ಈ ಪುಟವನ್ನು ಪ್ರಕಟಿಸಲಾಗಿದೆ

3

ವಿದೆ. ಶ್ರೀ ಶ್ರೀಪರಮಹಂಸರವರ ವರಪ್ರಸಾದಬಲದಿಂದಲೂ, ಭಕ್ತರಾದ ಕನ್ನಡಿಗರ ಉತ್ಸಾಹಾಶ್ರಯಗಳಿಂದಲೂ ಆ ಉದ್ದೇಶವು ಸದ್ಯದಲ್ಲಿಯೇ ನೆರವೇರಿತೆಂದು ನಂಬಿದ್ದೇವೆ.

ಕ್ರಯವು ಸುಲಭವಾಗಿ ಪುಸ್ತಕವು ಎಲ್ಲರಿಗೂ ಕೊಳ್ಳುವುದಕ್ಕೆ ಸಾಧ್ಯವಾಗಿರಬೇಕೆಂಬ ಉದ್ದೇಶದಿಂದ ಮುಖ್ಯ ಮುಖ್ಯವಾದ ವಿಷಯಗಳನ್ನೇ ಸಂಗ್ರಹಿಸಿ ಗ್ರಂಥವನ್ನು ಸಣ್ಣದಾಗಿ ಬರೆದಿದ್ದೇವೆ. ಆದ್ದರಿಂದ ಪರಮಹಂಸರ ಉಪದೇಶಗಳನ್ನೆಲ್ಲ ಇಲ್ಲಿ ತರಲು ಅವಕಾಶವಾಗಲಿಲ್ಲ. ಪಾಠಕರೆಲ್ಲರೂ ಮ।। ರಾ।। ಎನ್.ವೆಂಕಟೇಶಯ್ಯಂಗಾರ್ಯರಿಂದ ರಚಿತವಾದ “ ಶ್ರೀರಾಮಕೃಷ್ಣ ಪರಮಹಂಸರ ಉಪದೇಶವಾಕ್ಯಾವಳಿ” ಯನ್ನು ಓದಿ ಈ ಕೊರತೆಯನ್ನು ಪರಿಹಾರಮಾಡಿಕೊಳ್ಳಬೇಕೆಂದು ಪ್ರಾರ್ಥಿಸುವೆವು.

ಈ ಗ್ರಂಥದ ಸಮಸ್ತ ಹಕ್ಕು ಬಾಧ್ಯತೆಗಳೂ ಶ್ರೀ ಶ್ರೀರಾಮಕೃಷ್ಣ ಮಠದವುಗಳಾಗಿರುತ್ತವೆ.


ಬೆಂಗಳೂರು,
ಜನವರಿ 1919.

ಗ್ರಂಥಕರ್ತರು.