ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ೧o ವಾದಿಗಳಾಗಬೇಕು? ನಮಗೇನು ಗೊತ್ತು? ಉಪಾ:- ಇರಲಿ, ರಮಾನಂದನು ನಾಟಕಶಾಲೆಗೆ ಹೋಗು ತಿದ್ದು ದಾದರೂ ನಿಜವಷ್ಟೆ ? ಸುಮುಖ:- ಪೂಜ್ಯರೆ! ಮೇಲೆ ಹೇಳಿರುವುದು ನಿಜವಾದಾ ಗಲೇ ಇದೂ ನಿಜವಾಗಬೇಕು, ಅಲ್ಲಿಯವರೆಗೆ ಇವೆಲ್ಲ ವೂ ಸುಳ್ಳೆ 5 ಸರಿ, ರಮಾನಂದನು ಅಗ್ನಿಯಂತೆ ಪರಮ ಪವಿತ್ರ ಮೂರ್ತಿ, ಆತ ನನ್ನು ಮತ್ತಾವ ದುರ್ವ್ಯಸನರೋಗಗಳು ಮುಟ್ಟುವಂತಿಲ್ಲ, ಇದರ ನಿಜಾಂಶವು ಪರ್ಯವಸಾನದಲ್ಲಿ ತಿಳಿದೇ ತಿಳಿವುದು. ಉಪಾ:- ಪರ್ಯವಸಾನವು ಮತ್ತಾವಾಗ? ಸುಮುಖ: ರವಾನಂದನು ಬಂದ ಬಳಿಕ. 10 ಉಪಾ:- ಅದೂ ಆಗಲಿ. ಆದರೆ, ಈಗಲಾದರೂ ನಿಜವನ್ನು ಹೇಳಿರಿ, ಇಲ್ಲಿ ನೀವು ಆರುಮಂದಿಗಳಲ್ಲದೆ ಮತ್ತಾರೂ ಇಲ್ಲ. ನೀವಲ್ಲದೆ ಇಲ್ಲಿಗೆ ಹೊರಗಿನವರಾರೂ ಬಂದಿಲ್ಲ, ನಿನ್ನೆ ರಾತ್ರಿಯಲ್ಲಿ ನಾನು ಇಲ್ಲಿ ನನ್ನ ಕೈ ಪೆಟ್ಟಿಗೆಯಲ್ಲಿ ಟ್ಟಿದ್ದ ಕೈ ಬಳೆ, ಮುದ್ರೆಗಳು ಈಗ ಇಲ್ಲದೆ ಹೋಗಿರಲು ಕಾರಣವೇನು ? ಕದ್ದವರಾರು ? ಕಂಡವ 15 ರಾರು ? ( ಸೌಮ್ಯ-ಯುವಾನರು ಮೌನದಿಂದ ತಲೆವಾಗಿ ನಿಲ್ಲುವರು ) ಸುಮುಖ:- (ಮೆಲ್ಲನೆ) ಇದರ ವಿಚಾರವೂ ಕಳಿಂಗ ಮತ್ತು ರವಿವರ್ಮರಿಗೆ ಸ್ವಲ್ಪ ಮಟ್ಟಿಗಾದರೂ ತಿಳಿದಿರಬೇಕು. ರವಿ:- ನನಗೇನು ಗೊತ್ತು? ನಾನೇನು ಬಲ್ಲೆ ನು? 20 ಉಪಾ:- ಏನಯ್ಯಾ, ಕಳಿಂಗ! ನಿನಗೆಷ್ಟರಮಟ್ಟಿಗೆ ತಿಳಿದಿದೆ? ಕಳಿಂಗ:- ನಾನು ಸ್ವಲ್ಪ ಮಾತ್ರ ಬಲ್ಲೆ ನು. ಉಪಾ:- ಏನು ಬಲ್ಲೆ? ಕಳಿಂಗ:- ನಿನ್ನೆ ರಾತ್ರಿ, ನಾವು ತಮ್ಮಿಂದ ಅಪ್ಪಣೆ ಹೊಂದಿ, ಮಂದಿರಕ್ಕೆ ಹೋಗುತ್ತಿದ್ದಾಗ, ದಾರಿಯಲ್ಲಿ ರಮಾನಂದನ ನೃತ್ಯನು 25