ಈ ಪುಟವನ್ನು ಪ್ರಕಟಿಸಲಾಗಿದೆ

೫೮

ಶ್ರೀ ರಾಮಕೃಷ್ಣ ಪರಮಹಂಸರ

ಅದಕ್ಕೋಸ್ಕರ ಇದನ್ನೆಲ್ಲಾ ಮಾಡಬೇಡಿ, ಅದೂ ಅಲ್ಲದೆ, ಮನೆನಿರೋಧಕೋಸ್ಕರ ತಾನೇ ಪ್ರಾಣಾಯಾಮ, ಕುಂಭಕ ಇವುಗಳನ್ನೆಲ್ಲಮಾಡಿ ವಾಯುವನ್ನು ತಡೆದುಕೊಳ್ಳುವದು ? ದೇವರಲ್ಲಿ ಭಕ್ತಿಯಿಂದ ಧ್ಯಾನಮಾಡುತ್ತ ಹೋದರೆ ಮನಸ್ಸು, ವಾಯು ಎರಡೂತಮ್ಮಷ್ಟಕ್ಕೆ ತಾವೇ ನಿರುದ್ಧವಾಗುತ್ತವೆ; ನೋಡಿ ಬೇಕಾದರೆ!ಕಲಿಗಾಲದಲ್ಲಿ ಜೀವಿಗಳು ಅಲ್ಪಾಯು ಅಲ್ಪಶಕ್ತಿಗಳೆಂದು ಅಂದುಕೊಂಡೇ ಭಗವಂತನು ಅವರಮೇಲೆ ಕೃಪೆಮಾಡಿ ಈಶ್ವರಲಾಭದಮಾರ್ಗವನ್ನು ಇಷ್ಟು ಸುಲಭವಾಗಿ ಮಾಡಿಕೊಟ್ಟಿದ್ದಾನೆ. ಹೆಂಡತಿಮಕ್ಕಳು ಹೋದರೆ ಹೊಟ್ಟೆಯಲ್ಲಿ ಯಾವ ವಿಧವಾದ ವ್ಯಾಕುಲತೆಇರುತ್ತದೆಯೋ ದೇವರಿಗೋಸ್ಕರವಾಗಿ ಅದೇ ವಿಧವಾದ ವ್ಯಾಕುಲತೆ-- ಇಪ್ಪತ್ತುನಾಲ್ವೇ ಗಂಟೆಯ ಹೊತ್ತು ಸಾಕು-ಯಾರಲ್ಲಿಯಾದರೂ ಸ್ಥಾಯಿಯಾಗಿ ಇದ್ದುಬಿಟ್ಟರೆ ಅಂಥವರಿಗೆ ಅವನುದರ್ಶನ ಕೊಟ್ಟೇ ಕೊಡುವನು".

ಪರಮಹಂಸರು ಮೇಲೆ ಹೇಳಿದ ಕಠೋರವಾದ ಸಾಧನಗಳಿಂದಲೂ ವ್ಯಾಕುಲತೆಯಿಂದಲೂ ಅನ್ನ ತಿನ್ನದೆ, ನಿದ್ರೆ ಮಾಡದೆ, ಮೈಯಲ್ಲಿ ಉರಿ ಎಂದು ಸಂಕಟಪಡುತ್ತಿರುತ್ತ, ಆಗಾಗ್ಗೆ ಮೂರ್ಛಿತನಂತೆ ಪ್ರಜ್ಞೆ ತಪ್ಪಿ ಬೀಳುತ್ತ, ಬಡವಾಗಿ ಹೋದದ್ದನ್ನು ನೋಡಿಹೃದಯನೂ ಮಧುರಾನಾಥನೂ ಇವೆಲ್ಲಾ ಏನೋರೋಗದ ಲಕ್ಷಣಗಳಿರಬಹುದೆಂದು ಯೋಚಿಸಿ ಪ್ರಸಿದ್ಧರಾದ ವೈದ್ಯರನ್ನು ಕರೆತಂದುಔಷಧಿಯನ್ನು ಕೊಡಿಸಿದರು. ರೋಗವು ಔಷಧಿಯಿಂದ ಹೆಚ್ಚಾಯಿತೇ ಹೊರತು ಕಡಿಮೆಯಾಗಲಿಲ್ಲ. ಈ ವರ್ತಮಾನವು ಕಾಮಾರಪುಕುರಕ್ಕೆ ತಲಪಿ ಶ್ರೀಮತಿ ಚಂದ್ರಾದೇವಿಯ ಕಿವಿಗೆ ಬಿತ್ತು. ಆಕೆಯು ಕೂಡಲೆ ಮಗನನ್ನು ತನ್ನ ಹತ್ತಿರಕ್ಕೆ ಕರೆಸಿಕೊಂಡು ಕಂಡುಕೇಳಿದ ಔಷಧಿಗಳನ್ನೆಲ್ಲಾ ಮಾಡಿದಳು; ಜಪತಪ ಶಾಂತಿಗಳನ್ನೂಮಾಡಿಸಿದ್ದಾಯಿತು; ಯಾವುದರಿಂದಲೂ ಏನೂ ಆಗಲಿಲ್ಲ.ಆದರೂ ಪರಮಹಂಸರಲ್ಲಿ ಒಂದೊಂದು ಸಮಯ ಹಿಂದಿನಂತೆ ಎಲ್ಲ