ಈ ಪುಟವನ್ನು ಪ್ರಕಟಿಸಲಾಗಿದೆ

ಚರಿತ್ರೆ

೪೯

ನೊಡನೆ ಬಹುಕಾಲ ಘೋರಯುದ್ಧ ಮಾಡಬೇಕಾಗುತ್ತದೆ. ಅವತಾರ ಪುರುಷರ ಮಾತೇ ಬೇರೆ. ಸ್ವಸುಖನಿರಭಿಲಾಷೆಯೂ, ಪರಹಿತಾಕಾಂಕ್ಷೆಯೂ, ವೈರಾಗ್ಯವೂ ಅವರ ಹುಟ್ಟುಗುಣಗಳಾಗಿರುತ್ತವೆ. ಆದ್ದರಿಂದ ಸಾಮಾನ್ಯರು ನೂರುಜನ್ಮಗಳಲ್ಲಿ ಮಾಡಿದರೂತೀರದಷ್ಟು ಸಾಧನೆಯನ್ನು ಒಂದೇಜನ್ಮದ ಅತ್ಯಲ್ಪ ಕಾಲದಲ್ಲಿಅವತಾರ ಪುರುಷರು ಮಾಡಿ ಮುಗಿಸಿ ಬಿಡುತ್ತಾರೆ. ಅವರು ಮಾಡುವಸಾಧನೆಯಲ್ಲಿ ಒಂದಂಶವನ್ನು ಮಾಡಿದರೂ ಸಾಮಾನ್ಯರು ಧನ್ಯರಾಗುತ್ತಾರೆ.

ಸಾಧನಪಥದಲ್ಲಿ ಒಂದು ಹೆಜ್ಜೆಯನ್ನಾದರೂ ಇಟ್ಟಿರತಕ್ಕವಾಚಕರಿಗೆ ಶ್ರೀ ಶ್ರೀರಾಮಕೃಷ್ಣ ಪರಮಹಂಸರ ಸಾಧನಚರಿತ್ರೆಯನ್ನು ಓದಿದ ಮೇಲೆ ಅವರು ಮಹಾಪುರುಷರೆಂಬುದು ಗೊತ್ತಾಗದೆ ಇರದು.