ಈ ಪುಟವನ್ನು ಪ್ರಕಟಿಸಲಾಗಿದೆ

ಮೊದಲನೆಯ ಅಧ್ಯಾಯ

ರಾಮಕೃಷ್ಣಪರಮಹಂಸರ ತಾಯಿತಂದೆಗಳು

ಬಂಗಾಳದೇಶದ ಬರ್ದವಾನ್ ಡಿಸ್ಟ್ರಿಕ್ಟಿಗೆ ಸೇರಿದ 'ದೇರೆ' ಎಂಬ ಗ್ರಾಮದಲ್ಲಿ ಸುಮಾರು ನೂರೈವತ್ತು ವರ್ಷಗಳ ಹಿಂದೆ ಮಾಣಿಕರಾಮಚಟೋಪಾಧ್ಯಾಯನೆಂಬ ಒಬ್ಬ ವೈದಿಕ ಬ್ರಾಹ್ಮಣ ನಿದ್ದನು. ಆತನಿಗೆ ಖುಧಿರಾನು, ನಿಧಿರಾಮ, ಕನೈರಾಮ ಎಂಬ ಮೂರು ಜನ ಗಂಡುಮಕ್ಕಳೂ, ರಾಮಶಿಲಾ ಎ೦ಬ ಒಬ್ಬ ಹೆಣ್ಣು ಮಗಳೂ ಇದ್ದರು. ಹಿರಿಯಮಗನಾದ ಖುದಿರಾಮನು ಕ್ರಿ. ಶ. ೧೬೭೫ ರಲ್ಲಿ ಹುಟ್ಟಿದನು. ಆತನು ಜೀವನೋಪಾಯಕ್ಕೆ ಅನುಕೂಲವಾದ ಯಾವುದಾದರೂ ಲೌಕಿಕವಿದ್ಯೆಯನ್ನು ಕಲಿತಿದ್ದನೋ ಇಲ್ಲವೋ ತಿಳಿಯದು. ಆದರೆ ಶಾಸ್ತ್ರದಲ್ಲಿ ಸದ್ಭ್ರಾಹ್ಮಣರಿಗೆ ಸ್ವಭಾವಸಿದ್ಧವಾಗಿ ಇರಬೇಕೆಂದು ಹೇಳಿರುವ ಸತ್ಯನಿಷ್ಠೆ, ತೃಪ್ತಿ, ತಾಳ್ಮೆ, ವೈರಾಗ್ಯ ಮುಂತಾದ ಗುಣಗಳನ್ನು ವಿಧಾತನು ಆತನಿಗೆ ಯಥೇಚ್ಛವಾಗಿ ಕೊಟ್ಟಿದನು. ಪ್ರತಿನಿತ್ಯವೂ ಸಂಧ್ಯಾವಂದನಾದಿ ನಿತ್ಯಕರ್ಮಗಳನ್ನು ಮುಗಿಸಿಕೊಂಡು ಮನೆದೇವರಾದ ಶ್ರೀರಾಮ ಚಂದ್ರನನ್ನು ಭಕ್ತಿಪೂರ್ವಕವಾಗಿ ಪೂಜೆಮಾಡಿದಹೊರತು ಒಂದು ತೊಟ್ಟು ನೀರನ್ನು ಸಹ ಕುಡಿಯುತ್ತಿರಲಿಲ್ಲ. ಶೂದ್ರರ ಮನೆಯಲ್ಲಿ ದಾನವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಶೂದ್ರರ ಮನೆಯಲ್ಲಿ ಪೌರೋಹಿತ್ಯ, ಪೂಜೆಮುಂತಾದವನ್ನು ಮಾಡಿಸುತ್ತಿದ್ದ ಬ್ರಾಹ್ಮಣರ ಮನೆಗೆ ಊಟ ಉಪಚಾರಗಳಿಗೆ ಹೋಗುತ್ತಿರಲಿಲ್ಲ. ಈ ವಿವಾದ ನಿಷ್ಠೆ ಮತ್ತು ಸದಾಚಾರವನ್ನು ನೋಡಿ ಆಗ್ರಾಮದವರೆಲ್ಲರೂ ಅವನಲ್ಲಿ ವಿಶೇಷ ಭಕ್ತಿಯನ್ನೂ ಗೌರವವನ್ನೂ ಇಟ್ಟು ಕೊ೦ಡಿದ್ದರು.