ಈ ಪುಟವನ್ನು ಪ್ರಕಟಿಸಲಾಗಿದೆ



೧೦೨

ಪರಂತಪವಿಜಯ


ಅಲಂಕರಿಸಲ್ಪಟ್ಟಿತ್ತು. ನೆಲದಮೇಲೆ ಹಾಸಲ್ಪಟ್ಟಿದ್ದ ಜಂಖಾನ ಮೊದಲಾದುವುಗಳು ಬಹಳ ಮನೋಹರವಾಗಿದ್ದುವು. ಈ ಕಟ್ಟಡದ ಬಾಗಿಲಿನಲ್ಲಿ, ಆಯುಧಪಾಣಿಗಳಾದ ಇಬ್ಬರು ಭೃತ್ಯರಿದ್ದರು. ಕಟ್ಟಡದ ಒಳಗೆ ಎಲ್ಲೆಲ್ಲಿಯೂ ಬಹಳ ನಿರ್ಮಲವಾಗಿತ್ತು. ಈ ಕಟ್ಟಡದ ಒಂದು ಕೊಟ್ಟಡಿಯಲ್ಲಿ ೧೮-೧೯ ವಯಸ್ಸುಳ್ಳ ಒಬ್ಬ ಹುಡುಗಿಯಿದ್ದಳು. ಇವಳು ಬಹಳ ಸುಂದರಿಯಾಗಿದ್ದಾಗ್ಗೂ, ಆಗತಾನೆ ಖಾಹಿಲೆಯಿಂದ ಎದ್ದಂತೆಯೂ, ಅನಿರ್ವಚನೀಯವಾದ ದುಃಖವನ್ನು ಅನುಭವಿಸುತ್ತಲಿರುವಂತೆಯೂ ಕಾಣಬರುತ್ತಿದ್ದಳು. ಅವಳೇ ಕಾಮಮೋಹಿನಿ. ಆಗತಾನೆ ಅವಳಿಗೆ ದೇಹದಮೇಲೆ ಸ್ಮೃತಿ ಬಂದಿತ್ತು. ಅವಳಿಗೆ ಶೈತೋಪಚಾರಗಳನ್ನು ಮಾಡುವುದಕೋಸ್ಕರ, ಶಂಬರನು ದುರ್ಮತಿಯೆಂಬ ಸ್ತ್ರೀಯನ್ನು ನಿಯಮಿಸಿದ್ದನು. ಪ್ರಜ್ಞೆ ಬಂದ ಕೂಡಲೆ ಕಾಮಮೋಹಿನಿಯು, ಅಮ್ಮಾ ನೀನು ಯಾರು? ಎಂದಳು.
ದುರ್ಮತಿ-ನಾನು ನಿನ್ನ ದಾದಿಯು.
ಕಾಮಮೋಹಿನಿ-ನಿನ್ನ ಹೆಸರೇನು?
ದುರ್ಮತಿ-ದುರ್ಮತಿ.
ಕಾಮಮೋಹಿನಿ-ನನ್ನ ದಾದಿಯಾಗಿರುವುದಕ್ಕೆ ನಿನ್ನನ್ನು ನಿಯಮಿಸಿದವರು ಯಾರು?
ದುರ್ಮತಿ-ಶಂಬರನು.
ಕಾಮಮೋಹಿನಿ-(ಆತ್ಮಗತ) ಓಹೋ! ಈ ಚಂಡಾಲನು ಸತ್ಯಶರ್ಮಾದಿಗಳಿಗೇನೋ ಅಪಾಯವನ್ನುಂಟುಮಾಡಿ ನನ್ನನ್ನು ಅಪಹರಿಸಿಕೊಂಡು ಬಂದಿರಬಹುದು. ಈ ಕಿರಾತನಿಗೆ ನಾನು ಅಧೀನಳಾಗಿರುವಂತೆ ತೋರುತ್ತದೆ. ಈ ಸ್ತ್ರೀಯು ಅವನಿಂದ ನಿಯಮಿಸಲ್ಪಟ್ಟಿರ ತಕ್ಕವಳು. ನಾನು ಶತ್ರು ಗಳ ಮಧ್ಯದಲ್ಲಿರುವೆನು. ಇನ್ನು ನನಗೆ ಏನು ಗತಿ ! ನನ್ನಂಥ ಅನಾಥರಿಗೆ ದೇವರೇ ಗತಿಯಲ್ಲವೆ! ಇರಲಿ. ಮನುಷ್ಯರನ್ನು ನಂಬಿ ಪ್ರಯೋಜನವಿಲ್ಲ. ನಾನು ಸತ್ಯವಂತಳಾಗಿದ್ದರೆ ಈ ನನ್ನ ಕಷ್ಟಗಳನ್ನು ದೇವರೇ ಪರಿಹರಿಸಲಿ. ಹಾಗೆ ದೇವರು ಸಹಾಯ ಮಾಡದಿದ್ದರೆ, ಈ ಚಂಡಾಲನ ಅಧೀನದಲ್ಲಿರುವುದಕ್ಕಿಂತ ಹೇಗಾದರೂ ಪ್ರಾಣವನ್ನು ಬಿಟ್ಟು ದೇವರ ಸನ್ನಿಧಿಯನ್ನೇ ಹೊಂದುವನು. ಇರಲಿ, ಇಲ್ಲಿನ ವಿದ್ಯಮಾನಗಳನ್ನು ಸರಿಯಾಗಿ ತಿಳಿದು