ಈ ಪುಟವನ್ನು ಪ್ರಕಟಿಸಲಾಗಿದೆ

೪೮

ಶ್ರೀ ರಾಮಕೃಷ್ಣ ಪರಮಹಂಸರ

ಬಹುದು. ಆದರೆ ಇದರಲ್ಲಿ ವೈಚಿತ್ಯವೇನೂ ಇಲ್ಲ. ಏಕೆಂದರೆ,ಕರುಣಾಸಾಗರನಾದ ಈಶ್ವರನು ಧರ್ಮಸಂಸ್ಥಾಪನೆಗಾಗಿ ಮನುಷ್ಯಜನ್ಮವೆತ್ತುವಾಗ ಮಾನವದೇಹಕ್ಕೂ ಮನಸ್ಸಿಗೂ ಸ್ವಾಭಾವಿಕವಾದದೌರ್ಬಲ್ಯವನ್ನು ತಾನಾಗಿಯೇ ಸ್ವೀಕಾರಮಾಡುತ್ತಾನೆ. ಹೀಗೆ.ಮಾನುಷ ಸಾಮಾನ್ಯವಾದ ಅಸಂಪೂರ್ಣತೆಯನ್ನು ಧಾರಣಮಾಡದೆ ಹೋದರೆ ಈಶ್ವರನು ಅವತಾರಮಾಡುವುದೇ ಒಂದು ವಿಧವಲ್ಲಿ ನಿರರ್ಥಕವಾಗುತ್ತದೆ. ಹೇಗೆಂದರೆ, ಮಾನವ ಸುಲಭವಾದದೌರ್ಬಲ್ಯವನ್ನು ವಹಿಸಿ, ಸಾಧನಮೂಲಕ ಆ ದೌರ್ಬಲ್ಯವನ್ನುಧ್ವಂಸಮಾಡಿ “ ಕ್ಷುದ್ರಂ ಹೃದಯ ದೌರ್ಬಲ್ಯಂ ತ್ವಕ್ಕೊತಿಷ್ಟ”ಎಂದು ಜನಗಳಿಗೆ ಬೋಧಿಸಿದರೆ ತಾನೇ ಅವರು ದೌರ್ಬಲ್ಯವನ್ನುಬಿಡುವುದು ಸಾಧ್ಯವೆಂದು ತಿಳಿದು ಸಾಧನಮಾಡುವರು. ಇಲ್ಲದೇಹೋದರೆ “ ಆತನೇನು ಸರ್ವಶಕ್ತ! ದೌರ್ಬಲ್ಯವು ಅವನಿಗೇನಿದೆ!ಆತನು ಏನಾದರೂ ಮಾಡಬಹುದು, ಅದೆಲ್ಲಾ ನಮಗೆ ಸಾಧ್ಯವೇ ?” ಎಂದು ನಿರಾಶರಾಗಿ ಆತನು ಉಪದೇಶಮಾಡಿದ ಸಾಧನಪಥದಲ್ಲಿ ಒಂದು ಹೆಜ್ಜೆಯನ್ನೂ ಇಡದೇ ಹೋಗಬಹುದು.

ಅವತಾರಪುರುಷರು ಸಾಮಾನ್ಯರಂತೆ ಸಾಧನ ಮಾಡುವುದುಆವಶ್ಯಕವಾದರೂ ಅವರಿಗೂ ಸಾಮಾನ್ಯರಿಗೂ ವಿಶೇಷ ಪ್ರಭೇದವಿದೆ. ಸಾಮಾನ್ಯರು ಪೂರ್ವಜನ್ಮಸಂಸ್ಕಾರದೊಡನೆ ಹುಟ್ಟುವುದರಿಂದಸಾಧನ ಮಾಡುವುದರಲ್ಲಿ ಬೆನ್ನಿಗೆ ಬೀಸುವಕಲ್ಲನ್ನು ಕಟ್ಟಿಕೊಂಡುಈ ಜುವವರಂತೆ ಇರುತ್ತಾರೆ. ಅವತಾರ ಪುರುಷರಿಗೆ ಈ ವಿಧವಾದಪೂರ್ವಜನ್ಮ ಸಂಸ್ಕಾರ ರೂಪವಾದ ಹೊರೆಯಿರುವುದಿಲ್ಲ. ಸಾಮಾನ್ಯಜನರು ಸ್ವಾರ್ಥಪರರಾಗಿಯೂ ಸ್ವಸುಖಾಭಿಲಾಷಿಗಳಾಗಿಯೂ ಇರುತ್ತಾರೆ. ಹೀಗಿರುವುದರಿಂದ ವಿಷಯಗಳಿಗೆ ದಾಸರಾಗಿರುತ್ತಾರೆ.ಒಂದೊಂದುವೇಳೆ ವಿಷಯ ವಾಸನೆಯನ್ನು ಬಿಡಬೇಕೆಂದು ಅವರಿಗೆಮನಸ್ಸಾದರೂ ವಿಷಯ ವಾಸನೆಯು ಅವರನ್ನು ಬಿಡುವುದಿಲ್ಲ.ವಿಷಯ ವಾಸನೆಯನ್ನು ತ್ಯಾಗ ಮಾಡಬೇಕಾದರೆ ಅವರು ಮನಸ್ಸಿ