ಈ ಪುಟವನ್ನು ಪ್ರಕಟಿಸಲಾಗಿದೆ

ಜೋಶಿಯವರ ಮೇಲಿನ ಪ್ರೀತಿ, ಅಭಿಮಾನ, ಗೌರವದಿಂದ ನಾವು ಕೇಳಿದ ಸಮಯಕ್ಕೆ ಬರೆದುಕೊಟ್ಟಿದ್ದಾರೆ. ಅವೆಲ್ಲರಿಗೂ ಹಾರ್ದಿಕ ಕೃತಜ್ಞತೆಗಳು.

ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಕೆ. ರಮಾನಂದ ಬನಾರಿಯವರು ತಮ್ಮ ಲೇಖನದಲ್ಲಿ ಕಾಳಿದಾಸ ಹೇಳಿದ 'ವಾಗರ್ಥ' ನುಡಿಗಟ್ಟನ್ನು ವಿಶ್ಲೇಷಿಸುತ್ತಾ “ಅದು ಗಂಡ-ಹೆಂಡತಿ ನಡುವಿನ ಸಂಬಂಧ ಮಾತ್ರವಲ್ಲ. ಬದುಕಿನ ಎಲ್ಲಾ ಸಂಬಂಧಗಳೂ ಒಂದು ಅರ್ಥದಲ್ಲಿ 'ವಾಗರ್ಥ'ವೇ ಆಗಿರಬೇಕು” ಎಂಬ ಉದಾತ್ತ ನುಡಿಗಳನ್ನು ವ್ಯಕ್ತಪಡಿಸುತ್ತಾ ಜೋಶಿಯವರ ಒಡನಾಟದ ಸವಿಯನ್ನೂ ನೆನಪಿಸಿಕೊಂಡಿದ್ದಾರೆ.

ಡಾ. ಚಂದ್ರಶೇಖರ ದಾಮ್ಲೆಯವರು ಜೋಶಿಯವರ ಸಾಮಾಜಿಕ ವ್ಯಕ್ತಿತ್ವ ಮತ್ತು ಸ್ನೇಹ ಸಂಪರ್ಕ ಯಾವ ಯಾವ ಮುಖದಲ್ಲಿ ವ್ಯಾಪಿಸಿಕೊಂಡಿವೆ ಅನ್ನುವುದನ್ನು ಬಹು ಹೃದ್ಯವಾಗಿ, ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ವ್ಯಕ್ತಿಯೊಬ್ಬ ತನ್ನ ಬದುಕಿನ ಪರಿಧಿಯನ್ನು ದಾಟಿದಾಗ ಅಥವಾ ವಿಸ್ತರಿಸಿಕೊಂಡಾಗ ಆತ ಅದಾವ ರೀತಿ ಬೆಳೆಯಬಲ್ಲ ಅನ್ನುವುದಕ್ಕೆ ಜೋಶಿಯವರನ್ನೇ ಉದಾಹರಣೆಯಾಗಿ ತೆಗೆದುಕೊಂಡು ಉದ್ಬೋಧಕವಾಗಿ ಬರೆದಿದ್ದಾರೆ. ಜೋಶಿಯವರು ಸಣ್ಣ ಸಣ್ಣ ಸಂಗತಿಗಳನ್ನೂ ಪರಿಭಾವಿಸುವ ರೀತಿ ಮತ್ತು ಅವನ್ನು ವಿಶ್ಲೇಷಿಸುವ ಪರಿ ಸಮಾಜದ ಮೇಲೆ ಎಂತಹ ಪರಿಣಾಮಗಳನ್ನು ಬೀರಬಲ್ಲುದು ಅನ್ನವುದನ್ನು ಸೋದಾಹರಣವಾಗಿ ವಿವರಿಸಿದ್ದಾರೆ. ಜೋಶಿಯವರ ಬಹುಮುಖ ಆಸಕ್ತಿಯೇ ಅವರನ್ನು ಯಕ್ಷಗಾನ ವಲಯದಲ್ಲಿ ಪ್ರತ್ಯೇಕ ಗುರುತಿಸುವಂತೆ ಮಾಡಿದೆಯೆಂದೂ ಅವರ ಸ್ನೇಹಶೀಲ ನಡವಳಿಕೆಯೇ ಅವರನ್ನು ಜನಾನುರಾಗಿಯನ್ನಾಗಿ ಮಾಡಿದೆಯೆಂದು ಯಥಾರ್ಥವಾಗಿ ಗ್ರಹಿಸಿ ಜೋಶಿಯವರ ವ್ಯಕ್ತಿತ್ವದ ಬಹುಮುಖತೆಯನ್ನು ಅನಾವರಣಗೊಳಿಸಿದ್ದಾರೆ.

ಜೋಶಿ ಅರ್ಥಗಾರಿಕೆ: ಐತಿಹಾಸಿಕ ಆಯಾಮಗಳ ಬಗ್ಗೆ ಬರೆದ ಪ್ರೊ ರಾಧಾಕೃಷ್ಣ ಕಲ್ಚಾರ್ ಅವರು ಯಕ್ಷೇತಿಹಾಸದ ದರ್ಶನವನ್ನು ಮಾಡಿಸಿ ನಾವು 50 ವರ್ಷಗಳ ಹಿಂದಿನ ತಾಳಮದ್ದಳೆಯ ರೀತಿಯನ್ನು ನಿರುಕಿಸುವಂತೆ ಮಾಡಿದ್ದಾರೆ. ಆ ಸಂದರ್ಭದಲ್ಲೇ ಅರ್ಥ ಹೇಳಲು ತೊಡಗಿದ ಜೋಶಿಯವರಿಗೆ ಶೇಣಿ, ಸಾಮಗ, ಪೆರ್ಲ, ಕಾಂತ ರೈ ಮೊದಲಾದ ಘಟಾನುಘಟಿಗಳ ಮಧ್ಯೆ ಹೊಸ ಶೈಲಿಯ ನಿರ್ಮತೃವಾಗುವ ಅನಿವಾರ್ಯತೆ ಹೇಗುಂಟಾಯಿತು ಅನ್ನುವದನ್ನು ಸಾಧಾರಿತವಾಗಿ ನಿರೂಪಿಸಿದ್ದಾರೆ. ಜತೆಗೆ ಜೋಶಿಯವರ ಅರ್ಥಗಾರಿಕೆಯ ವೈಶಿಷ್ಟ್ಯವನ್ನೂ ಎತ್ತಿಕೊಂಡು ವಾದಭೂಮಿಕೆಗೆ ಒಂದಿಷ್ಟು ಗ್ರಾಸವನ್ನು ಒದಗಿಸಿದ್ದಾರೆ.

ಇಡೀ ಕಾರ್ಯಕ್ರಮದ ಸಮೀಕ್ಷೆಗಾಗಿಯೇ ಸುಳ್ಯ ವೆಂಕಟರಾಮ ಭಟ್ಟರನ್ನು ಆಮಂತ್ರಿಸಿದ್ದೆವು. ಅವರು ಬಹು ಪ್ರೀತಿಯಿಂದ ಆಗಮಿಸಿ ತಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಪೂರಯಿಸಿದ್ದಾರೆ. ಮಾತ್ರವಲ್ಲ. ಎಲ್ಲರ ಭಾಷಣಗಳನ್ನೂ ಸಮೀಕ್ಷೆ ಮಾಡಿ ಪತ್ರಿಕೆಗಳಿಗೂ ಕಳುಹಿಸಿಕೊಟ್ಟು ಉಪಕರಿಸಿದ್ದಾರೆ. ಅವೆಲ್ಲವೂ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು

vii