ಈ ಪುಟವನ್ನು ಪ್ರಕಟಿಸಲಾಗಿದೆ

112

“ಯತೋ ವಾಚೋ ನಿವರ್ತಂತೇ । ಅಪ್ರಾಪ್ಯಮನಸಾ ಸಹ ।
ಆನಂದಂ ಬ್ರಹ್ಮಣೋ ವಿದ್ವಾನ್ । ನ ಬಿಭೇತಿ ಕದಾ ಚ ನ”
ಇಂತೆಂದುದಾಗಿ
ಅಗಮ್ಯ ಕೂಡಲಸಂಗಮದೇವನಲ್ಲದೆ ಮತ್ತಾರೂ ಇಲ್ಲಾ!
ಬಸವಣ್ಣನವರು ತಾವು ಕಂಡ ಭಗವಂತನ ಮಹಾ ಬೆಳಕನ್ನು ಮೂರು
ನಾಲ್ಕು ವಚನಗಳಲ್ಲಿ ಈ ಬಗೆಯಾಗಿ ಬಣ್ಣಿಸಿರುವರು:
ಬೆಳಗಿನೊಳಗಣ ಬೆಳಗು, ಮಹಾಬೆಳಗು!
ಶಿವಶಿವಾ; ಪರಮಾಶ್ರಯವೇ ತಾನಾಗಿ
ಶತಪತ್ರ ಕಮಳಕರ್ಣಿಕಾಮಧ್ಯದಲ್ಲಿ
ವಸ್ವತಃಸಿದ್ಧನಾಗಿರ್ಪ ನಮ್ಮ ಕೂಡಲಸಂಗಮದೇವ.
ಘನಗಂಭೀರ ಮಹಾಘನದೊಳಗಿನ ಘನಕ್ಕೆ
ಘನವಾಗಿದ್ದೆನಯ್ಯಾ,
ಕೂಡಲಸಂಗಮದೇವಯ್ಯನೆಂಬ ಮಹಾ ಬೆಳಗಿನ
ಬೆಳಗಿನೊಳಗಿದ್ದೆನೆಂಬ
ಶಬ್ದ ಮುಗ್ಧವಾದುದೇನೆಂಬೆನಯ್ಯಾ?
ಸಮಸ್ತ ಕತ್ತಲೆಯ ಮಸಕ ಕಳೆದಿಪ್ಪ ಇರುವ ನೋಡಾ!
ಬೆಳಗಿಂಗೆ ಬೆಳಗು ಸಿಂಹಾಸನವಾಗಿ,
ಬೆಳಗು ಬೆಳಗ ಕೂಡಿದ ಕೂಟವ
ಕೂಡಲಸಂಗಯ್ಯ ತಾನೇ ಬಲ್ಲ
ಈ ಬಗೆಯ ಉಜ್ವಲ ಅನುಭಾವದಿಂದ ಬಸವಣ್ಣನವರ ಅಂತರಂಗವು ಆನಂದಭರಿತವಾಯಿತು. ಆ ಪರಮಾನಂದವು ಉಕ್ಕಿ ಅವರ ವಚನಗಳಲ್ಲಿ ಈ ರೀತಿ ಹರಿಯಿತು:
ಆಲಿಕಲ್ಲ ಹರಳಿನಂತೆ, ಅರಗಿನ ಪುತ್ಥಳಿಯಂತೆ
ತನು ಕರಗಿ ನೆರೆವ ಸುಖವ ನಾನೇನೆಂಬೆ?
ಕಡೆಗೋಡಿವರಿದುವೆನಗಯ್ಯಾ ನಯನದ ಸುಖಜಲಂಗಳು!
ನಮ್ಮ ಕೂಡಲಸಂಗಮದೇವರ ಮುಟ್ಟಿ
ನೆರೆವ ಸುಖವ ನಾನಾರಿಗೇನೆಂಬೆ?