ಈ ಪುಟವನ್ನು ಪ್ರಕಟಿಸಲಾಗಿದೆ

ಮುಡಿ

67

ಶಾಸ್ತ್ರಾನುಸಾರಿ ರೂಪಗಳು ಎಂಬ ವಾದವಿದೆ. ಈ ವಾದವು ಪ್ರಬಲವಾಗಿದೆ. ದಿ| ಕುಕ್ಕಿಲ ಕೃಷ್ಣ ಭಟ್ಟ, ಕಪಿಲಾ ವಾತ್ಸ್ಯಯನ, ಪದ್ಮಾಸುಬ್ರಹ್ಮಣ್ಯಂ ಮೊದಲಾದ ಅನೇಕರು ಈ ವಾದವನ್ನು ಸಮರ್ಥಿಸಿದ್ದಾರೆ. "ಯಕ್ಷಗಾನವು, ಗುಪ್ತಕಾಲೀನ ಭಾರತದಲ್ಲಿ ಪಕ್ವತೆ ಪಡೆದು ರೂಪತಾಳಿದ ರಂಗಭೂಮಿಯ ಕವಲು, ಅಂದಿನ ಆ ಕಲಾರಂಗದ ಚದುರುವಿಕೆಗಳೇ ಭಾರತದಾದ್ಯಂತ ಮತ್ತು ಹೊರಗೂ, ರೂಪಾಂತರ ಬಯಲಾಟಗಳಾಗಿ ಉಳಿದಿವೆ” ಎಂಬ ವಾದವನ್ನು ವಿದ್ವಾನ್ ನಾಜಗಾರ ಗಂಗಾಧರ ಶಾಸ್ತ್ರಿಗಳು ಪ್ರಸ್ತಾವಿಸಿದ್ದಾರೆ.(ಇದೇ ಉಪನ್ಯಾಸದೊಂದಿಗೆ ನಡೆದ ಅವರ ಉಪನ್ಯಾಸದಲ್ಲಿ)
ಬಯಲಾಟಗಳು ಜಾನಪದವೇ, ಜಾನಪದವೆಂದರೆ, ಅಶಾಸ್ತ್ರೀಯ, ಕೀಳು ಎಂಬ ಅರ್ಥವೂ ಆಗಬೇಕಾಗಿಲ್ಲ. ಬಯಲಾಟದ ಸಂವೇದನೆ, ಪ್ರದರ್ಶನದ ಸಾರ್ವಜನಿಕಾಭಿ ಮುಖತೆ, ಅದರಲ್ಲಿರುವ ರಭಸ, ಬೊಬ್ಬೆ, ಗಲಾಟೆ, ಹಾಸ್ಯಗಳು, ಸಾಮಾನ್ಯರ ಭಾಗವಹಿಸುವಿಕೆಗಳಿಂದ ಅದು ಜನಪದೀಯವೇ ಎಂಬ ವಾದಕ್ಕೂ ಆಸ್ಪದವಿದೆ.
ಈ ಅಂಶಗಳನ್ನು ಗಮನಿಸಿಯೆ, ಡಾ. ಶಿವರಾಮ ಕಾರಂತರು "ಜಾನಪದ - ಶಾಸ್ತ್ರಿಯಗಳ ನಡುವೆ ಇರುವ ಕಲೆ" ಅಂದರು. ಅರೆ ಶಾಸ್ತ್ರೀಯ, ಸಾಂಪ್ರದಾಯಿಕ ಮೊದಲಾದ ಅಂಕಿತಗಳನ್ನು ಕೆಲವರು ಹೇಳಿದ್ದಾರೆ. ಜಾನಪದ ಎಂಬುದರ ವ್ಯಾಖ್ಯೆಯೂ ಬದಲಾಗುತ್ತಿದೆ. ವಿಶ್ವಜಾನಪದವು ಅಧ್ಯಯನ ನಿರ್ವಚನಗಳ ಹೊಸ ಮಜಲಿನಲ್ಲಿದೆ. ಸಂಸ್ಕೃತಿ ಸರ್ವಸ್ವವೂ ಒಂದರ್ಥದಲ್ಲಿ ಜಾನಪದವೇ. ಆದರೂ ಅದರ 'ಪರಿಷ್ಕಾರ'ವು ಶಾಸ್ತ್ರೀಯತೆ ಅನ್ನುವುದಾದರೆ, ಯಕ್ಷಗಾನದ ಒಟ್ಟು ರೂಪದಲ್ಲಿ ಶಾಸ್ತ್ರೀಯತೆ ಸ್ಪುಟವಾಗಿ ಇದೆ.
ಕಲೆಯು ಜಾನಪದದಿಂದ ಶಿಷ್ಟಕ್ಕೂ, ಶಿಷ್ಟದಿಂದ ಜಾನಪದಕ್ಕೂ ಹೋಗಬಹುದು. ಕಳೆದ ಕೆಲವು ದಶಕಗಳ ಯಕ್ಷಗಾನದ ಇತಿಹಾಸ ಇವೆರಡೂ ಪ್ರವೃತ್ತಿಗಳಿಗೆ ಸಾಕ್ಷಿ ಹೇಳುತ್ತಿದೆ. ವಾಣಿಜ್ಯಕರಣ ಮತ್ತು ವ್ಯವಸಾಯ
ಒಂದು ಕಲೆಯು ಕಸುಬಾಗಿ, ವಾಣಿಜ್ಯವಾಗಿ ಬೆಳೆದರೆ ಅದು ದೋಷವಲ್ಲ, ಗುಣವೇ ಸರಿ. ಕಲೆಯಾದರೂ, ವ್ಯವಸಾಯದಿಂದ ಬದುಕುತ್ತದೆ. ಕಲೆಯ ಪ್ರದರ್ಶನದ ನಿರಂತರತೆ ಉಳಿಯುವುದೂ, ಅದು ವ್ಯವಸಾಯವಾದಾಗ ಮಾತ್ರ. ಹಾಗೆಯೇ ಕಲೆಯನ್ನು ಜೀವನೋದ್ಯೋಗವಾಗಿ ನಂಬಿ, ಅದನ್ನು ಅವಲಂಬಿಸಿರುವ ಕಲಾವಿದ ವರ್ಗ ಇದ್ದರೆ, ಅದು ಕಲೆಯ ಮುಂದುವರಿಕೆಗೆ ಒಂದು ಬಗೆಯ ಗ್ಯಾರಂಟಿ ನೀಡುತ್ತದೆ. ಹಾಗೆಯೇ, ವ್ಯವಸಾಯಿ

0 ಡಾ. ಎಂ. ಪ್ರಭಾಕರ ಜೋಶಿ