ಈ ಪುಟವನ್ನು ಪ್ರಕಟಿಸಲಾಗಿದೆ



ಅಧ್ಯಾಯ ೧೪

೧೦೧


ಅವನನ್ನು ಜಯಿಸಿ ಶಂಬರನನ್ನು ವಧಿಸಿ ನನ್ನ ಯಜಮಾನನನ್ನು ಕರೆದು ಕೊಂಡು ಬರುವೆನು. ಈ ಪ್ರತಿಜ್ಞೆಗೆ ತಪ್ಪಿದರೆ, ನಾನು ಪರಂತಪನ ನೃತ್ಯ ನಾಗುವುದಕ್ಕೆ ಅರ್ಹನಲ್ಲವೆಂದು ತಿಳಿದುಕೋ.
ಕಲಾವತಿ- ಈ ವಿಷಯದಲ್ಲಿ ನಿನಗೆ ನಾನು ಸಹಾಯಮಾಡುವೆನು. ಶಂಬರನು ಜೀವಂತನಾಗಿರುವವರೆಗೂ, ನಾನು ಆಹಾರವನ್ನೂ ವಿಶ್ರಾಂತಿಯನ್ನೂ ಹೊಂದುವುದಿಲ್ಲ. ಆದರೆ, ಶಂಬರನ ಕಾವಲುಗಾರರು ಬಹಳ ಸಮರ್ಥರು. ರತ್ನಾಕರದ ಬಂಗಲೆಯು ದಿಗ್ಬ್ರಮೆಯನ್ನುಂಟು ಮಾಡತಕ್ಕ ಚಕ್ರಬಿಂಬನ ಕೋಟೆಯಂತಿರುವುದು. ಇಂಥ ಸ್ಥಳದಲ್ಲಿ ಅವನಿರುವ ಸ್ಥಳವನ್ನು ಗೊತ್ತು ಮಾಡುವುದು ಕಷ್ಟ.
ಮಂಜೀರಕ- ಈ ವಿಷಯದಲ್ಲಿ ಭಯಪಡಬೇಡ. ಈ ದುರ್ಗಕ್ಕೆ ದಾರಿಯನ್ನು ತೋರಿಸು. ಪರಂತಪನನ್ನು ಪತ್ತೆಮಾಡಿ ಶಂಬರನನ್ನು ನರಕಕ್ಕೆ ಪ್ರಯಾಣ ಮಾಡಿಸತಕ್ಕ ಕೆಲಸವನ್ನು ನನಗೆ ಬಿಡು. ಈ ದಿನ ಬಹಳ ದೂರ ಪ್ರಯಾಣಮಾಡಿ ತುಂಬ ದಣಿದಿದ್ದೇನೆ. ನಡೆಯುವುದಕ್ಕೆ ಸ್ವಲ್ಪವೂ ಶಕ್ತಿಯಿಲ್ಲ. ಈ ರಾತ್ರಿ ವಿಶ್ರಮಿಸಿಕೊಂಡು, ಬೆಳಗ್ಗೆ ಪ್ರಯಾಣಮಾಡುವುದಕ್ಕೆ ಸಿದ್ಧನಾಗುತ್ತೇನೆ. ನೀನೂ ಹೊರಡುವುದಕ್ಕೆ ಸಿದ್ಧಳಾಗು. ದೇವರು, ದು‍‍ಷ್ಟ ನಿಗ್ರಹ ಶಿಷ್ಟಪರಿಪಾಲನೆಗಳನ್ನು ಮಾಡುವುದಕ್ಕೆ, ನಮ್ಮಂಥವರನ್ನಲ್ಲದೆ, ಇನ್ನಾರನ್ನುಪಯೋಗಿಸುವನು?

ಅಧ್ಯಾಯ ೧೪


ತ್ನಾಕರದ ವರ್ತಮಾನವು ಈಗ ಪರ್ಯಾಲೋಚನೀಯವಾದದ್ದು. ಇಲ್ಲಿ ದುರ್ಗಪ್ರಾಯವಾದ ಒಂದು ಕಟ್ಟಡವುಂಟೆಂದು ಹೇಳಿದ್ದೆವಷ್ಟೆ! ಈ ಕಟ್ಟಡವು, ಪರಿಷ್ಕೃತವಾಗಿ ಸುಣ್ಣ ಬಣ್ಣಗಳ ಕೆಲಸಗಳಿಂದ ಬಹಳ ರಮಣೀಯವಾಗಿ ಮಾಡಲ್ಪಟ್ಟಿತ್ತು. ರಾಜಯೋಗ್ಯವಾದ ಕುರ್ಚಿ, ಮಂಚ, ಸೋಫಾ, ಚಿತ್ರ ವಿಚಿತ್ರವಾದ ಗಾಜಿನಗಿಡ, ಕಂದೀಲು ಮೊದಲಾದುವುಗಳಿಂದ