ಈ ಪುಟವನ್ನು ಪ್ರಕಟಿಸಲಾಗಿದೆ

ಮುಡಿ

89

-೭-

ತೆರುಕೂತ್ತಿನ ಕಥಾ ಪ್ರಸಂಗಗಳು ನಮ್ಮ ಬಯಲಾಟಗಳಂತೆ, ರಾಮಾಯಣ, ಭಾರತ, ಭಾಗವತಗಳ ಕತೆಗಳು, ತಮಿಳಿನ ಆ ಆಕಾವ್ಯಗಳನ್ನಾಧರಿಸಿ ರಚಿತವಾದ ಯಕ್ಷಗಾನಗಳು, ತೆರುಕೂತ್ತಿನ 'ಪ್ರಸಂಗ'ಗಳಾಗಿವೆ. ಅಲ್ಲದೆ, ಮೀನಾಕ್ಷಿ ಕಲ್ಯಾಣ, ವಳ್ಳಿ ಕಲ್ಯಾಣ ಮೊದಲಾದ ಸ್ಥಳೀಯ ವಿಶೇಷತೆ ಇರುವ ಕತೆಗಳೂ ಜನಪ್ರಿಯವಾಗಿದೆ. ದಲಿತ ಜನಾಂಗದವರು ಆಡುವ ಆಟಗಳಲ್ಲಿ, ಅವರ ಪುರಾಣಗಳ ಕತೆಗಳೂ ಪ್ರದರ್ಶಿಸಲ್ಪಡುತ್ತವೆ.
ಮಹಾಭಾರತ ಕತೆಗಳಿಗೆ ತೆರುಕೂತ್ತಿನಲ್ಲಿ ಪ್ರತ್ಯೇಕ ಮಹತ್ವವಿದೆ. ಮಹಾಕವಿ ವಿಲ್ಲು ಪುತ್ತೂರಾರ್ ಅವರ ತಮಿಳು ಭಾರತವನ್ನು ಆಧರಿಸಿದ ಎಂಟು ಕತೆಗಳನ್ನು, ಒಟ್ಟಾಗಿ ಆರಾಧನಾ ಸೇವೆಯಾಗಿ ಆಡುವ ಪದ್ಧತಿಯಿದೆ. ದೌಪದಿಯು ತಮಿಳುನಾಡಿನ ಒಂದು ಮುಖ್ಯ ಮಾತೃದೇವತೆ. ( ದ್ರೌಪದಿ ಅಮ್ಮನ್) ಅವಳ ಗೌರವಾರ್ಥ ಆಡುವ ಈ ಆಟಗಳು, ಭಯ ಭಕ್ತಿ ಕಲಾಪ್ರೇಮಗಳನ್ನು ಪ್ರೇರಿಸುತ್ತವೆ. ವಸ್ತ್ರಾಪಹಾರ, ಗದಾಪರ್ವಗಳು ವಿಶೇಷ ಪ್ರಾಶಸ್ತ್ಯದ ಕತೆಗಳು, ಬೊಂಬೆಯೊಂದನ್ನು ಬಳಸಿ ಊರುಭಂಗವನ್ನು ತೋರಿಸುತ್ತಾರೆ. ಕೊನೆಯಲ್ಲಿ ದ್ರೌಪದಿ ಆರಾಧನೆ ಜರಗುತ್ತದೆ. ತೆರುಕೂತ್ತು, ದ್ರೌಪದಿ ಸಂಪ್ರದಾಯ (Draupadi cult) ದ ಭಾಗವಾಗಿದ್ದು, ಯಾವುದೋ ಕಾಲಘಟ್ಟದಲ್ಲಿ ನಮ್ಮ ಹರಕೆ ಆಟಗಳಲ್ಲಿ ದೇವೀ ಮಹಾತ್ಮ್ಯಕ್ಕೆ ಪ್ರಾಧಾನ್ಯ ಬಂದ ಹಾಗೆಯೆ ಈ ಬೆಳವಣಿಗೆಯೂ ಆಗಿರಬೇಕು.
-

-೮-

ವಸ್ತು, ಶೈಲಿ, ವಿಧಾನಗಳಲ್ಲಿ ಶಾಸ್ತ್ರೀಯತೆಯ ಅಂಶಗಳನ್ನೂ, ಜಾನಪದೀಯ ಶಕ್ತಿಗಳನ್ನೂ ಹೊಂದಿ, ಜೀವಂತಿಕೆ, ರಭಸ, ಪರಿಣಾಮಗಳಿಂದ ರಂಜಕವಾಗಿರುವ ತೆರುಕೂತ್ತು ಬಯಲಾಟಗಳು ಅಸಾಧಾರಣ ಸಾಧ್ಯತೆಯನ್ನು ಹೊಂದಿವೆ. ಶಕ್ತಿಶಾಲಿಯಾಗಿವೆ. ಆದರೆ, ಪ್ರೋತ್ಸಾಹ, ಆರ್ಥಿಕ ಬಲ ಮತ್ತು ತಜ್ಞ ಮಾರ್ಗದರ್ಶನಗಳ ಕೊರತೆಯಿಂದ ಬಳಲುತ್ತಿದೆ. ಈ


ಮಾಹಿತಿ ಋಣ : ಪ್ರೊ. ಬಲವಂತ ಗಾರ್ಗಿ - Folk Theatre of India ಡಾ. ಶ್ರೀ ಕೃಷ್ಣ ಭಟ್ ಅರ್ತಿಕಜೆ - ತೆರುಕೂತ್ತು ಲೇಖನ (ಯಕ್ಷಗಾನ ಮಕರಂದ)

0 ಡಾ. ಎಂ. ಪ್ರಭಾಕರ ಜೋಶಿ