ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಭಾಕರ ನಮಸ್ತುಭ್ಯಮ್

ಡಾ.ವಿಜಯನಾಥ ಭಟ್, “ಕೌಂಡಿನ್ಯ”

ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಮತ್ತು ಗುಣದೋಷಗಳ ಬಗ್ಗೆ ನಿರ್ದಿಷ್ಟವಾಗಿ, ನಿರ್ದುಷ್ಟವಾಗಿ ಪ್ರಶಂಸೆ-ದೂಷಣೆಗಳನ್ನು ಮಾಡಬೇಕಾದರೆ, ಅಂತಹ ಉಜ್ಜುಗದಲ್ಲಿ ತೊಡಗಲುದ್ಯುಕ್ತನಾಗುವ ವ್ಯಕ್ತಿಗೆ ಕನಿಷ್ಠ ಮೂರು ಅರ್ಹತೆಗಳಿರಬೇಕು. ಉದ್ದಿಷ್ಟ ವ್ಯಕ್ತಿಯೊಡನೆ ದೀರ್ಘಕಾಲ ಮತ್ತು ನಿಕಟ ಸಹಚರ್ಯೆ, ಗುಣದೋಷ ಗ್ರಹಣಕ್ಕೆ ಅಗತ್ಯವಾಗಿ ಬೇಕಾದ ಸತ್ವ ಮತ್ತು ಅಧಿಕಾರ ಹಾಗೂ ತಾನು ಕಂಡುಕೊಂಡ ಸತ್ಯವನ್ನು ಉತ್ತರಿಸಲು ಬೇಕಾದ ಅಭಿವ್ಯಕ್ತಿಸಂಪತ್ತು ಮತ್ತು ಎದೆಗಾರಿಕೆ, ಮಾನ್ಯ ಪ್ರಭಾಕರ ಜೋಶಿಯವರ ಮತ್ತು ನನಗಿರುವ ಸಮೀಕರಣವನ್ನು ಪರಿಶೀಲಿಸಿದಾಗ ನನಗೆ ಈ ಮೂರು ವಿಷಯಗಳಲ್ಲೂ ಗ್ರಹಬಲ ಮಿತವಾದದ್ದು ಎಂದು ಪೀಠಿಕಾಪ್ರಕರಣದಲ್ಲಿಯೇ ವಿನಮ್ರನಾಗಿ ಹೇಳಬಯಸುತ್ತೇನೆ.

ಮೊಟ್ಟಮೊದಲಾಗಿ ನನ್ನ ಮತ್ತು ಅವರ ಸಹವಾಸ ಸ್ತಬ್ಧಚಿತ್ರಗಳ ಸರಮಾಲೆಯಂತೆ- ಚಲನಚಿತ್ರದಂತಲ್ಲ-ಎರಡು ಪ್ರತ್ಯಕ್ಷ ಅನುಭವಗಳ ನಡುವೆ ಸಾಕಷ್ಟು ಸಮಯದ ಅಂತರವಿದೆ. ನಾವಿಬ್ಬರೂ ಪ್ರತ್ಯಕ್ಷವಾಗಿ ಎದುರು ಬದುರು ಕುಳಿತು ಏನಾದರೂ ವಿಷಯ-ವಿಚಾರ- ಸತ್ಕಾರ ವಿನಿಮಯಗಳನ್ನು ಮಾಡಿದ್ದರೆ, ಅಂತಹ ಪ್ರಸಂಗಗಳು ಕೇವಲ ಬೆರಳೆಣಿಕೆಯಷ್ಟೇ. ಮೊದಲಬಾರಿ ನನಗೆ ಅವರ 'ದರ್ಶನ'ವಾದದ್ದು- ಅದು 'ದೂರ'ದರ್ಶನ, ಸುಮಾರು