ಈ ಪುಟವನ್ನು ಪ್ರಕಟಿಸಲಾಗಿದೆ

ಅಲೆ : ಆರು

ಭಕ್ತಿಯ ಬೆಳೆ

ರೂಪರೇಖೆ :
ಭಕ್ತಿಯು ಬಸವಣ್ಣನವರ ಸಹಜ ಗುಣ. ಅದು ಅವರಲ್ಲಿ ಹುಟ್ಟಿದಂದಿನಿಂದಲೇ ನೆಲೆಸಿದ್ದಿತು. ಭಕ್ತಿಯು ಅವರೊಡನೆ ಜನಿಸಿತು, ಅವರೊಡನೆ ಬೆಳೆಯಿತು. ಅದು ಮೊಳೆತ ಹಾಗೂ ಬೆಳೆದ ಬಗೆಯನ್ನು ಅವರೇ ತಮ್ಮ ವಚನವೊಂದರಲ್ಲಿ ಬಣ್ಣಿಸಿರುವರು :
ಭಕ್ತಿಯೆಂಬ ಪೃಥ್ವಿಯ ಮೇಲೆ
ಗುರುವೆಂಬ ಬೀಜವಂಕುರಿಸಿ,
ಲಿಂಗವೆಂಬ ಎಲೆಯಾಯಿತ್ತು.
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾಯಿತ್ತು
ಆಚಾರವೆಂಬ ಕಾಯಾಯಿತ್ತು
ನಿಷ್ಪತ್ತಿ ಎಂಬ ಹಣ್ಣಾಯಿತ್ತು
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿಬೀಳುವಲ್ಲಿ
ಕೂಡಲಸಂಗಮದೇವ ತಮಗೆ ಬೇಕೆಂದು ಎತ್ತಿಕೊಂಡ.
ಬಸವಣ್ಣನವರ ಅಂತರಂಗವು ಭಕ್ತಿಯ ಸಂಸ್ಕಾರವನ್ನು ಪಡೆದ ಭೂಮಿ. ಅಲ್ಲಿಗುರು ಬಿತ್ತಿದ ಬೀಜವು ಅಂಕುರಿಸಿತು. ಗುರು ಪಂಚಾಕ್ಷರೀ ಮಂತ್ರದ ಜಪ ಹಾಗೂ ಶಿವಲಿಂಗದ ಪೂಜೆ- ಧ್ಯಾನಗಳನ್ನು ಕಲಿಸಿದ. ಅದರ ಜತೆಯಲ್ಲಿ ಪರಶಿವನ ರೂಪ-ಗುಣ-ಕರ್ಮಗಳ ವಿಚಾರವನ್ನೂ ನೈತಿಕ ಸದಾಚಾರದ ಹಾಗೂ ಪಾರಮಾರ್ಥಿಕ ನಿತ್ಯಾಚಾರದ ಸಾಧನವನ್ನೂ ಬಸವಣ್ಣನವರಿಂದ ಮಾಡಿಸಿಕೊಂಡ. ಅದರ ಫಲವಾಗಿ ಅವರಿಗೆ ಪರಶಿವನ ದಿವ್ಯ ಅನುಭಾವ ಲಭಿಸಿ ಅವರು ಪೂರ್ಣತೆಯನ್ನು ಪಡೆದರು. ತುಂಬ 'ಹಣ್ಣಾದರು'. ಕೊನೆಗೆ ಈ ಹಣ್ಣನ್ನು ಪರಶಿವನು ತಾನೇ