ಈ ಪುಟವನ್ನು ಪ್ರಕಟಿಸಲಾಗಿದೆ

120
ಅವರಂತೆಯೇ ನಿರ್ಮಳ ಆಗುವನೆಂದು ಬಸವಣ್ಣನವರು ಅರುಹಿರುವರು :

ಆರಾರ ಸಂಗವೇನೆನ ಮಾಡದಯ್ಯಾ ?
ಕಿಡಿ ಕುಂಡಲಿಗನಾಗದೆ ಅಯ್ಯಾ ?
ಚಂದನದ ಸನ್ನಿಧಿಯಲ್ಲಿ ಪರಿಮಳ ತಾಗಿ
ಬೇವು ಬೊಬ್ಬುಳಿ ತರೆಯ ಗಂಧಂಗಳಾಗವೆ?
ನಮ್ಮ ಕೂಡಲಸಂಗನ ಶರಣರ ಸನ್ನಿಧಿಯಿಂದ
ಕರ್ಮ ನಿರ್ಮಳವಾಗದಿಹುದೆ?

ಶರಣರು ಪ್ರಸನ್ನರಾಗಿ ಒಮ್ಮೆ ಭಕ್ತನನ್ನು ತಮ್ಮವನೆಂದರೆ ಸಾಕು. ಅವನಿಗೆ ಮರಳಿ ಶಿವನಿಗೆ ಏನನ್ನೂ ಬೇಡುವ ಅಗತ್ಯವೇ ಉಳಿಯುವದಿಲ್ಲ. ಅವರ ಪ್ರಸಾದದಿಂದ ಆತನಿಗೆ ಎಲ್ಲವೂ ತಾನಾಗಿಯೆ ಲಭಿಸುವದು. ಅವರ ಅಂತಃಕರಣ ಅರಳಿ ಅವರು ಮಾತಾಡತೊಡಗಿದರಂತೂ ಕೇಳುವದೇನು? ಆತನಿಗೆ ಲಿಂಗ ದರ್ಶನವು ತಾನಾಗಿ ಆಗುವದು.

ಚಂದ್ರನ ಶೈತ್ಯದಲ್ಲಿ ಬೆಳೆದ ಕಾಯಕ್ಕೆ
ಬೆಳದಿಂಗಳ ಬಯಸುವ ಹಂಗೇಕಯ್ಯಾ?
ಶರಣರ ಸಂಗದಲ್ಲಿರ್ದು
ಶಿವನ ಬೇಡುವ ಹಂಗೇಕಯ್ಯಾ ?
ಕೂಡಲಸಂಗಯ್ಯನ ಶರಣರು ಬಂದು
ತಮ್ಮವನೆಂದರೆ ಸಾಲದೆ ಅಯ್ಯಾ?
ಕೆರೆಹಳ್ಳಬಾವಿಗಳು ಮೈದೆಗೆದರೆ
vಗುಳ್ಳೆಗೊರಜೆಚಿಪ್ಪುಗಳು ಕಾಣಬಹುದು !
ವಾರಿಧಿ ಮೈದೆಗೆದರೆ ರತಂಗಳು ಕಾಣಬಹುದು !
ಕೂಡಲಸಂಗನ ಶರಣರು ಮನದೆರೆದು
ಮಾತನಾಡಿದರೆ ಲಿಂಗವೆ ಕಾಣಬಹುದು.