ಈ ಪುಟವನ್ನು ಪ್ರಕಟಿಸಲಾಗಿದೆ

ಶ್ರೀಮತಿ ಸುಚೇತಾ ಜೋಶಿ ನನ್ನನ್ನು ಪ್ರೋತ್ಸಾಹಿಸಿ, ಸಹಿಸಿಕೊಂಡು ಬೆಂಬಲ ಮಾರ್ಗದರ್ಶನ ನೀಡಿ ಹೀಗಿರುವಂತೆ ಬೆಳೆಸಿದ್ದು ಅವಳೇ. ಉದ್ಯೋಗ, ಸಂಸಾರಭಾರ ಗಳನ್ನು ಹೊತ್ತು ನನಗಾವ ಶ್ರಮವೂ ಇಲ್ಲದಂತೆ ನಿರ್ವಹಿಸಿದ್ದಾಳೆ. ನನ್ನ ಮಕ್ಕಳು (ಶ್ವೇತಾ ಸೂರ್ಯನಾರಾಯಣ, ಸ್ವಾತಿ ಕಾರ್ತಿಕ ಭಟ್) ತಾವೇ ಚೆನ್ನಾಗಿ ಕಲಿತು ಮುಂದೆ ಬಂದು ಯಶಸ್ವಿಗಳಾಗಿದ್ದಾರೆ. ನನಗೆ ಅವರು ಯಾವ ದೊಡ್ಡ ಭಾರ, ಕಷ್ಟಗಳನ್ನು ನೀಡಲಿಲ್ಲ. ಎಲ್ಲವೂ ಸಲೀಸು.
ಯಕ್ಷಗಾನವು ವಿವಿಧ ರೂಪಗಳಲ್ಲಿ ಹಬ್ಬುತ್ತಿದೆ. ಪ್ರೋತ್ಸಾಹವೂ ಉಬ್ಬರದಲ್ಲಿದೆ ಎನ್ನಬಹುದು. ಈ ರಂಗದಲ್ಲಿ ದ್ವಿಮುಖ ಚಲನೆಯಿದ್ದು ಜ್ಞಾನ, ಪ್ರತಿಭೆ, ಸೂಕ್ಷ್ಮ, ಸೃಜನಶೀಲತೆಗಳು ತುಂಬಿವೆ. ಜೊತೆಗೆ ವಿಚಲನೆ, ವಿರೂಪ, ವಿಕಾರಗಳು ಹಬ್ಬಿವೆ. ಯಕ್ಷಗಾನದ ಉಳಿವಿಗೆ, ಸಂರಕ್ಷಣಾ ವಿಸ್ತರಣ ವಿಕಸನಗಳಿಗೆ ದೊಡ್ಡ ಪ್ರಮಾಣದ, ವ್ಯವಸ್ಥಿತವಾದ ಅಕಡೆಮಿಕ್ ಚಿಂತನೆಗಳ ಯತ್ನಗಳು ಬೇಕು. ವಿಚಾರಪೂರ್ಣವಾದ ಆರ್ಥಿಕ ಪೋಷಣೆ ಬೇಕು. ಗಟ್ಟಿಯಾದ ಒಂದು ವಿಮರ್ಶಾ ವಿಧಾನ-ಪರಂಪರೆ, ಸಶಕ್ತವಾದ ಹವ್ಯಾಸಿ ಚಳವಳಿ, ಸತತ ಕ್ರಿಯಾಶೀಲವಾದ ಪ್ರಜ್ಞಾವಂತ ಪೋಷಕ ವರ್ಗ ಇವೆಲ್ಲ ಅಗತ್ಯ. ಅವು ಬೆಳೆಯಲು ನಾವೆಲ್ಲ ಶ್ರಮಿಸೋಣ.
ಈ ಎರಡು ದಿನಗಳಲ್ಲಿ ಈ ಸಮಾರಂಭದಲ್ಲಿ ಭಾಗಿಗಳಾದ ಹಿರಿ ಕಿರಿಯ ಮಿತ್ರರು ನನ್ನ ಕುರಿತು ತುಂಬ ಉದಾರವಾದ ಪ್ರಶಂಸೆಗಳನ್ನು ನೀಡಿದ್ದಾರೆ. ಅದು ಅವರ ಹೃದಯವೈಶಾಲ್ಯದ ಫಲಿತ. ಅವರೆಲ್ಲರಿಗೆ ನಿಮ್ಮಲ್ಲರಿಗೆ ವಾಗರ್ಥರೂಪಿಗಳಾದ ಶಿವ ಶಿವೆಯರ ಅನುಗ್ರಹವಿರಲಿ.
ಮತ್ತೊಮ್ಮೆ ಎಲ್ಲರಿಗೆ ಪ್ರಣತಿಗಳು.

ವಾಗರ್ಥಾವಿವ ಸಂಪ್ರಕ್ತ ವಾಗರ್ಥ ಪ್ರತಿಪತ್ತಯೇ
ಜಗತಃ ಪಿತ‌ವಂದೇ ಪಾರ್ವತೀಪರಮೇಶ್ವರ್

ಯಾ ದೇವಿ ಸರ್ವಭೂತೇಷು ಕಲಾರೂಪೇಣ ಸಂಸ್ಥಿತಾ
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ

◆ ◆ ◆

ವಾಗರ್ಥ ಗೌರವ / 54