ಈ ಪುಟವನ್ನು ಪ್ರಕಟಿಸಲಾಗಿದೆ
99

ಬಸವಣ್ಣನವರು ಕೆಲಕಾಲ ತಮ್ಮ ಮನಸ್ಸನ್ನು ಬೋಧಿಸಿ ಅದನ್ನು ತಿದ್ದಲು ಯತ್ನಿಸಿದರು. ಆದರೆ ಅವರ ಬೋಧೆಯು ಅಷ್ಟೊಂದು ಫಲಕಾರಿ ಆದಂತೆ ಕಾಣುವದಿಲ್ಲ, ಆದರೂ ಸಾಧಕರಿಗೆಲ್ಲ ಅದು ಅತಿ ಬೆಲೆಯುಳ್ಳದ್ದು ಆಗಿರುವುದರಿಂದ, ಉಪಯುಕ್ತವಾಗಿರುವುದರಿಂದ, ಅದನ್ನಿಲ್ಲಿ ಕಾಣಿಸಿದೆ :

ಬೆಲ್ಲವ ತಿಂದ ಕೋಡಗದಂತೆ,
ಸಿಹಿಯ ನೆನೆಯಿದಿರಾ, ಮನವೇ.
ಕಬ್ಬತಿಂದ ನರಿಯಂತೆ ಹಿಂದಕ್ಕೆಳಸಿದಿರಾ, ಮನವೇ.
ಗಗನವನಡರಿದ ಕಾಗೆಯಂತೆ
ದೆಸೆದೆಸೆಗೆ ಹಂಬಲಿಸಿದಿರಾ, ಮನವೇ
ಕೂಡಲಸಂಗನ ಶರಣರ ಕಂಡು
ಲಿಂಗವೆಂದೇ ನಂಬು ಮನವೇ !
ಒಡೆಯನ ಕಂಡರೆ ಕಳ್ಳನಾಗದಿರಾ, ಮನವೇ !
ಭವದ ಭಾರಿಯ ತಪ್ಪಿಸಿಕೊಂಡರೆ
ನೀನು ನಿಯತನಾಗಿ, ಭಯಭರಿತನಾಗಿ,
ಅಹಂಕಾರಿಯಾಗದೆ ಶರಣೆನ್ನು ! ಮನವೇ !
ಕೂಡಲಸಂಗನ ಶರಣರಲ್ಲಿ ಭಕ್ತಿಯ ನೋಲುವರೆ
ಕಿಂಕಿಲನಾಗಿ ಬದುಕು ಮನವೇ.

ಈ ಬಗೆಯ ಶರಣರನ್ನು ಲಿಂಗವೆಂದು ನಂಬಿ ವಿನಯದಿಂದ ಅವರ ಕಂಕರನಾಗಲು, ಅವರ ಸೇವೆಯನ್ನು ಮಾಡಲು ಬಿನ್ನವಿಸಿದಂತೆ, ಬೇಡುವದಾದರೆ ಸಂಗನನ್ನೇ ಸೆರಗೊಡ್ಡಿ ಬೇಡಲು, ಬಸವಣ್ಣನವರು ತಮ್ಮ ಮನಸ್ಸನ್ನು ಪರಿಪರಿಯಾಗಿ ಬೇಡಿಕೊಂಡಿರುವರು :

ಸುರರ ಬೇಡಿದಡಿಲ್ಲ ನರರ ಬೇಡಿದಡಿಲ್ಲ
ಬರಿದೆ ದೃತಿಗೆಡಬೇಡ, ಮನವೇ ;
ಅರಸನಾದಡೆಯೂ ಬೇಡಿ ಬೇಡಿ,
ಬರಿದೆ ಧೃತಿಗೆಡಬೇಡ, ಮನವೇ