ಈ ಪುಟವನ್ನು ಪ್ರಕಟಿಸಲಾಗಿದೆ

ಅರ್ಥಗಾರಿಕೆಯಲ್ಲಿ ಐತಿಹಾಸಿಕ ಆಯಾಮ' ಎಂಬ ಕುರಿತು ಮಾತನಾಡಿದರು. ಜೋಷಿಯವರದೊಂದು ವಿಭಿನ್ನ ಶೈಲಿ, ದೀರ್ಘಮಾತು ಅವರ ಪ್ರವೃತ್ತಿಯಲ್ಲ. ಅವರ ಅರ್ಥ ಸಂಕ್ಷಿಪ್ತ, ಸರಳ, ವೈನೋದಿಕ. ಅದು ಗತಿಬೇಧ. ಶೃತಿಲೀನ ಅರ್ಥವಲ್ಲ. ಸಂವಾದಕ್ಕೆ ಅವರ ಪ್ರಾಶಸ್ಯ, ದೇರಾಜೆ ಸೀತಾರಾಮಯ್ಯನವರು ನಿವೃತ್ತರಾದ ಕಾಲ. ಹಲವು ಹಿರಿಯರು ಸಿದ್ಧಗೊಂಡ ಮಾದರಿಯಲ್ಲಿ ಸಾಗುತ್ತಿದ್ದಾಗ ಆ ಜಾಡನ್ನು ತೊರೆದು ಬೇರೆಯೇ ಆದ ಹಾದಿಯನ್ನು ತುಳಿದರು. ಕಲ್ಲಿನೆಡೆಯ ಬೀಜ ಗಿಡವಾಗಿ ಬೆಳೆದು ಬೆಳಕಿನೆಡೆಗೆ ಮುಖಮಾಡುವಂತೆ ಬೆಳೆದು ನಿಂತರು.

ಅರ್ಥಗಾರಿಕೆಗೆ ಶೃತಿ ಬೇಕೋ ಬೇಡವೋ ಎಂಬಂತಹ ವಿಚಾರದಲ್ಲಿ ಅವರು ಅದು ಅಸಾಧ್ಯವೆಂದು ವಾದ ಮಂಡಿಸಿದ್ದಿದೆ. ಅವರು ಒಳ್ಳೆಯ ತರ್ಕಪಟುವಾದರೂ ಪಟ್ಟು ಹಿಡಿದು ಎದುರಿನವನ ಬಾಯಿ ಮುಚ್ಚಿಸುವವರಲ್ಲ. ಜಗಳಕಾಯುವವರಲ್ಲ. ಅವರ ಅರ್ಥಗಾರಿಕೆಯಲ್ಲಿ ಭಾವುಕತೆಯಿಲ್ಲವಾದರೂ ಅವರು ಬೇಡಿಕೆ ಕಳಕೊಳ್ಳಲಿಲ್ಲ. ಅವರ ಅರ್ಥ ಅನುಸರಣೀಯವಾಗಿದೆಯೇ ಹೊರತು ಅನುಕರಣೀಯವಾಗಲಿಲ್ಲವೆಂದು ಅವರ ಅರ್ಥಕ್ಕೆ ಒಳನೋಟ ಬೀರಿದರು.

ವಿಚಾರಗೋಷ್ಠಿಯ ಅಧ್ಯಕ್ಷರಾದ ಎಂ.ಎ.ಹೆಗಡೆಯವರು ಜೋಷಿಯವರು ಕೈಹಾಕದಿದ್ದರೆ ತಾನು ಆಧ್ಯಾತ್ಮಿಕ ಬರವಣಿಗೆಗೆ ತೊಡಗುತ್ತಿರಲಿಲ್ಲ. ತಾನು ಸಂಸ್ಕೃತ ವಿದ್ವಾಂಸನೆಂದು ಗೊತ್ತಾದುದು ಜೋಷಿಯವರಿಂದಾಗಿಯೇ. ಜೋಷಿ ಸರ್ವ ಭಕ್ಷಕ. ಅವರಿಲ್ಲದೆ ಯಕ್ಷಗಾನ ಕಮ್ಮಟವಿಲ್ಲ. ಕಾರ್ಯ ಕಲಾಪಗಳಿಲ್ಲ. ಅವರಿಗೆ ಹಿಂದೆ ಶಿರಸಿಯಲ್ಲಿ ಸನ್ಮಾನವಾಗಿದೆ. ಬೆಂಗಳೂರಿನಲ್ಲಾಗಿದೆ. ಈಗ ಮೈಸೂರಿನಲ್ಲಾಗುತ್ತಿದೆ. ಆದರೆ ಅವರ ಸ್ವಂತ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ದೊಡ್ಡ ಪ್ರಮಾಣದ ಸನ್ಮಾನವಾಗಿಲ್ಲ. ಅದು ಶೀಘ್ರದಲ್ಲೇ ಆಗಬೇಕಿದೆಯೆಂದರು. ಅಭಿನಂದನ ಭಾಷಣಕಾರರಾದ ಅರ್ಥಧಾರಿ, ಪ್ರವಚನಕಾರ ಉಜಿರೆ ಅಶೋಕ ಭಟ್ಟರು ಅರ್ಥ ಆಕ್ರಮಣವಲ್ಲ. ಸಂಕ್ರಮಣ. ಅವರು ಬಿಟ್ಟುಕೊಡುವ, ಕೊಟ್ಟುಬಿಡುವ ಏಕೈಕ ಅರ್ಥಧಾರಿ. ಅವರು ವಾದದ ಸಂದರ್ಭದಲ್ಲಿ ಇದಿರಾಳಿಗೆ ಬಿಟ್ಟುಕೊಟ್ಟಾರು. ಉಳಿದವರಿಗೆ ಅವಕಾಶವನ್ನು ಕೊಟ್ಟುಬಿಡುವ ಉದಾರಿ, ತಾನೊಬ್ಬನೇ ಮೆರೆಯಬೇಕೆಂಬ ಸ್ವಾರ್ಥ ಅವರಿಗಿಲ್ಲ. ಮಾಳದ ಸಾಂಸ್ಕೃತಿಕ ನೆಲದಲ್ಲಿ ಸಾಹಿತ್ಯ ಪ್ರಜ್ಞೆ, ಆಧ್ಯಾತ್ಮಿಕ ಪ್ರಜ್ಞೆ, ಸಂಗೀತ ಪ್ರಜ್ಞೆಗಳನ್ನು ಮೈಗೂಡಿಸಿಕೊಂಡವರವರು. ಬೆಸೆಂಟ್ ಕಾಲೇಜಿನಲ್ಲಿ ಅವರು ಸಲ್ಲಿಸಿದ 32 ವರ್ಷಗಳ ಸೇವೆ ಅನುಪಮ.

ಕಪ್ಪಗಿನ ಮೂರ್ತಿಗೆ ಬೆಳ್ಳಗಿನ ಫರದೆಯಿದ್ದಂತೆ ಅವರು. ಅಂದರೆ ಬೆಳಕಿಗೆ ಬಾರದ ಎಷ್ಟೋ ಕಲಾವಿದರು ಕಾಣಿಸಿಕೊಳ್ಳುವಂತೆ ಅವರು ಮಾಡಿದ್ದಾರೆ. ಹಳೆಯ ತಲೆಮಾರಿನಿಂದ ಈ ತಲೆಮಾರಿನ ಎಲ್ಲರೊಂದಿಗೂ ಜೋಷಿ ಹೊಂದಿಕೊಳ್ಳಬಲ್ಲರು. ಅವರು ಮಾಡುವ ಸುಗ್ರೀವ, ಅರ್ಜುನ, ಶೂರ್ಪಣಖೆಗಳಂತಹ ಹಲವು ಪಾತ್ರಗಳನ್ನು ಬೇರೆಯವರು ತುಂಬಲು ಸಾಧ್ಯವಿಲ್ಲ. ಪ್ರತ್ಯುತ್ಪನ್ನ ಮತಿತ್ವದ ವಿಶಿಷ್ಟ ಅರ್ಥದಾರಿ

ವಾಗರ್ಥ ಗೌರವ / 12