಳು?
ಜವಾನ-ನನಗೆ ತಿಳಿಯದು. ಆಕೆ ನನಗೆ ಹೇಳಲಿಲ್ಲ. ಹೊರಟು ಹೋಗುವಾಗ, ಆಕೆಯು ಒಂದು ಚೀಲವನ್ನು ತೆಗೆದುಕೊಂಡು ಹೋದಳು.
ಶಂಬರ-ಹೊರಟುಹೋಗುವಾಗ ನನಗೆ ಏನಾದರೂ ಸಮಾಚಾರವನ್ನು ಹೇಳಿ ಹೋದಳೊ ?