ಈ ಪುಟವನ್ನು ಪ್ರಕಟಿಸಲಾಗಿದೆ

ಅತಿಥಿಗಳ ಶುಭಾಶಂಸನಗಳು

ಪ್ರಾಚೀನತೆಯ ಸೃಜನಶೀಲ ವ್ಯಾಖ್ಯಾನ

ಕೆ.ವಿ. ಅಕ್ಷರ, ಹೆಗ್ಗೋಡು

...ನಮ್ಮ ಪುರಾಣಗಳನ್ನು ಪ್ರಾಚೀನ ಸಾಂಸ್ಕೃತಿಕ ಸಂಪ ನ್ನು ನಾವು ನಮ್ಮ ಕಾಲದಲ್ಲಿ ಅರ್ಥ ಮಾಡಿಕೊಳ್ಳುವುದು ಹೇಗೆ? ಪುನಃ ಸೃಜನ ಗೊಳಿಸುವುದು ಹೇಗೆ? ಎಂಬುದು ನನ್ನ ಆಸಕ್ತಿಯ ವಿಷಯಗಳಲ್ಲಿ ಒಂದು. ಯಕ್ಷಗಾನ ತಾಳಮದ್ದಳೆ ಪ್ರಕಾರವನ್ನು ಈ ದೃಷ್ಟಿಯಿಂದ ನೋಡಿದಾಗ ನನಗೆ ಬಹಳ ಆಶಾದಾಯಕವಾದ, ಕುತೂಹಲಕರವಾದ ಒಂದು ಮಾದರಿಯಾಗಿ ಕಂಡಿದೆ. ನನ್ನ ನಿರೀಕ್ಷೆ ಮೀರಿ ನಾನದರಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದೇನೆ.

ಈ ಪ್ರಕಾರದಲ್ಲಿ ಬಹುಕಾಲದಿಂದ ಪ್ರವೃತ್ತರಾಗಿರುವ ವಿಶಿಷ್ಟ ಪ್ರತಿಭೆ, ಪಾಂಡಿತ್ಯಗಳ ಹಿರಿಯ ಅರ್ಥದಾರಿ ಜೋಶಿಯವರು ನಮ್ಮ ನೀನಾಸಂನ ಓರ್ವ ಆಪ್ತರು, ಸಂಪನ್ಮೂಲ ವ್ಯಕ್ತಿ ಎಂಬುದು ಗೌರವದ ವಿಷಯ. ಅವರ 'ವಾಗರ್ಥ ಗೌರವ'ದಲ್ಲಿ ಪಾಲ್ಗೊಳ್ಳುತ್ತಿರುವುದು ನನಗೆ ಖುಷಿ ಕೊಡುವ ಸಂಗತಿಯಾಗಿದೆ. ...

ಒಡನಾಟದ ಗೌರವ

ಪ್ರೊ. ಲೀಲಾವತಿ ಎಸ್. ರಾವ್

... ಡಾ. ಜೋಶಿಯವರು ನನಗೆ ದೀರ್ಘ ಕಾಲದ ಆತ್ಮೀಯ ಒಡನಾಡಿಗಳು, ನಾನು ಸುರತ್ಕಲ್ಲಲ್ಲಿ ಇದ್ದಾಗ ನಾವು ಏರ್ಪಡಿಸಿದ ತಾಳಮದ್ದಳೆಗಳಲ್ಲಿ ಶೇಣಿಯವರು, ಜೋಶಿಯವರು, ಕುಂಬಳೆ ಸುಂದರ ರಾಯರು ಮೊದಲಾದವರೆಲ್ಲ ಬರುತ್ತಿದ್ದರು. ಆ ತಾಳಮದ್ದಳೆಗಳಲ್ಲಿ ಅವರು ನೀಡುತ್ತಿದ್ದ ಕಲಾನುಭವ ಅಸಾಮಾನ್ಯ ವಾದುದು. ಜೋಶಿಯವರ ತತ್ವಶಾಸ್ತ್ರ ಉಪನ್ಯಾಸಗಳು, ಖಾಸಗಿ ಚರ್ಚೆಗಳು ಎಲ್ಲವೂ ವಿಶಿಷ್ಟ, ವಿದ್ವತ್ತೂರ್ಣ, ಸ್ವಾರಸ್ಯಕರವಾಗಿರು ತ್ತಿದ್ದವು. ನಮ್ಮ ಮನೆಗಳ ಮಟ್ಟದಲ್ಲಿ ನಮ್ಮ ಸ್ನೇಹ ಉಳಿದು ಬೆಳೆದು ಬಂದಿರುವುದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ. ...

ವಾಗರ್ಥ ಗೌರವ / 55