ಈ ಪುಟವನ್ನು ಪ್ರಕಟಿಸಲಾಗಿದೆ

100

ಕೂಡಲಸಂಗಮದೇವನಲ್ಲದೆ
ಆರ ಬೇಡದಡಿಲ್ಲ ಮನವೇ.
ಆಡಿ ಅಳುಪದಿರಾ, ಲೇಸ ಮಾಡಿ ಮರುಗದಿರಾ! ಎಲೆ ಮನವೇ!
ಕೂಡಿ ತಪ್ಪದಿರಾ ಬೇಡಿದವರಿಗಿಲ್ಲೆನ್ನದಿರು, ಕಂಡಾ, ಮನವೇ !
ನಾಡಮಾತು, ಬೇಡ, ಸೆರಗೊಡ್ಡಿ ಬೇಡು ಕೂಡಲಸಂಗನ ಶರಣರ.

ಕರುಣಾಯಾಚನ :

ಬಸವಣ್ಣನವರ ಈ ಬೋಧೆಯು ಅವರ ಮನಸ್ಸನ್ನು ಒಲಿಸಲು ಸಮರ್ಥ ಆಗಲಿಲ್ಲ. ಅದು ತನ್ನ ಹಿಂದಿನ ಕಾಯಕವನ್ನೆಯೆ ಮುಂದುವರಿಸಿತು. ಆದುದರಿಂದ ತನ್ನ ಮನದ ತಾಮಸ ಬಿಡದು, ಕಪಟ ಬಿಡದು. ತನ್ನಲ್ಲಿ ನಿಜಭಕ್ತಿ ಇಲ್ಲ, ಸಹಜಗುಣವಿಲ್ಲ ತನ್ನ ನಡೆಯೊಂದು ಪರಿ, ನುಡಿಯೊಂದು ಪರಿ, ಮನದಲ್ಲಿ ಎರಡುಳ್ಳನಕ್ಕ ದೇವನು ಹೇಗೆ ಒಲಿಯಬೇಕು? ಎಂದು ಅವರಿಗೆ ಎನಿಸಿತು.

ಎನ್ನ ಮನದಲೊಂದು ಹೃದಯದಲೊಂದು
ವಚನದಲ್ಲೊಂದು ನೋಡಾ.
ಲೌಕಿಕರ ಕಂಡು ಆಡುವೆ, ಹಾಡುವೆ ;
ಸಹಜಗುಣವೆನ್ನಲ್ಲಿಲ್ಲಯ್ಯಾ;
ನಿಜಭಕ್ತಿ ಎನಗಿಲ್ಲ ತಂದೆ.
ಏಕೋಭಾವ ಎನಗುಳ್ಳರೆ, ಏಕೆ ನೀ ಕರುಣಿಸೆ
ಕೂಡಲಸಂಗಮದೇವ ?

ಇಂಥ ತಮ್ಮ ಡಂಭಾಚಾರದ ಬಗೆಗೆ ಅವರಿಗೆ ಬಹು ನಾಚಿಕೆಯಾಯಿತು. ಆದುದರಿಂದ. ಮನಮನ ಬೆರೆಸಿದಲ್ಲಿ ತನು ಕರಗದಿದ್ದರೆ,
ಸೋಂಕಿನಲ್ಲಿ ಪುಳಕಂಗಳು ಹೊರಹೊಮ್ಮದಿದ್ದರೆ,
ಕಂಡಾಗಲಶ್ರುಜಲಂಗಳು ಸುರಿಯದಿದ್ದರೆ,
ನುಡಿವಲ್ಲಿ ಗದ್ಗದಂಗಳು ಹೊರಹೊಮ್ಮದಿದ್ದರೆ