ಅನುಬಂಧ
ಉಪನ್ಯಾಸದ ಕೊನೆಯಲ್ಲಿ ನಡೆದ
ಪ್ರಶೋತ್ತರ-ಚರ್ಚೆಯ ಸಾರಾಂಶ
• ರಾವಣನಂತಹ ಪಾತ್ರಗಳ ಮಾತುಗಳಲ್ಲಿ, ಜನಸಾಮಾನ್ಯರ ಅನಿಸಿಕೆಗಳನ್ನು
ಒಡಮೂಡಿಸುವುದು ಅರ್ಥಧಾರಿಯ ವಾಕ್ಸ್ವಾತಂತ್ರದ ಸಾಕ್ಷಿಯನ್ನ
ಬಹುದ?
ಉ. : ಹೌದು. ಇದೇ ಈ ಕಲೆಯ ಹೆಚ್ಚುಗಾರಿಕೆ, ಕಲಾವಿದನು ಜನ
ಸಾಮಾನ್ಯರ ಮನಸ್ಸಿನ ಪ್ರತಿನಿಧಿಯಾಗಿರುವುದು ಕೂಡ ಇದಕ್ಕೆ ಕಾರಣ.
• ಪ್ರೇಕ್ಷಕರಿಂದ ಅಭಿಪ್ರಾಯ ಸಂಗ್ರಹ (feedback)ದಿಂದ ಅರ್ಥದಾರಿಯ
ಸಂವಹನ ಕಲೆ ವರ್ಧಿಸುವ ಸಾಧ್ಯತೆಯುಂಟೆ?
ಉ. : ನಿಜ. ಇದು ಬಹಳ ಮುಖ್ಯ. ಜನರಿಂದ ಬರುವ ಮೌಖಿಕ
ವಿಮರ್ಶೆ ಕಲಾವಿದನ ಸಂವಹನ, ಚಿತ್ರಣ, ಅಭಿವ್ಯಕ್ತಿ ಎಲ್ಲವನ್ನೂ
ರೂಪಿಸಲು ಸಹಾಯಮಾಡುತ್ತದೆ. ಇದು ಅನೌಪಚಾರಿಕವಾಗಿ ಆಗುತ್ತಿದೆ.
ಆದರೆ, ವ್ಯವಸ್ಥಿತವಾಗಿ ಸಾಕಷ್ಟು ಆಗಿಲ್ಲ. ಜನರ ಅಭಿಪ್ರಾಯಗಳು
ಕಲಾವಿದರಿಗೆ ಸರಿಯಾಗಿ ತಲಪದಿರುವುದೂ, ಸಾಕಷ್ಟು ಪ್ರದರ್ಶನ
ವಿಮರ್ಶೆ ಆಗದಿರುವುದೂ, ಈ ಕಲೆಯ ಹಲವು ಸಮಸ್ಯೆಗಳಿಗೆ ಕಾರಣ.
• ತಾಳಮದ್ದಳೆಯಲ್ಲಿ ಐತಿಹಾಸಿಕ, ಸಾಮಾಜಿಕ ಆಖ್ಯಾನಗಳು ಏಕೆ
ಸೇರುತ್ತಿಲ್ಲ?
ಉ. : ಈ ಸಾಧ್ಯತೆ ಪರಿಶೀಲನಾರ್ಹ. ಹಳೆಯ ಪ್ರಸಂಗಗಳಲ್ಲೂ ಕೂಡ
ಬಹುಪಾಲು, ಈ ರಂಗಕ್ಕೆ ಬಂದಿಲ್ಲ. ಕೆಲವೇ ಆಖ್ಯಾನಗಳು ಪುನರಾ
ವರ್ತನೆಗೊಳ್ಳುತ್ತಿವೆ.
• ತಾಳಮದ್ದಳೆಯಲ್ಲಿ ಹಳೆಯ ಮೌಲ್ಯದ ಹೊಸ ಅರ್ಥೈಸುವಿಕೆ ಮಾಡು ವಂತೆ, ಒಂದು ಹೆಜ್ಜೆ ಮುಂದಿರಿಸಿ, ಹಳೆಯ ಮೌಲ್ಯಗಳನ್ನು ತಿರಸ್ಕರಿಸಲೂ ಸ್ವಾತಂತ್ರ್ಯವಿಲ್ಲವೆ?
ಉ. : ಒಂದು ಪ್ರಮಾಣದಲ್ಲಿ ಇದು ಸಾಧ್ಯ. ಇದು ಈ ರಂಗದಲ್ಲಿ ಆಗುತ್ತಲೇ ಇದೆ. ಆದರೆ, ಇದಕ್ಕೆ ರಂಗಸಂಪ್ರದಾಯದ, ಕಥಾನಕದ ಮಿತಿಗಳೂ ಇವೆ.