ಈ ಪುಟವನ್ನು ಪ್ರಕಟಿಸಲಾಗಿದೆ
113

ನಿಮ್ಮ ನೋಟವನಂತಸುಖ, ಕೂಟ ಪರಮಸುಖ!
ಅವುಟು ಕೋಟಿ ರೋಮಂಗಳೂ ಕಂಗಳಾಗಿ ನೋಡುತ್ತಿದ್ದನು.
ಕೂಡಲಸಂಗಮದೇವಯ್ಯಾ, ನಿಮ್ಮ ನೋಡಿ ನೋಡಿ
ಮನದಲ್ಲಿ ರತಿ ಹುಟ್ಟಿ ನಿಮಿರ್ದುವನ್ನ ಕಳೆಗಳು!
ಬೆಳಗದೊಳಗಳ ಬೆಳಗು ಮಹಾಬೆಳಕೆಂಬ
ಪ್ರಸಾದದಲ್ಲೊದಗಿದ ಪ್ರಸಾದಿಯ ಪರಿಣಾಮದ
ಪರಮಾನಂದವನೇನೆಂದುಪಮಿಸುವೆನಯ್ಯಾ?
ಬಸವಣ್ಣನವರು ಇಂಥ ಅದ್ವಿತೀಯವಾದ ಅನುಭಾವದಲ್ಲಿಯೂ, ಆನಂದದಲ್ಲಿಯೂ ತುಂಬ ಮೈಮರೆದಿರುವದು ತೀರ ಸಹಜ. ಅದನ್ನವರ ಮುಂದಿನ ವಚನಗಳಲ್ಲಿ ಕಾಣಬಹುದು:
ಕಣ್ಣಳು ತುಂಬಿದ ಬಳಿಕ ನೋಡಲಿಲ್ಲ
ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ.
ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ
ಮನ ತುಂಬಿದ ಬಳಿಕ ನೆನೆಯಲಿಲ್ಲ
ಮಹಂತ ಕೂಡಲಸಂಗಮದೇವನ!
ದಶದಿಕ್ಕು ಧರೆಗಗನವೆಂಬುದ ನಾನರಿಯೆನಯ್ಯಾ
“ಲಿಂಗಮಧ್ಯೆ ಜಗತ್ ಸರ್ವಂ' ನಾನರಿಯೆನಯ್ಯಾ
ಲಿಂಗಸೋಂಕಿನ ಸುಖದೊಳಗೆ ಕೂಡಲಸಂಗಮದೇವಯ್ಯಾ
ಅಂಬುಧಿಯೊಳಗೆ ಬಿದ್ದ ಆಲಿಕಲ್ಲಿನಂತೆ
ಭಿನ್ನಭಾವವರಿಯದೆ 'ಶಿವಶಿವಾ' ಎನ್ನುತ್ತಿರ್ದೆನು ನಾನು.
ಕೊನೆಗೆ ತಮ್ಮ ಸಾಮರಸ್ಯದ ದಿವ್ಯ ಅನುಭಾವವನ್ನು ಬಸವಣ್ಣನವರು, ಈ ಬಗೆಯಾಗಿ ಅರುಹಿರುವರು:
ಲಿಂಗವ ಪೂಜಿಸಿ ಫಲವೇನಯ್ಯಾ?
ಸಮರತಿ, ಸಮಕಳೆ, ಸಮಸುಖವರಿಯದನ್ನಕ್ಕ?
ಲಿಂಗವ ಪೂಜಿಸಿ ಫಲವೇನಯ್ಯಾ?
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿಯೆ ಬೆರಸಿದಂತಾಗದನ್ನಕ್ಕ?