ಈ ಪುಟವನ್ನು ಪ್ರಕಟಿಸಲಾಗಿದೆ

೩೪

ಶ್ರೀ ರಾಮಕೃಷ್ಣ ಪರಮಹಂಸರ

ಬಿದ್ದುವು. ಹಾಲ ಹಸುಳೆಯಾದ ಅಕ್ಷಯನ ಯೋಗಕ್ಷೇಮವೂ ಅವಳ ತಲೆಗೇ ಕಟ್ಟಿತು. ರಾಮೇಶ್ವರನ ಹೆಂಡತಿ ಮನೆಗೆ ಬಂದಿದ್ದರೂ ಅವಳಿನ್ನೂ ಹುಡುಗಿಯಾಗಿದ್ದದ್ದರಿಂದ ಅವಳಿಂದ ಹೆಚ್ಚಿನ ಸಹಾಯನಾಗುತ್ತಿರಲಿಲ್ಲ. ಆದರೂ ಆಕೆಯು ಇವೆಲ್ಲವೂ ರಘುವೀರನ ಇಚ್ಛೆಯೆಂದು ಅಂದುಕೊಳ್ಳುತ್ತ ಕಾಲವನ್ನು ಕಳೆಯುತ್ತಿದ್ದಳು. ರಾಮೇಶ್ವರನು ಅಲ್ಪ ಸ್ವಲ್ಪಮಟ್ಟಿಗೆ ವಿದ್ಯೆಯನ್ನು ಕಲಿತಿದ್ದರೂ ಅವನಿಗೆ ಯಾವವಿಧವಾದ ಸಂಪಾದನೆಯೂ ಇರಲಿಲ್ಲ. ಸಾಲದ್ದಕ್ಕೆ ಯಾರಾದರೂ ಸಾಧುಸನ್ಯಾಸಿಗಳನ್ನು ಕಂಡರೆ ಅವರೊಡನೆ ಕಾಲಕಳೆದು, ಬಿಡುತ್ತಿದ್ದನಲ್ಲದೆ ಅವರಿಗೆ ಏನು ಬೇಕಾದರೂ ಅದನ್ನು ಮನೆಯಿಂದ ತೆಗೆದುಕೊಂಡು ಹೋಗಿ ಕೊಟ್ಟು ಬಿಡುತ್ತಿದ್ದನು. ಯಾರಾದರೂ ಕೇಳಿದರೆ ರಘುವೀರನು ಹೇಗೋ ನಡೆಸುತ್ತಾನೆ ಎಂದು ಹೇಳಿ ಬಿಡುತ್ತಿದ್ದನು. ಅವನಿಗೆ ಗದಾಧರನನ್ನು ಕಂಡರೆ ಬಹು ಪ್ರೇಮವಾದರೂ ಅವನು ಪಾಠಶಾಲೆಗೆ ಹೋದನೋ, ಬಿಟ್ಟನೋ, ಓದುತ್ತಿದ್ದನೋ ಇಲ್ಲವೋ ಎಂಬ ವಿಚಾರಕ್ಕೆ ಗಮನವನ್ನೇ ಕೊಡುತ್ತಿರಲಿಲ್ಲ. ಕೆಲವ ದಿನಗಳಲ್ಲಿಯೇ ಪಾಠಶಾಲೆಯಲ್ಲಿ ಓದುವುದು ನಿಷ್ಪಲವೆಂದು ಗದಾಧರನ ಮನಸ್ಸಿಗೆ ನಿರ್ಧರವಾಗಿ ಅವನು ಪಾಠಶಾಲೆಗೆ ಹೋಗುವುದನ್ನೇ ಬಿಟ್ಟು ಬಿಟ್ಟನು. ಈ ವಿಷಯದಲ್ಲಿಯೂ ರಾಮೇಶ್ವರನು ಆಕ್ಷೇಪಣೆಯನ್ನು ಮಾಡಲಿಲ್ಲ.

ಈಗ ರಾಮಕುಮಾರನು ಕಲ್ಕತ್ತೆಯಲ್ಲಿ ಪಾಠಶಾಲೆಯನ್ನು ಹೂಡಿ ಮೂರು ವರ್ಷಗಳಾಗಿದ್ದುವು. ಹುಡುಗರ ಸಂಖ್ಯೆಯು ಹೆಚ್ಚಿದ್ದರಿಂದ ಸಹಾಯಕ್ಕೆ ಮತ್ತಾರಾದರೂ ಒಬ್ಬರು ಬೇಕಾಗಿ ಬಂತು. ಅಲ್ಲದೆ ಗದಾಧರನಿಗೆ ಹದಿನಾರು ವರ್ಷತುಂಬಿದ್ದರೂ ಅವನಿಗೆ ಸಾಕಾದಷ್ಟು ವಿದ್ಯೆ ಬಾರದಿರುವುದನ್ನೂ ಅವನು ಪಾಠಶಾಲೆಯನ್ನು ಬಿಟ್ಟು ಪುರಾಣ ಪುಣ್ಯ ಕಥೆಗಳನ್ನು ಓದುವುದರಲ್ಲಿಯೂ ಕೀರ್ಥನೆ ಭಜನೆಗಳಲ್ಲಿಯೂ ಕಾಲ ಕಳೆಯುತ್ತಿದ್ದದ್ದನ್ನೂ ನೋಡಿ ಅವನು ತನ್ನ ಜೊತೆಯಲ್ಲಿದ್ದರೆ ಸ್ವಲ್ಪ ಬುದ್ದಿವಂತನಾಗಬಹುದೆಂದೂ ತನಗೂ