ಈ ಪುಟವನ್ನು ಪ್ರಕಟಿಸಲಾಗಿದೆ
109

ಅದೇ ಮೇರೆಗೆ ಅವರು ತಮ್ಮ ದೇಹವನ್ನೇ ಒಂದು ವೀಣೆಯನ್ನಾಗಿ ಮಾಡಿ ಅದರೊಳಗಿಂದ ಮಧುರ ಸಂಗೀತವನ್ನು ನುಡಿಸಲು, ಹೊರಡಿಸಲು, ಬಸವಣ್ಣನವರು ಸಂಗನಿಗೆ ಬೇಡಿಕೊಂಡರು :
ಎನ್ನ ಕಾಯುವ ದಂಡಿಗೆಯ ಮಾಡಯ್ಯಾ ;
ಎನ್ನ ಸಿರವ ಸೋರೆಯ ಮಾಡಯ್ಯಾ ;
ಎನ್ನ ನರವ ತಂತಿಯ ಮಾಡಯ್ಯಾ ;
ಎನ್ನ ಬೆರಳ ಕಡ್ಡಿಯ ಮಾಡಯ್ಯಾ,
ಬತ್ತೀಸ ರಾಗವ ಹಾಡಯ್ಯಾ; ಉರದಲೊತ್ತಿ ಬಾರಿಸು,
ಕೂಡಲಸಂಗಮದೇವಾ !
ತಮ್ಮ ಸರ್ವಸ್ವವನ್ನು ಈ ರೀತಿ ಪರಮಾತ್ಮನಿಗೆ ಅರ್ಪಣ ಮಾಡಿ ಆತನೊಡನೆ ಅನನ್ಯರಾಗಿ, ಬಸವಣ್ಣನವರು ಆತನ ನೆನವಿನಲ್ಲಿಯೆ ಸಂತತವಾಗಿ ರತರಾಗಲು ಬಯಸಿದರು. ಪರಮಾತ್ಮನ ನೆನವೆಂದರೆ ಆತನ ನಾಮದ ನೆವು, ಆತನ ರೂಪದ-ಲಿಂಗದ ನೆನವು, ಕರಿಯು ಅಂಕುಶಕ್ಕೆ ಅಂಜುವಂತೆ, ಗಿರಿಯು ಕುಲಿಶಕ್ಕೆ ಅಂಜುವಂತೆ, ತಮಂಧವು ಜ್ಯೋತಿಗೆ ಅಂಜುವಂತೆ, ಕಾನನವು ಬೇಗೆಗೆ ಅಂಜುವಂತೆ, ಪಾತಕವು ಸಂಗನ ನಾಮಕ್ಕೆ ಅಂಜುವದು. ಆದ್ದರಿಂದ,
ಎದೆ ಬಿರವನ್ನಕ್ಕ, ಮನದಣಿವನ್ನಕ್ಕ,
ನಾಲಿಗೆ ನಲಿದಾಡುವನ್ನಕ್ಕ
ನಿಮ್ಮ ನಾಮಾಮೃತವ ತಂದಿರಿಸು ಕಂಡಯ್ಯಾ ಎನಗೆನ್ನ ತಂದೇ!
ಬಿರಿಮುಗಳಂದದಿ ಎನ್ನ ಹುದಯ
ನಿಮ್ಮ ಶ್ರೀಚರಣದ ಮೇಲೆ ಬಿದ್ದ ಕಳುಗೆ,
ಕೂಡಲಸಂಗಮದೇವಾ !
ಎಂದು ಅವರು ಸಂಗನನ್ನು ಬೇಡಿಕೊಂಡರು. ಹಾಗೂ 'ಓಂ ನಮಃ ಶಿವಾಯ' ಎಂಬ ಮಂತ್ರವನ್ನು ಜಪಿಸಹತ್ತಿದ್ದರು. ಅದೇ ಮೇರೆಗೆ “ಅಂಗೈಯೊಳಗಣ ಲಿಂಗವ ನೋಡುತ್ತಿರಲು ಅವರ ಕಂಗಳಿಂದ