ಈ ಪುಟವನ್ನು ಪ್ರಕಟಿಸಲಾಗಿದೆ










ಕಲಾಧೋರಣೆ
ಮತ್ತು ಆರಾಧನೆ

ಯಕ್ಷಗಾನವೆಂದು ನಾವಿಂದು ಕರೆಯುವ ಆಟ, ಬಯಲಾಟ ಕಲೆಯು ವಿವಿದ ಪ್ರಾಂತಗಳಲ್ಲಿ, ವಿವಿಧ ರೂಪಗಳಲ್ಲಿದ್ದು ಎಲ್ಲ ಕಡೆಗಳಲ್ಲಿ ಮೂಲತಃ ದೇವರ ಸೇವೆಯಾಗಿ, ಹರಕೆಯಾಗಿ, ರೂಢಿಗೆ ಬಂದದ್ದು. ಭೂತಾರಾಧನೆ, ನಾಗಾರಾಧನೆಗಳಂತೆ ಇದು ಆರಾಧನಾ ಕಲೆ ಅಲ್ಲ.. ಆದರೆ ಧಾರ್ಮಿಕ ಮತೀಯ ಕಲೆಯಾಗಿದ್ದು, ಅದೊಂದು ಪೂಜಾರೂಪವಾಗಿ ಪರಿಗಣಿತವಾಗಿದೆ.

ಪ್ರಾಯಶಃ ಭಕ್ತರಾದ ಕವಿ, ಕಲಾವಿದರಿಂದ ದೇವಾಲಯಗಳ ಜಾತ್ರೆ, ದೀಪೋತ್ಸವಗಳಂತಹ ಸಂದರ್ಭದಲ್ಲಿ ದೇವಾಲಯದ ಆಡಳಿತದ ಬೆಂಬಲದಿಂದ ಆಟಗಳು (ಅಂದರೆ - ಯಕ್ಷಗಾನ, ತೆರುಕೂತ್ತು, ರಾಮನಾಟ್ಟಂ, ವೀಥಿನಾಟಕ, ಕೃಷ್ಣನಾಟ್ಟಂ, ಅಂಖಿಯಾ ನಾಟ ಇತ್ಯಾದಿಗಳು) ಪ್ರದರ್ಶಿತವಾಗಿ, ಆ ಬಳಿಕ ಭಕ್ತರ ಹರಕೆಗಳಾಗಿ ಮುಂದುವರಿದಿರಬೇಕು. ಇದು ಸಾಮಾನ್ಯವಾಗಿ ಎಲ್ಲೆಡೆ ಹೀಗೆಯೆ ಇದೆ. ನಮ್ಮ ಯಕ್ಷಗಾನದ ಆಟಗಳಾದರೂ 1950ರ ತನಕ ಹೀಗೆಯೇ ಇದ್ದುವು. ಮುಂದೆ ಹರಕೆ ಆಟ (ಉಚಿತ) ಮತ್ತು ಡೇರೆ ಆಟ (ಟಿಕೇಟು ಪ್ರವೇಶ) ಎಂದು ಎರಡು ಬಗೆಯ ಸಂಘಟನೆಗಳಾದುವು.

• ಡಾ. ಎಂ. ಪ್ರಭಾಕರ ಜೋಶಿ