೯೦
ರಾಮಚಂದ್ರಚರಿತಪುರಾಣಂ
ಗಳಿಂದರ್ಚಿಸಿ ಜನಕಂ ಕತಿಪಯ ಪ್ರಯಾಣಂಗಳಿಂ ಕಳಿಪುವುದುಂ ರಾಮಲಕ್ಷ್ಮಣ
ರಯೋಧ್ಯೆಯಂ ಪೊಕ್ಕು ಸುಖದಿನಿರ್ಪುದುಮೊಂದುದಿವಸಂ--
ಕ೦||ಜನಕಂ ತನುಜೆಯನಿತ್ತಂ
ಮನುವಂಶ ಲಲಾಮನಪ್ಪ ರಾಮಂಗೆಂಬೀ||
ಜನವಾರ್ತೆಗೇಳ್ದು ನಾರದ
ಮುನಿಗಾದುದು ನೋಳ್ಪಿ ಕೌತುಕಂ ಜಾನಕಿಯಂ||೮೦||
ಉ|| ಪೆಂಡಿರ ಲೀಲೆಯಂ ಯತಿಗೆ ನೋಳ್ಪುದು ಪಾಳಿಯೆ ಮುಂಜಿ ಕಚ್ಚಟಂ|
ಗುಂಡಿಗೆ ಬೋಳಮಂಡೆ ಮಣಿದ೦ಡಮಿವೀಕ್ಷಣ ಸೌಖ್ಯ ಹೇತುವೇ||
ಕಂಡೊಡೆ ಬಾಲೆಯರ್ ತಮಗೆ ಪೇಸದೆ ಮಾಣ್ಬರೆ ನಾರದಂ ಮರು|
ಳ್ಗೊಂಡವೊಲಾಗಸಕ್ಕೆ ನೆಗೆದಂ ವೃಥೆಯಲ್ತೆ ಸರಾಗ ಸಂಯಮಂ||೮೧||
ಅಂತು ನಾರದಂ ಗಗನವೀಧಿಯಿಂ ಮಿಥಿಲೆಗೆ ಬಂದು ಕನ್ನೆವಾಡದ ಬಾಗಿ
ಲ್ವಡಮಂ ಪುಗುವಾಗಳ್--
ಕಂ||ಬಿರಿಮುಗುಳಿಂ ತುರುಗಿದ ತಾ
ವರೆಗೊಳದೊಳಗಾಡುವ೦ಚೆವೆಣ್ಣನದೇಂ ಚ||
ಪ್ಪರಿಸಿದಳೊ ಸೀತೆ ಕನ್ಯಾ
ಪರೀತ ವೈಡೂರ್ಯ ರತ್ನಮಯವೇದಿಕೆಯೊಳ್ ||೮೨||
ಆಗಳದೃಷ್ಟಪೂರ್ವಮಂ ನಾರದನ ವಿಕೃತಾಕಾರಮಂ ಕಂಡು ತರುಣಿ ಹರಿಣಿ
ಯಂತೆ ಬೆರ್ಚಿ ಬಿರುತೋಡುವುದುಂ--
ಕಂ||ತತ್ತರುಣಿಯ ಬಳಿವಳಿಯಂ
ಪತ್ತಿ ಹಿತಾಹಿತ ವಿವೇಕ ವಿಕಲಂ ಪಳಿಯಂ||
ಪೆತ್ತಾಮುನಿಪಂ ಭ್ರಾಮಕ
ದತ್ತೆಳಸುವ ಪಚ್ಚೆಗರ್ಬುನಕ್ಕೆಣೆಯಾದಂ||೮೩||
ನಾರದನೇಂ ತಳೆದನೊ ಕ
ನ್ಯಾರತ್ನಮನೆಳಸಿ ಪರಿವ ಪರಿಣತಿಯಿಂ ನಿ||
ಸ್ವಾರಮನಂ ನೀಲ ಶಲಾ
ಕಾರತ್ನಮನೆಳಸಿ ಪರಿವ ತೃಣ ಪರಿಣತಿಯಂ||೮೪||
ಅಂತು ಬಳಿವಳಿಯನುಳಿಯದೆಯ್ತರ್ಪುದುಂ--