ಈ ಪುಟವನ್ನು ಪರಿಶೀಲಿಸಲಾಗಿಲ್ಲ.

5೨ 6 ಕರ್ಣಾಟಕ ಕಾವ್ಯಕಲಾನಿಧಿ ಧುರಕೆ ವೀಳೆಯವಿತ್ತು ಸೇನೆಯ | ಸರಿಗೆ ತಾನೊತ್ತಾಗಿ ಬರೆ ದಿನ | ಕರನು ಪಶ್ಚಿಮಗಿರಿಯ ಶಿಖರದ ನಿಳಯದೊಳಿಕ್ಕ ||೧! ಓಡಿದುದು ರವಿಕಿರಣವಗಲಕೆ | ಝಾಡಿಸಿತು ಬಲುತಿಮಿರ ತಾರಕೆ | ಮಡಿದುವು ಗಗನದಲಿ ಮೊಗಗುಂದಿದುವು ಕಮಲಗಳು | ಜೋಡೊಡೆಯೆ ರವಿವಕ್ಕಿ ಖಗಕುಲ | ಗೂಡ ಸಾರಲು ಚಂದ್ರಮನ ಗೆರೆ | ಮೂಡೆ ನಕ್ಕವು ಕುಮುದ ವಾರಿಧಿ ಹಿಗ್ಗಿ ಹರುಷದಲಿ ||೨|| ವಿಮಳಸಂಧ್ಯಾವಂದನೆಯ ಸು || ಕ್ರಮದೊಳಾಚರಿಸಿದನು ರಾವಣ | ನಮಿತಬಲನೋಲಗವನಿತ್ತನು ದನುಜಸಚಿವರಿಗೆ || ತಮತಮಗೆ ಖಳಭಟರು ದಿವಸದ | ಸಮರವಾರ್ತೆಯ ವಿಸ್ತರಿಸುತಿರೆ | ಕುಮತಿ ಹಾರೈಸಿದನು ಮೈರಾವಣನ ಬರವಿಂಗೆ ||೩|| ಅತ್ತ ಮೈರಾವಣನು ಮಿಗೆ ನಲಿ | ಯುತ್ತ ಮಜ್ಜನಭೋಜನಂಗಳ | ಬಿತ್ತರಿಸಿ ಮಣಿಮಯ ವಿಭೂಷಣದೊಟ್ಟು ನಲವಿನಲಿ || ರತ್ನ ಮಣಿಮುಕುಟಂಗಳ್ಳೆದನು | ಮತ್ತ ಕದೊಳಳವಡಿಸಿ ಬಿರುದಿನ | ಚಿತ್ರಮಯಭೂಷಣಗಳಲ್ಲಿ ಸಿಂಗರಿಸಿದನು ದನುಜ ||೪|| ಕರದೊಳಗೆ ಕಡುಗವನು ಜಡಿಯುತ | ಭರವಶದೆ ಚಾವಡಿಗೆ ಬಂದನು | ಹರುಷದಿಂದೋಲಗವನಿತ್ತನು ದನುಜರಾಯರಿಗೆ || ಕರೆಸಿ ಸೋದರದಳಿಯನನು ಕು | ೯ರಿಸಿ ಕೊಂಡನು ಸಿಂಹಪೀಠದೆ | ಕರಚರಣಲಕ್ಷಣಗಳನ್ನು ವೀಕ್ಷಿಸುತೆ ಚಿಂತಿಸಿದ