ಈ ಪುಟವನ್ನು ಪ್ರಕಟಿಸಲಾಗಿದೆ

106 ಊಹಿಸಬೇಕಾಗಿದೆ.
ಬಸವಣ್ಣನವರ ತನುವಿಗೆ ಹಿಂಸೆಯ ಬೆದರಿಕೆ ಕಾಡಿದಂತೆ ಕಾಣುವದು. ಅದಕ್ಕವರು ಈ ಬಗೆಯ ಉತ್ತರವನ್ನು ಕೊಟ್ಟರು:
ಆಯುಷ್ಯ ತೀರಿದಲ್ಲದೆ ಮರಣವಿಲ್ಲ;
ಭಾಷೆ ತಪ್ಪಿದಲ್ಲದೆ ದಾರಿದ್ರವಿಲ್ಲ
ಅಂಜಲದೇಕೋ ಲೋಕವಿಗುರ್ಬಣಿಗೆ,
ಅಂಜಲದೇಕೊ, ಕೂಡಲಸಂಗಮದೇವಾ, ನಿಮ್ಮಾಳಾಗಿ?
ನಾಳೆ ಬಪ್ಪುದು ನಮಗಿಂದೆ ಬರಲಿ;
ಇಂದು ಬಪ್ಪುದು ನಮಗೀಗ ಬರಲಿ ;
ಇದಕಾರಂಜುವರು, ಇದಕಾರಳುಕುವರು?
“ಜಾತಸ್ಯ ಮರಣಂ ಧ್ರುವಂ ಎಂಬುದಾಗಿ,
ನಮ್ಮ ಕೂಡಲಸಂಗಮದೇವರು ಬರೆದ ಬರೆಹವ ತಪ್ಪಿಸುವರೆ
ಹರಿಬ್ರಹ್ಮಾದಿಗಳಿಗಳವಲ್ಲ!
ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ
ಕೇಳು, ಮರಣವೇ ಮಹಾನವಮಿ!
ತಮ್ಮ ದೃಢವಾದ ನಿರ್ಧಾರವನ್ನು ಕುರಿತು ಬಸವಣ್ಣನವರು ಸಂಗನಿಗೆ ಮತ್ತೂ ಹೇಳುವುದೇನೆಂದರೆ -
ಕಾಯದ ಕಳವಳಕ್ಕಂಜಿ - 'ಕಾಯಯ್ಯಾ' ಎನ್ನೆನು :
ಜೀವನೋಪಾಯಕ್ಕಂಜಿ, 'ಈಯಯ್ಯಾ' ಎನ್ನೆನು.
"ಯದ್ಭಾವಂ ತದ್ಭವತಿ ಉರಿ ಬರಲಿ! ಸಿರಿ ಬರಲಿ!
“ಬೇಕು, ಬೇಡ ನೆನಯ್ಯಾ,
ಆ ನಿಮ್ಮ ಹಾರುವೆನು, ಮಾನವರ ಬೇಡೆನು;
ಆಣೆ, ನಿಮ್ಮಾಣೆ, ಕೂಡಲಸಂಗಮದೇವಾ !
ಎನಿಸೆನಿಸೆಂದೊಡೆ ನಾ ಧೃತಿಗೆಡೆನಯ್ಯಾ;
ಎಲುದೋರಿದರೆ, ನರ ಹರಿದರೆ, ಕರುಳು ಕುಪ್ಪಳಿಸಿದರೆ,
ನಾ ಧೃತಿಗೆಡೆನಯ್ಯಾ.