ಈ ಪುಟವನ್ನು ಪ್ರಕಟಿಸಲಾಗಿದೆ
ಶರಸೇತು ಬಂಧನ
85

ಅರ್ಜುನ-ಹನುಮಂತರ ಈ ಪ್ರಕರಣದಲ್ಲಿ ಹನುಮಂತನು, ಸರಳವಾದ ಮುಗ್ಧ ಅಥವಾ ನಿಷ್ಕಳಂಕ ಭಕ್ತನಾಗಿ ಇಲ್ಲ ಎಂಬುದನ್ನು ಪ್ರಸಂಗದ ಅವಲೋಕನ ದಿಂದಲೇ ಕಂಡುಕೊಳ್ಳಬಹುದು.
1. ಪ್ರಸಂಗದ ಪದ್ಯಗಳಲ್ಲಿ, ಹನುಮಂತನು ತಾನು ಪರಾಭವ ಹೊಂದುವವರೆಗೂ, ಒಮ್ಮೆಯೂ ರಾಮನನ್ನು ಉಲ್ಲೇಖಿಸುವುದಿಲ್ಲ. ನಾಲ್ಕ ನೆಯ ಸೇತುವನ್ನು ಮುರಿಯಲಾರದಾಗ ಮಾತ್ರ “ಅರರೆ ರಾಮಭಕ್ತನೆಂಬ ಬಿರುದು ಹೋಯ್ಕೆ” ಎನ್ನುತ್ತಾನೆ.
2. ಅರ್ಜುನನ ಮಾತಿನಲ್ಲೂ, ಹನುಮಂತನನ್ನು ಕೆರಳಿಸಿದ್ದು, ರಾಮ ನಿಂದೆಯಲ್ಲ. (ಪ್ರಸಂಗದಲ್ಲಿ ಅರ್ಜುನನಿಂದ ರಾಮನ ನೇರ ಪ್ರಸ್ತಾಪ ಇಲ್ಲ.) ಬದಲಾಗಿ “ಕಿರಿದು ಬಲವುಳ್ಳವರು ನೀವು ಎಂಬ ಅರಿಕೆ ನಮಗಾಯ್ತು ಎಂಬ ಪಾರ್ಥನ ಅಬ್ಬರದ ನುಡಿ ಕೇಳಿ ಮರುತ ಸುತನಿಗೆ” ಪ್ರಳಯ ಕೋಪ ಬರು ತ್ತದೆ.
3. ಕೃಷ್ಣನೂ ಕಾಡ (ವೃದ್ಧ ವಿಪ್ರನಾಗಿ) ಇವರಿಬ್ಬರ ಪಂಥದ ಕ್ರಮ ವನ್ನು ಆಕ್ಷೇಪಿಸುವಲ್ಲಿ ಇಬ್ಬರನ್ನೂ ಆಕ್ಷೇಪಿಸುತ್ತ “ಮೂರ್ಖತೆಗೇನನೆಂಬೆನು... ಸಾಕ್ಷಿ ಇಲ್ಲದೆ” ಎನ್ನುತ್ತಾನೆ.
4. ಹನುಮಂತನಿಗೆ, ಶರೀರದಲ್ಲಿ ಕ್ಷೀಣತೆ ಬರಲು ಕಾರಣವೇನು ಎಂದು ಅರ್ಜುನ ಪ್ರಶ್ನಿಸಿದಾಗ, ತಾನು ಸೂಕ್ಷ್ಮಾಕಾರನಾಗಿ, ಕುಳಿತಿದ್ದೇನೆಂಬ ನಿಜವನ್ನು ಹೇಳದೆ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದ ದಣಿವಿನಿಂದ ಈ ಸ್ಥಿತಿ ಒದ ಗಿತು ಎಂದು, ಒಂದು ಬಗೆಯಿಂದ ಅಸತ್ಯವನ್ನೇ ಆಡುತ್ತಾನೆ. ಅರ್ಜುನನಿಗೊದ ಗಿದ ಗೊಂದಲಕ್ಕೆ ಇದೇ ಮುಖ್ಯ ಕಾರಣವೆಂದರೂ ಸರಿ.
5. ಇಬ್ಬರು ಭಕ್ತರ ಘರ್ಷಣೆಯನ್ನು ಸಮನ್ವಯಗೊಳಿಸಿ ಪ್ರಕರಣ ವನ್ನು ಸುಖಾಂತಗೊಳಿಸುವ ಕೃಷ್ಣನ ಪಾತ್ರಕ್ಕೆ, ಹನುಮಂತನ ಬಗೆಗೆ ಅಧಿಕ ವಾದ ಒಲವು ಕಾಣುವುದಿಲ್ಲ.