110
ಅಶ್ರುಗಳು ಸುರಿಯತೊಡಗಿದವು. ಲಿಂಗದ ನೋಡ-ಕೂಟವೇ ಅವರ
ಪ್ರಾಣವಾಯಿತು.
ಬಸವಣ್ಣನವರು “ಜಾಗೃತಿ, ಸ್ವಪ್ನ ಸುಷುಪ್ತಿಯಲ್ಲಿ ಸಂಗನನ್ನಲ್ಲದೆ
ಅನ್ಯನ ನೆನೆಯಲಿಲ್ಲ”. ಅವರಿಗೆ ಸಂಗನ ನೆನಹವೇ ಉದಯ,
ಮರಹವೇ ಅಸ್ತಮಾನವಾಯಿತು. ಆತನ ನೆನಹವೇ ಜೀವನ
ಪ್ರಾಣವಾಯಿತು. ಮತ್ತು ತಮ್ಮ ಇಡೀ ಜೀವನದಲ್ಲಿ ಆತನನ್ನು ತುಂಬಿ
ಅವರು ತುಂಬಿಯಾದರು :
ವನಚದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ಮೂರುತಿ ತುಂಬಿ
ಮನದಲ್ಲಿ ನಿಮ್ಮ ನೆನವು ತುಂಬಿ
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ,
ಕೂಡಲಸಂಗಮದೇವಾ ನಿಮ್ಮ
ಚರಣಕಮಲದಲಾನು ತುಂಬಿ.
ಹೀಗಾಗಿ ಅವರು ಸಂಗನ ನೆನಹು- ಪೂಜೆಗಳಲ್ಲಿ ಮೇಲಿಂದ ಮೇಲೆ
ಮೈಮರೆಯತೊಡಗಿದರು.
ವಾರವೆಂದರಿಯೆ ದಿನವೆಂದರಿಯೆ ;
ಏನೆಂದರಿಯೆನಯ್ಯಾ !
ಇರುಳೆಂದರಿಯೆ, ಹಗಲೆಂದರಿಯೆ,
ಏನೆಂದರಿಯೆನಯ್ಯಾ !
ನಿಮ್ಮವ ಪೂಜಿಸಿ ಎನ್ನುವ ಮರೆದೆ,
ಕೂಡಲಸಂಗಮದೇವಾ !
ಎಂಬುದಾಗಿ ಅವರು ಈ ಮೈಮರೆವಿನ ಸ್ಥಿತಿಯನ್ನು ಬಣ್ಣಿಸಿರುವರು.
ಸಾಕ್ಷಾತ್ಕಾರ :
ಪರಮಾತ್ಮನ ಅನನ್ಯ ಚಿಂತನದಿಂದ ಸಾಧಕನಲ್ಲಿಯ ಅಂತಃಪ್ರಜ್ಞೆಯು
ಜಾಗೃತವಾಗಿ, ಅವನಿಗೆ ಆತನ ನಾದಬಿಂದು ಕಳೆಗಳ ಅತೀಂದ್ರಿಯ