214 ಮಿಂಚು
ಹೌದು. ಪ್ರತಿ ಪಕ್ಷದ ನಾಯಕ. ಫೋನಿನ ಬಳಿ ಸಾರಿದಳು. “ಮಾತಾಜಿಗೆ ಪ್ರಣಾಮ, ಯೋಗಾಸನ ಆಯ್ತು ?" "ಏನು ತೀರ್ಮಾನಿಸಿದಿರಿ ?" “ಅವಸರದಲ್ಲಿದೀರೀಂತ ಕಾಣುತ್ತೆ, ಸಹಜ. ಪಾಪ ! ತೀರ್ಮಾನ ನಿನ್ನೇದೆ.
ನೀನು ಪಟ್ಟದಿಂದ ಇಳೀಬೇಕು. ಹೆಚ್ಚೆಂದರೆ ನಿನಗೊಂದು ಮಂತ್ರಿಸ್ಥಾನ ಕೊಟ್ಟೇನು, ಸಮಾಜ ಕಲ್ಯಾಣ ಖಾತೆ. ಆದೀತಾ ?"
ಸೌದಾಮಿನಿ ರಿಸೀವರನ್ನು ಕುಕ್ಕಿದಳು. ಅವಳ ಮನಸ್ಸು ಕಲ್ಲಾಯಿತು. ಶಾಂತಿ
ಮಾತುಕತೆ ಯಾರೊಂದಿಗೂ ಇಲ್ಲ. ಇನ್ನು ಸಮರ, ಸಮರವೊಂದೇ !
ಮುಖ್ಯ ಕಾರ್ಯದರ್ಶಿಯಿಂದ ಫೋನ್ ಬಂತು : "ರಾಜ್ಯಪಾಲರು ಇವತ್ತು ಸಂಜೆ ದಿಲ್ಲಿಗೊಂದು ವರದಿ ಕಳಿಸ್ತಾರಂತೆ." "ಅವನಿಗಿನ್ನೇನು ಕೆಲಸ ? ದೂತ ಬೇಕಾದರೆ ವಿಶ್ವಂಭರ ಇದ್ದಾನೆ. ಅವನ
ಕೈಲಿ ಕೊಟ್ಟರಾಯಿತು;"
"ಪರಿಸ್ಥಿತಿ ಬಿಗಡಾಯಿಸಿಲ್ಲ ಅಂತ ನನ್ನ ಅನಿಸಿಕೆ." "ನನಗೂ ಹಾಗೇ ತೋರುತ್ತೆ.ಒಂದು ಕೆಲಸವಾಗಬೇಕಲ್ಲ ಚೌಗುಲೆ ಸಾಹಿಬ್....
ಕಿಷ್ಕಿಂಧಾವಾಣಿ ವ್ಯಂಗ್ಯ ಚಿತ್ರ__"
"ಸೊಗಸಾಗಿದೆ." "ಅದರೆ ಸಂಪುಟದ ನನ್ನ ಆರು ಜನ ಮಂತ್ರಿಗಳಿಗೆ ಹಾಗೆ ಅನಿಸಿಲ್ಲ. ಇದು
ಅವಮಾನ ಅಂತ ಕೂಗಾಡಿದ್ರು. ಆ ಮಾಲಿಕನಿಗೆ ಸ್ವಲ್ಪ ತಿಳಿಯ ಹೇಳಿ. 'ವ್ಯಂಗ್ಯ ಚಿತ್ರದಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತ ಪಡಿಸುತ್ತೇವೆ' ಬೇಡ_ 'ಕ್ಷಮೆ ಕೋರುತ್ತೇವೆ' ಅಂತ ನಾಳೆಯ ಸಂಚಿಕೇಲಿ ಅಚ್ಚು ಹಾಕಲಿ. ಇದು ಬಹಳ ಅಗತ್ಯ. ಹಾಗಲ್ಲ. 'ನಿನ್ನೆಯ ವ್ಯಂಗ್ಯ ಚಿತ್ರ ಕೆಲಮಂತ್ರಿಗಳಿಗೆ ನೋವುಂಟು ಮಾಡಿದೆ ಎಂದು ತಿಳಿದು ಬಂದಿದೆ. ವ್ಯಂಗ್ಯ ಚಿತ್ರದಲ್ಲಿ ತಮಾಷೆಗೇ ಮಹತ್ವ: ಅಷ್ಟರಲ್ಲೂ ಮನಸ್ಸಿಗೆ ನೋವಾಗಿದ್ದರೆ ನಿಶ್ಯರ್ತ ಕ್ಷಮೆ ಕೋರುತ್ತೇವೆ' ಎಂದು ಹಾಕಿಸಿ, ನುಣುಚಿ ಕೊಂಡು ಪಾರಾಗೋದಕ್ಕೆ ಬಿಡಬೇಡಿ. ಮಂಜೂರಾಗಿರುವ ನಿವೇಶನವನ್ನು ಬೇಗನೆ ಬಿಡುಗಡೆ ಮಾಡ್ತೇವೆ ಅನ್ನಿ,"
"ಅವರನ್ನು ಖಂಡಿತ ಒಪ್ಪಿಸ್ತೇನೆ." ಮಾತಾಜಿ ಕಿಟಿಕಿಯ ಮೂಲಕ ಆಕಾಶ ನೋಡುತ್ತ ಯೋಚಿಸಿದಳು : ಮಾನವ ಶಕ್ತಿಗಿಂತ ಮಿಗಿಲಾದದ್ದು ದೈವೀ ಶಕ್ತಿ, ಅದು ತನ್ನ ಪಾಲಿಗೆ ಹೇರಳ
ವಾಗಿದೆ. ಹೀಗಿರುತ್ತ ಮಾನವಶಕ್ತಿಯ ಕೈ ಮೇಲಾದೀತೆ ? ಇಷ್ಟರಲ್ಲೂ ಹುಲು ಮಾನವರನ್ನು ಜಯಿಸಬಲ್ಲ ಶಕ್ತಿ ಇಲ್ಲವೆ ? ಇದೆ. ಯಾವುದು ? ಧನಶಕ್ತಿ.
ಭಾನುವಾರ ರಾಷ್ಟ್ರಪಕ್ಷದ ಶಾಸಕಾಂಗದ ಸಭೆ, ತಾನು ಅದರಲ್ಲಿ ಜಯಶೀಲೆ
ಯಾಗಲೇಬೇಕು. ಲಕ್ಷ್ಮೀಪತಿ_ವಿಶ್ವಂಭರರನ್ನು ಬಿಟ್ಟು, ಮಂತ್ರಿಗಳನ್ನೂ ಬಿಟ್ಟು,