ಈ ಪುಟವನ್ನು ಪ್ರಕಟಿಸಲಾಗಿದೆ
ಕೃಷ್ಣಪ್ರಕಾಶ ಉಳಿತ್ತಾಯ 'ಈಶಾವಾಸ್ಯ', ಸದಾಶಿವ ದೇವಸ್ಥಾನದ ಬಳಿ, ಪೆರ್ಮಂಕಿ, ಮಂಗಳೂರು
ಕೃಷ್ಣಪ್ರಕಾಶ ಉಳಿತ್ತಾಯ
'ಈಶಾವಾಸ್ಯ',
ಸದಾಶಿವ ದೇವಸ್ಥಾನದ ಬಳಿ,
ಪೆರ್ಮಂಕಿ, ಮಂಗಳೂರು

ಯಕ್ಷಗಾನದ ಅಭಿಮಾನ 'ತದ್ದೂರೇ ತದಂತಿಕೇ' ಎಂಬ
ಡಾ. ಎಂ. ಪ್ರಭಾಕರ ಜೋಶಿಯವರಿಗೆ ಪಟ್ಲ ಪ್ರಶಸ್ತಿ

ಯಕ್ಷಗಾನ ಎಂಬ ತೋರಿಕೆಗೆ ಸೀಮಿತ ಪ್ರಾದೇಶಿಕ ವ್ಯಾಪ್ತಿಯನ್ನು ಹೊಂದಿದ ಅಪ್ಪಟ ದೇಸಿಕಲೆಯ ಸೀಮೆ, ಭಾರತೀಯ ದರ್ಶನ ಶಾಸ್ತ್ರಗಳು, ಸಂಗೀತ, ಜಾನಪದೀಯ ಮೌಲ್ಯ, ಪೌರಾಣಿಕ ಹಿನ್ನೆಲೆ ಇವನ್ನೆಲ್ಲಾ ಏಕಕಾಲದಲ್ಲಿ ತನ್ನ ಒಡಲಲ್ಲಿ ಇಟ್ಟು ಅವನ್ನು ವಾಚಿಕ, ಅಭಿನಯ, ನಾಟ್ಯ, ಸಂಗೀತ, ವಿಜೃಂಭಕ ಆಹಾರ್ಯಗಳಿಂದೆಲ್ಲಾ ಅಭಿವ್ಯಕ್ತಿಸುವ ಶ್ರೀಮಂತಿಕೆಯಿಂದ ಕೂಡಿದೆ. ಇದನ್ನೆಲ್ಲಾ ಗಮನದಲ್ಲಿರಿಸಿ ಡಾ.ಎಂ.ಪ್ರಭಾಕರ ಜೋಶಿಯವರ ನೆಲೆಯನ್ನು ಅರ್ಥವಿಸಿಕೊಳ್ಳಬೇಕು. ಡಾ. ಎಂ. ಪ್ರಭಾಕರ ಜೋಶಿಯವರು ತಾಳಮದ್ದಳೆಯ ಅರ್ಥಧಾರಿ, ವಿಮರ್ಶಕ ಮತ್ತು ಬರಹಗಾರರು ಹೀಗೆಲ್ಲ ಮಾತ್ರವೇ ಕಂಡರೆ ಅವರ ಕುರಿತಾಗಿ ಒಟ್ಟು ರೂಪ-ನಿರೂಪಣೆ ಮಾಡಿದಂತಾಗದು. ಹಾಗಾಗಿ ತಾತ್ವಿಕವಾಗಿ ಅವರನ್ನು ಗಮನಿಸ ಬೇಕಾಗುತ್ತದೆ. ಹಾಗಾದಾಗ ನಾವು ಯಕ್ಷಗಾನವನ್ನೂ ಅರ್ಥೈಸಿಕೊಂಡಂತಾಗುತ್ತದೆ. ಡಾ. ಜೋಶಿಯವರನ್ನು ಅರ್ಥಮಾಡಿಕೊಳ್ಳುವುದೂ ಒಂದೇ ಮತ್ತು ಯಕ್ಷಗಾನವನ್ನು ಅರ್ಥಮಾಡಿಕೊಳ್ಳುವುದೂ ಒಂದೇ. ಈ ಬರಹ ಡಾ.ಜೋಶಿಯವರ ಕುರಿತು ಎಲ್ಲವನ್ನು ಹೇಳಿದಂತೆ ಆಗುದಿಲ್ಲವೆಂಬ ಎಂಬ ಜಾಗ್ರತೆಯೂ ಇದೆ. ಡಾ. ಪ್ರಭಾಕರ ಜೋಶಿಯವರು ಯಕ್ಷಗಾನವನ್ನು ಯಾವತ್ತೂ obsessive ಆಗಿ ಕಂಡವರಲ್ಲ. ಅವರೇ ಹೇಳುವಂತೆ ತದ್ದೂರೇ ತದಂತಿಕೆ' ಎಂಬ ನಿಷ್ಠೆಯಿಂದ ಬರೆದವರಿವರು. ಎಂದೂ ಸಹೃದಯತೆಯನ್ನು

ಬಿಡದ ಬರಹ ಮತ್ತು ಚಿಂತನೆಗಳು ಯಕ್ಷಗಾನ ಕ್ಷೇತ್ರದ ಒಳಗಿದ್ದೂ ಹೊರಗಿನವರಂತೆ ಆರೋಗ್ಯಪೂರ್ಣ

ಯಕ್ಷ ಪ್ರಭಾಕರ / 29