ಕಂಡಂತೆ' ಅವರಿಗೆ ಹರುಷ ಆಯಿತು. ತಮಗವರ ಬರವಿನಿಂದುಂಟಾದ
ಆನಂದಾತಿರೇಕವನ್ನು ಅವರು ಈ ರೀತಿ ಬಣ್ಣಿಸಿರುವರು :
ಸಾಸವೆಯ ಮೇಲೆ ಸಾಗರವರಿದಂತಾಯಿತ್ತಯ್ಯಾ
ಆನಂದದಿಂದ ನಲಿನಲಿದಾಡುವೆ,
ಆನಂದದಿಂದ ಕುಣಿಕುಣಿದಾಡುವೆ,
ಕೂಡಲಸಂಗನ ಶರಣರು ಬಂದರೆ,
ಉಬ್ಬಿ ಕೊಬ್ಬಿ ಹರುಷದಲೋಲಾಡುವೆ!
ಅಗ್ನಿ ದಿವ್ಯ :
ಮೇಲ್ಕಾಣಿಸಿದ ಮೇರೆಗೆ ಮಾಯೆಯ ಮೆರುಗಿನ ಸೆಳೆತದ ಫಲವಾಗಿ
ಉಂಟಾದ ನೈತಿಕ ಕಳವಳದ ಕಡಲೊಳಗಿಂದ ಹಾದು ಬಸವಣ್ಣನವರು
ಶರಣರ ಪಾವನನೆರೆಯಲ್ಲಿ ಕೆಲಕಾಲ ತಮ್ಮ ಸಾಧನವನ್ನು
ಸಮಾಧಾನದಿಂದ ಸಾಗಿಸಿದರು. ಆದರೆ ಬೇಗನೆ ಇನ್ನೊಂದು
ಅಗ್ನಿದಿವ್ಯವನ್ನು ಅವರು ಎದುರಿಸಬೇಕಾಯಿತು. ಪರಶಿವನು ಈ ಚೊಕ್ಕ
ಚಿನ್ನವನ್ನು ಮರಳಿ ಅಗ್ನಿಯಲ್ಲಿ ಎಸೆದು ಪರೀಕ್ಷಿಸಿ, ಅದರ ಮೆರುಗನ್ನು
ಕಾಂತಿಯನ್ನು ಬೆಳೆಸಲು ಹವಣಿಸಿದನು. ಅವನು ಬಸವಣ್ಣನವರ
ತನುವನಲ್ಲಾಡಿಸಿ ನೋಡಿದ, ಮನವನಲ್ಲಾಡಿಸಿ ನೋಡಿದ,
ಧನವನಲ್ಲಾಡಿಸಿ ನೋಡಿದ. ಆದರೆ ತಮ್ಮಲ್ಲಿಯ ಛಲದ ಬಲದಿಂದ
ಬಸವಣ್ಣನವರು ಅದನ್ನು ಯಶಸ್ವಿಯಾಗಿ ಎದುರಿಸಿದರು :
ಬೇಡು ಬೇಡಲೆ ತಂದೆ ಬೇಡಿದ್ದ ನೀಡುವೆನು.
ತನುವ ಬೇಡಿದಡೀವೆ ; ಮನವ ಬೇಡಿದಡೀವೆ.
ಧನವ ಬೇಡಿದಡೀವೆ.
ಎಂದು ಅವರು ಬೇಡಿದ್ದನ್ನು ನೀಡಲು ಸಿದ್ಧರಾದರು, ನೀಡಿದರು. ಭಕ್ತಿ
ಕಂಪಿತನಾದ ಭಗವಂತ ಅದರಿಂದ ಪ್ರೀತನಾದ ಅವರಿಗೆ ಅನನ್ಯತೆಯನ್ನು
ದಯಪಾಲಿಸಿದ. ಅದರ ವಿವರಗಳು ಸಾಕಷ್ಟು ತಿಳಿದಿಲ್ಲ, ಅವರ
ವಚನಗಳಲ್ಲಿಯ ಸೂಚಕ ನಿರ್ದೇಶಗಳಿಂದ ಕೆಲವನ್ನು
ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೨೪
ಈ ಪುಟವನ್ನು ಪ್ರಕಟಿಸಲಾಗಿದೆ
105