ಈ ಪುಟವನ್ನು ಪ್ರಕಟಿಸಲಾಗಿದೆ

ಸಾಂಸ್ಕೃತಿಕ ರಾಯಭಾರಿ

ಡಾ. ಎಂ. ಪ್ರಭಾಕರ ಜೋಶಿ

ವಿದ್ವಾನ್ ಗ.ನಾ. ಭಟ್ಟ

“ಬಹುಜ್ಜತಾ ವ್ಯುತ್ಪತ್ತಿಃ” “ಅನೇಕ ವಿಷಯಗಳನ್ನು ತಿಳಿದಿರುವುದೇ ವ್ಯುತ್ಪತಿಯೆಂದು ಕಾವ್ಯಮೀಮಾಂಸಾಕಾರ ರಾಜಶೇಖರ ಹೇಳುತ್ತಾನೆ. ಇದನ್ನೇ ಅಭಿನವಗುಪ್ತ “ವ್ಯುತ್ಪತ್ತಿ ತದುಪಯೋಗಿಸಮಸ್ತವಸ್ತು ಪೌರ್ವಾಪರ್ಯಪರಾಮರ್ಶಕೌಶಲಮ್” “ಪ್ರತಿಭೆಗೆ ಉಪಯೋಗವಾಗುವ ಸಮಸ್ತವಸ್ತುಗಳ ಹಿಂದುಮುಂದನ್ನು ವಿಮರ್ಶಿಸುವ ವಿಚಕ್ಷಣತೆಯೇ ವ್ಯುತ್ಪತ್ತಿ” ಎಂದು ಮತ್ತೊಂದು ವಿಧದಲ್ಲಿ ವ್ಯಾಖ್ಯಾನಿಸು ತ್ತಾನೆ. ಈ ಎರಡೂ ವ್ಯಾಖ್ಯಾನಕ್ಕೆ ಸರಿಹೊಂದುವ ವ್ಯಕ್ತಿಯೊಬ್ಬ ಯಕ್ಷಪ್ರಪಂಚದಲ್ಲಿ ಥಟ್ಟನೆ ನೆನಪಿಗೆ ಬರುವವರಿದ್ದರೆ ಆ ವ್ಯಕ್ತಿ ಖ್ಯಾತ ಅರ್ಥಧಾರಿ, ಸಂಸ್ಕೃತಿಚಿಂತಕ ಡಾ.ಎಂ.ಪ್ರಭಾಕರ ಜೋಶಿ, ಡಾ. ಜೋಶಿ ಒಬ್ಬ ವ್ಯುತ್ಪನ್ನ: ಹಲವು ಪ್ರತಿಭೆಗಳ ಸಂಗಮ. ಯಕ್ಷಪ್ರಪಂಚ ಕಂಡ ಒಬ್ಬ ಧೀಮಂತ, ನಿರ್ಭೀತ ವಿಮರ್ಶಕ, ಸಂಶೋಧಕ, ಸಂಘಟಕ, ಚಿಂತಕ, ಗ್ರಂಥಕರ್ತಾ, ನಿವೃತ್ತ ಪ್ರಾಧ್ಯಾಪಕ, ಯಕ್ಷಸಂಪನ್ಮೂಲ ವ್ಯಕ್ತಿ, ಸಲಹೆಗಾರ, ನಿರ್ದೇಶಕ. ತಾಳಮದ್ದಳೆ ಅರ್ಥಧಾರಿ,

ತಾಳಮದ್ದಳೆ ಅರ್ಥಧಾರಿಯಾಗಿ ಅವರ ಹೆಸರು ಬಹಳ ಎತ್ತರದ್ದು. ಶೇಣಿ,