ಈ ಪುಟವನ್ನು ಪ್ರಕಟಿಸಲಾಗಿದೆ

ಅಂತರವಿರಿಸಿ ಗಮನಿಸುವವರು. ಭಾರತೀಯ ದರ್ಶನ ಶಾಸ್ತ್ರ, ಪೌರಾಣಿಕ ಕತೆಗಳ ಮೌಲ್ಯ ಕಲೌಚಿತ್ಯ, ಕಲಾ ಸೌಂದರ್ಯ ಮತ್ತು ಇವೆಲ್ಲದರ 'ಜತೆ ಜತೆಗೇ ಸಾಗುವ ಭಾರತೀಯ ಸಂವೇದನೆ ಇದರ ಒಟ್ಟು ಪರಿಪಾಕ ವಾಗಿ ಡಾ. ಪ್ರಭಾಕರ ಜೋಶಿಯವರ ಚಿಂತನೆಗಳು ತಮ್ಮ ಮೊದಲ ಕೃತಿ ಜಾಗರದಿಂದಲೇ ತೊಡಗಿದೆ. ಅವರ ಈಚಿನ ಕೃತಿಯಲ್ಲಿವರೆಗೂ ಈ ಚಿಂತನೆಗಳಲ್ಲಿ ಸಡಿಲತೆ ಕಂಡುಬಂದಿಲ್ಲ.
ಹಾಗೆಂದು ಡಾ.ಜೋಶಿಯವರ ನಿಲುವುಗಳಲ್ಲಿ ಕಠೋರ ಸಂಪ್ರದಾಯ ಶರಣತೆಯೂ ಇಲ್ಲ. ಕಾಲ-ದೇಶ ಬದ್ಧವಾಗಿ ಜೀವನದ ಚಲನೆ ಸಾಗಬೇಕಾದ ಅನಿವಾರ್ಯತೆಯ ಸತ್ಯ ಇವರಿಗೆ ಗೊತ್ತಿದೆ. ಹಾಗೆಂದು ತಮ್ಮ ಚಿಂತನೆಯಲ್ಲಿ ಯಕ್ಷಗಾನ ವಿಷಯಕವಾದ ಸಂವೇದನೆ ಗಳು ಮೂಲ ಪ್ರಮೇಯವನ್ನು ಎಂದೂ ಭಂಗಿಸಲಿಲ್ಲ.
ಕೇವಲ ತಾಳಮದ್ದಳೆ- ಯಕ್ಷಗಾನ ಕ್ಷೇತ್ರಕ್ಕೆ ಡಾ.ಜೋಶಿಯವರನ್ನು ಸೀಮಿತಗೊಳಿಸಿದರೆ ಅದು ನಮ್ಮ ಅಪ್ರಬುದ್ಧತೆಯಾಗುತ್ತದೆ. ನಿಜವೇ, ಯಕ್ಷಗಾನ-ತಾಳಮದ್ದಳೆಯ ಮಯಾವಿಲಾಸದ ಕದಂಬ ಬಾಹುಗಳ ನಡುವಿಂದ ಹೊರಬಂದಿದ್ದರೆ ಡಾ. ಪ್ರಭಾಕರ ಜೋಶಿಯವರು ಇಂದು ವಿಶ್ವಮಾನ್ಯ ಚಿಂತಕರ ಸಾಲಲ್ಲಿರುತ್ತಾ ಇದ್ದರು.
ಡಾ. ಪ್ರಭಾಕರ ಜೋಶಿ ಯಕ್ಷಗಾನ ಕ್ಷೇತ್ರದ ಪ್ರಮುಖ 'ಧ್ವನಿ'. ಇವರ ಅಧ್ಯಯನ ವ್ಯವಸಾಯ ತತ್ವಶಾಸ್ತ್ರ ಕ್ಷೇತ್ರಕ್ಕೂ ಹಬ್ಬಿದೆ ಎಂಬುದು ಸರ್ವವಿದಿತ. ಅದರಲ್ಲೂ ಭಾರತೀಯ ತತ್ವಶಾಸ್ತ್ರದ ಕುರಿತಂತೆ ಒಂದು

ರೀತಿಯ ತೀವ್ರಾಸಕ್ತಿ ಮತ್ತು ತತ್ವಶಾಸ್ತ್ರದ ಕುರಿತಂತೆ ಒಂದು ಶಬ್ದ ನಾವಾಡಿದರೆ ತಾಸುಗಟ್ಟಲೆ ಅದರ ಕುರಿತು ಮಾತಾಡುವ ಉಮೇದು ಡಾ.ಜೋಶಿಯವರದ್ದು. ಇದು ನನ್ನ ವೈಯಕ್ತಿಕ ಅನುಭವ. ಅವರ ಮಾತು ಚುಟುಕು. ವಿಷಯದ ಆಳ ಅಗಾಧ, ಮದ್ದಿನ ಗುಳಿಗೆಗಳಂತಹಾ ಮಾತು. ಅದೇ ತರಹವೇ ಅವರ ಬರಹವೂ. ಸೂತ್ರರೂಪದಂತೆ. ಎಷ್ಟು ಬೇಕೋ ಅಷ್ಟು. No nonsense.
'ಡಾ.ಪ್ರಭಾಕರ ಜೋಶಿಯವರು ಯಕ್ಷಗಾನ ಕಂಡ ಅತ್ಯುತ್ಕೃಷ್ಟ ದರ್ಜೆಯ ಕಲಾವಿಮರ್ಶಕರು. ಅವರು ವಿಮರ್ಶೆಯ ಕುರಿತು ಹೇಳುತ್ತಾ: ವಿಮರ್ಶೆಯು ಕಲಾ ರಸಿಕನಿಗೂ ಕಥೆಗೂ ಹೊಸ ಪ್ರಚೋದನೆ ನೀಡಬೇಕು... ನಿಲುಮೆಗಳನ್ನು ತಳೆಯುವ ಅಥವಾ ನಿರಾಕರಿಸುವ, ಭಿನ್ನಾಭಿಪ್ರಾಯಗಳನ್ನು, ಚರ್ಚೆಯನ್ನು ಪ್ರಚೋದಿಸುವುದೂ ವಿಮರ್ಶೆಯ ಒಂದು ಕೆಲಸವೇ ಆಗಿದೆ.'
ಒಬ್ಬ ಅರ್ಥಧಾರಿಯಾಗಿಯೂ ಸೂಕ್ಷ್ಮ ವಿಮರ್ಶಕನಾಗಿಯೂ ಇರುವ ಜೋಶಿಯವರ ಇಲ್ಲಿ ಉಲ್ಲೇಖಿಸಬೇಕಾದ ಜೋಶಿಯವರ ಮಾತು ಈ ಕ್ಷೇತ್ರದ ವಿಮರ್ಶೆಯ ತಾತ್ವಿಕ ವಿವೇಚನೆ ಸಾಕಷ್ಟು ಆಗಿಲ್ಲ. ಹಾಗಾಗಿ ಯಕ್ಷಗಾನ ವಿಮರ್ಶಾ ಶಾಸ್ತ್ರ ಬೆಳೆದಿಲ್ಲ. ಅದು ಬೆಳೆದಿದ್ದರೆ ಯಕ್ಷಗಾನ ಇಂದು ಇರುವಂತೆ ಇರುತ್ತಿರಲಿಲ್ಲ. ಎಷ್ಟೋ ಉತ್ತಮ ವಾಗಿರುತ್ತಿತ್ತು. ಯಕ್ಷಗಾನ ರಂಗಕ್ಕೆ ಬೇಕಾದ ಮಾರ್ಗದರ್ಶನ ಒದಗಿಸಲು ವಿಮರ್ಶಕರು ವಿಫಲರಾಗಿದ್ದಾರೆ. ಈ ಸೋಲನ್ನು ನಾವು ಒಪ್ಪಿಕೊಳ್ಳಬೇಕು.

30 / ಯಕ್ಷ ಪ್ರಭಾಕರ