ಈ ಪುಟವನ್ನು ಪ್ರಕಟಿಸಲಾಗಿದೆ

ಎತ್ತಿಕೊಂಡರೂ ಅದರಲ್ಲಿ ಆನಂದವನ್ನು ಕಂಡುಕೊಂಡವರು. ಆ ಕೆಲಸಗಳಲ್ಲಿ ದೊಡ್ಡದು- ಸಣ್ಣದು, ಗಣ್ಯ-ನಗಣ್ಯ ಎಂಬ ಭೇದಭಾವವೇ ಇಲ್ಲ. ಸುದೀರ್ಘ ಲೇಖನದಿಂದ ಹಿಡಿದು ಒಂದು ಅಂಚೆ ಕಾರ್ಡ್ ಅಳತೆಯ ನಾಲ್ಕು ವಾಕ್ಯಗಳೂ ಅವರಿಗೆ ಮಹತ್ವ ದ್ದಾಗಿಯೇ ಕಾಣಿಸುತ್ತದೆ. ಹಾಗಾಗಿಯೇ ಅವರು ಬಹು ಜನಾನುರಾಗಿ, ಅವರ ಆಸಕ್ತಿ ಬಹುಮುಖದ್ದು. ಅವರ ಮನಸ್ಸು ಮುಕ್ತವಾದುದು. ಕಂಡಿದ್ದನ್ನು, ಅನುಭವಿಸಿದ್ದನ್ನು ಬೇರೆಯವರೊಡನೆ ಹಂಚಿಕೊಳ್ಳುವ ನಿರ್ಮಲ ಮನಸ್ಸು ಅವರದ್ದು. ಜೋಶಿಯವರ ಬಹುಮುಖ ಪ್ರತಿಭೆಯನ್ನೂ, ಅವರ ಅಗಾಧ ಶಕ್ತಿ-ಸಾಮರ್ಥ್ಯವನ್ನೂ ಗುರುತಿಸಬೇಕಾದರೆ ಕಾವ್ಯಮೀಮಾಂಸಾಕಾರ ರಾಜಶೇಖರನ ಮತ್ತೊಂದು ಮಾತನ್ನು ಸ್ಮರಿಸಿಕೊಳ್ಳಬೇಕು.

ಸ್ವಾಸ್ಥ್ಯಂ ಪ್ರತಿಭಾಭ್ಯಾಸೋ ಭಕ್ತಿವಿದ್ವತ್ಕಥಾ ಬಹುಶ್ರುತತಾ।
ಸ್ಮತಿರ್ದಾರ್ಥ್ಯಮನಿರ್ವೇದಶ್ಚ ಮಾತರೋಷ್‌ ಕವಿತ್ವಸ್ಯ ॥

“ದೇಹ ಮನಸ್ಸುಗಳ ಸ್ವಸ್ಥತೆ, ಪ್ರತಿಭೆ, ಅಭ್ಯಾಸ, ಭಕ್ತಿ, ವಿದ್ವಾಂಸರೊಡನೆ ಮಾತುಕತೆ, ಪಾಂಡಿತ್ಯ, ದೃಢವಾದ ಜ್ಞಾಪಕಶಕ್ತಿ, ಉತ್ಸಾಹ – ಇವು ಎಂಟೂ ಕವಿತ್ವಕ್ಕೆ ತಾಯಿಯರು” ಎಂದು ರಾಜಶೇಖರ ಹೇಳುತ್ತಾನೆ. ಇಲ್ಲಿ “ಕವಿತ್ವ” ಅನ್ನುವ ಜಾಗದಲ್ಲಿ ಜೋಶಿಯವರ ಸಾರಸ್ವತ ಸೇವೆಗಳಲ್ಲಿ ಒಂದಾದ ಭಾಷಣ, ವಿಮರ್ಶೆ, ಲೇಖನ ಯಾವುದನ್ನೂ ಇಟ್ಟುಕೊಳ್ಳಬಹದು.

ರಾಜಶೇಖರನ ಈ ಮಾತು ಜೋಶಿಯವರಿಗೆ ಹೇಗೆ ಅನ್ವಯವಾಗುತ್ತದೆ ಎಂದು ನೋಡೋಣ. ಸ್ವಾಸ್ಥ್ಯ= ದೇಹ, ಮನಸ್ಸುಗಳ ಆರೋಗ್ಯ, ಇದು ಜೋಶಿಯವರಿಗೆ ಚೆನ್ನಾಗಿಯೇ ಇದೆ. ಪ್ರತಿಭೆ= ಜೋಶಿ ಒಬ್ಬ ಬಹುಮುಖ ಪ್ರತಿಭೆಯುಳ್ಳವರು ಎಂಬುದು ಎಂದೋ ರುಜುವಾತಾಗಿದೆ. ಅಭ್ಯಾಸ= ಅಭ್ಯಾಸ, ಅಧ್ಯಯನ, ಚಿಂತನೆ ಇರುವುದರಿಂದಲೇ ಅವರು ಇಂದು ಇಷ್ಟು ದೊಡ್ಡ ವ್ಯಕ್ತಿಯಾಗಲು ಸಾಧ್ಯವಾಗಿದೆ. ಭಕ್ತಿ= ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರೀತಿ, ಆನಂದ ಇವು ಜೋಶಿಯವರಲ್ಲಿ ಸಮೃದ್ಧವಾಗಿಯೇ ಇವೆ. ವಿದ್ವತ್ಕಥಾ= ಜೋಶಿಯವರು ಹಿರಿಯರನ್ನೂ, ವಿದ್ವಾಂಸರನ್ನೂ ಕಂಡರೆ ತಲೆವಾಗುತ್ತಾರೆ; ಅಂತಹವರೊಡನೆ ಹೃದ್ಯವೂ, ವಿನೀತವೂ ಆದ ಒಡನಾಟ ಇಟ್ಟುಕೊಂಡಿದ್ದಾರೆ. ಬಹುಶ್ರುತತಾ ತಮ್ಮ ಅಧ್ಯಯನ ಬಲದಿಂದ ಪಂಡಿತರೆನಿಸಿಕೊಂಡಿದ್ದಾರೆ. ಸ್ಮತಿರ್ದಾರ್ಥ್ಯಮ್ = ಜೋಶಿಯವರ ಸ್ಮೃತಿಶಕ್ತಿ, ಮೇಧಾಶಕ್ತಿ ಅಗಾಧವಾದುದು. ತಮ್ಮ ಮನೋವಲಯಕ್ಕೆ ಬಂದ ಯಾವುದನ್ನೂ ಎಂದೂ ಮರೆಯಲಾರರು. ಅಷ್ಟು ದೃಢವಾದ ಜ್ಞಾಪಕಶಕ್ತಿ ಅವರದ್ದು. ಅನಿರ್ವೇದಃ= ಅಂದರೆ ಉತ್ಸಾಹ, ಜೋಶಿಯವರ ಉತ್ಸಾಹ ಎಂದೂ ಕುಗ್ಗದ್ದು; ಬಾಡದ್ದು. ನಿತ್ಯೋತ್ಸವದ ಉತ್ಸಾಹ ಅವರದ್ದು. ಮಾಡುವ ಕೆಲಸಕ್ಕೆ ಬೇಕಾಗುವ ಎಲ್ಲಾ ಶಕ್ತಿಗಳೂ ಅವರಲ್ಲಿ ಮೇಲೈಸಿವೆ. ರಾಜಶೇಖರನ ಈ ಮಾತು ಜೋಶಿಯಂತಹವರಲ್ಲಿ ಸಾರ್ಥಕ್ಯವನ್ನು ಪಡೆಯುತ್ತವೆ.

ಜೋಶಿಯವರದು ಪಾದರಸದಂತಹ ವ್ಯಕ್ತಿತ್ವ, ಜಗತ್ತಿನ ಪ್ರತಿಯೊಂದಕ್ಕೂ ತೀವ್ರತರವಾಗಿ ಸ್ಪಂದಿಸುವ ಮತ್ತು ಅವನ್ನು ಹಲವು ದೃಷ್ಟಿಕೋನದಲ್ಲಿ ವಿಮರ್ಶಿಸುವ, ವ್ಯಾಖ್ಯಾನಿಸುವ

ವಾಗರ್ಥ ಗೌರವ / 34