ಈ ಪುಟವನ್ನು ಪ್ರಕಟಿಸಲಾಗಿದೆ

ಎಂಟನೆಯ ಅಧ್ಯಾಯ

ಸಾಧನಗಳು-ಮೂರನೆಯ ಭಾಗ : 1863-1866.

ತಾಂತ್ರಿಕ ಸಾಧನೆಗಳನ್ನು ಮುಗಿಸಿದಮೇಲೆ ಪರಮಹಂಸರಮನಸ್ಸು ಪುನಃ ವೈಷ್ಣವ ಮತದ ಸಾಧನೆಗಳ ಕಡೆಗೆ ತಿರುಗಿತು.ಅವರು ಮೊದಲು ನಾಲ್ಕು ವರ್ಷಗಳಲ್ಲಿ ವೈಷ್ಣವ ಶಾಸ್ತ್ರಗಳಲ್ಲಿ ಹೇಳಿರುವ ಶಾಂತ, ದಾಸ್ಯ, ಸಖ್ಯಭಾವಗಳನ್ನು ಅವಲಂಬನ ಮಾಡಿ ಸಿದ್ಧಿಯನ್ನು ಪಡೆದಿದ್ದರು. ಆದ್ದರಿಂದ ಈಗ ವಾತ್ಸಲ್ಯ, ಮಧುರ ಎಂಬಮಿಕ್ಕೆರಡು ಭಾವಗಳ ಸಾಧನೆಯನ್ನು ಮಾಡಿಬಿಡಬೇಕೆಂದು ನಿರ್ಧರಿಸಿದರು. ಈ ಕಾಲದಲ್ಲಿ ಅವರು ಜಗನ್ಮಾತೆಯ ಸಖಿಯೆಂಬ ಭಾವನೆಯಿಂದ ಹುವ್ವಿನ ಸರಗಳನ್ನು ಕಟ್ಟಿ ದೇವಿಗೆ ಅಲಂಕಾರಗಳನ್ನುಮಾಡುತ್ತಲೂ,ಚಾಮರ ಹಾಕುತ್ತಲೂ,ಸೇವೆಮಾಡುತ್ತಿರುವರು ಮಧುರಾನಾಥನಿಗೆ ಹೇಳಿ ಹೊಸಹೊಸ ಒಡವೆಗಳನ್ನು ಮಾಡಿಸಿ ದೇವಿಗೆ ಅವುಗಳನ್ನು ಇಟ್ಟು ಶೃಂಗಾರಮಾಡುವರು ; ಮತ್ತು ಸ್ತ್ರೀವೇಷದಿಂದ ದೇವಿಯ ಎದುರಿಗೆ ನಿಂತು ನೃತ್ಯಗೀತಗಳನ್ನು ಮಾಡುತ್ತಿರುವರು. ಹೀಗಿರಲು ಈ ಕಾಲಕ್ಕೆ ತಕ್ಕ ಹಾಗೆ ವಾತ್ಸಲ್ಯ ಭಾವಸಾಧಕನಾದ ಜಟಾಧಾರಿಯೆಂಬ ಒಬ್ಬ ಸಾಧುವು ದಕ್ಷಿಣೇಶ್ವರ ದೇವಸ್ಥಾನಕ್ಕೆ ಬಂದನು.

ಜಟಾಧಾರಿಗೆ ಶ್ರೀರಾಮಚಂದ್ರನಲ್ಲಿ ಅದ್ಭುತವಾದ ಅನುರಾಗವಿತ್ತು.ಬಾಲಕ ರಾಮಚಂದ್ರಮೂರ್ತಿಯೇ ಅವನಿಗೆ ಅತ್ಯಂತ ಇಷ್ಟ ಇಂಥ ರಾಮಚಂದ್ರಮೂರ್ತಿಯನ್ನು ಬಹುಕಾಲ ವಾತ್ಸಲ್ಯದಿಂದಸೇವೆಮಾಡಿದ್ದರಿಂದ ಆತನ ಮನಸ್ಸು ವಾತ್ಸಲ್ಯಭಾವದಿಂದ ತುಂಬಿಹೋಗಿತ್ತಲ್ಲದೆ ಶ್ರೀರಾಮಚಂದ್ರನ ಜ್ಯೋತಿರ್ಘನ ಬಾಲವಿಗ್ರಹವುಪ್ರತ್ಯಕ್ಷವಾಗಿ ಅವನ ಎದುರಿಗೆ ಬಂದು ಭಕ್ತಿಯುಕ್ತವಾದ ಸೇವೆ