ಈ ಪುಟವನ್ನು ಪ್ರಕಟಿಸಲಾಗಿದೆ

ವಿದ್ವತ್ತು ಮತ್ತು ಸಹಜತೆಗಳನ್ನು ಒಗ್ಗೂಡಿಸಿದ ಜೋಶಿಯವರು

alt=ಡಾ.ಕೆ. ಚಿನ್ನಪ್ಪ ಗೌಡ ಜಾನಪದ ವಿದ್ವಾಂಸರು, ಕುಲಪತಿಗಳು, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ
ಡಾ.ಕೆ. ಚಿನ್ನಪ್ಪ ಗೌಡ

ಜಾನಪದ ವಿದ್ವಾಂಸರು,
ಕುಲಪತಿಗಳು,
ಕರ್ನಾಟಕ
ಜಾನಪದ ವಿಶ್ವವಿದ್ಯಾನಿಲಯ



ಡಾ. ಎಂ. ಪ್ರಭಾಕರ ಜೋಶಿಯವರು ಯಕ್ಷಗಾನದ ಕೆಲವೇ ವಿಮರ್ಶಕ-ಕಲಾವಿದ-ತಜ್ಞರಲ್ಲಿ ಒಬ್ಬರು. ಆ ವಿಭಾಗದ ಅಗ್ರಗಣ್ಯರು. ಡಾ. ಶಿವರಾಮ ಕಾರಂತರ ಬಳಿಕ-ಯಕ್ಷಗಾನದ ಮುಖ್ಯ ವಿಮರ್ಶಕರು. ಚಿಕ್ಕವಯಸ್ಸಿನಲ್ಲಿ ಯಕ್ಷಗಾನವನ್ನು ಪ್ರವೇಶಿಸಿ, ಕಳೆದ ನಾಲ್ಕು ದಶಕಗಳಿಗೂ ಮಿಕ್ಕಿ ಅಗ್ರಪಂಕ್ತಿಯ ಅರ್ಥಧಾರಿಯೆನಿಸಿ, ಇಂದಿನ ಅತ್ಯಂತ ಪ್ರತಿಭಾವಂತ ಅರ್ಥಧಾರಿಯೆನಿಸಿದ್ದಾರೆ. ಜೋಶಿ ಅವರ ಗ್ರಾಮೀಣ ಹಿನ್ನೆಲೆ, ಕನ್ನಡ, ಸಂಸ್ಕೃತ, ಮರಾಠಿ, ತುಳು, ಕೊಂಕಣಿ, ಹಿಂದಿ, ಇಂಗ್ಲಿಷ್ ಭಾಷೆಗಳ ಜ್ಞಾನ, ಹಿರಿಯರ ಒಡನಾಟ, ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕನಾಗಿ ಸೇವೆ, ಸಮಾಜ ಕಾರ್ಯ-ಹೀಗೆ ವಿಶಿಷ್ಟವಾದ ಅವರ ಸಂಯುಕ್ತ ವ್ಯಕ್ತಿತ್ವ ಪ್ರವೃತ್ತಿಗಳು ಅವರ ಕಲೆಗಾರಿಕೆ, ಅಭಿವ್ಯಕ್ತಿ ಮತ್ತು ಬರಹಗಳನ್ನು ರೂಪಿಸಿವೆ. ಯಕ್ಷಗಾನದ ವಸ್ತು, ಪ್ರಸಂಗ, ಭಾಷೆಗಳಲ್ಲಿ ಅವರಿಗೆ ಬಲವಾದ ಹಿಡಿತ ಇದ್ದು, ಅತ್ಯುತ್ತಮ ಸಂವಹನ ಸಾಮರ್ಥ್ಯವಿದೆ. ಭಾವ, ಪ್ರತಿಕ್ರಿಯೆ, ತಿಳಿಹಾಸ್ಯದಿಂದ ಕೂಡಿದ ವಿದ್ವತ್ತು ಮತ್ತು ಸಹಜತೆಗಳನ್ನು ಒಗ್ಗೂಡಿಸಿರುವ ಜೋಶಿಯವರ ಮಾತಿನ ರೀತಿ ಅಸಾಧಾರಣವಾದದ್ದು. ಶ್ರೀಕೃಷ್ಣ, ಶ್ರೀರಾಮ, ಧರ್ಮರಾಜ, ಶೂರ್ಪನಖಿ, ಮಂಡೋದರಿ, ದೌಪದಿ, ಕರ್ಣ, ದುರೋಧನ, ವಾಲಿ, ಭೀಷ್ಮ, ಸುಧನ್ವ, ಅರ್ಜುನ, ವಿಭೀಷಣ, ಆಂಜನೇಯ, ಉತ್ತರ, ವೀರಮಣಿ, ಭೀಮ, ರಾವಣ,

ತಾಮ್ರಧ್ವಜ, ಬಲರಾಮ, ನಾರದ, ಭರತ-ಹೀಗೆ ತೀರ ಭಿನ್ನ ರೀತಿಯ ಪಾತ್ರಗಳನ್ನು ಸಲೀಸಾಗಿ ನಿರ್ವಹಿಸುವ

ಯಕ್ಷ ಪ್ರಭಾಕರ / 11