ಈ ಪುಟವನ್ನು ಪ್ರಕಟಿಸಲಾಗಿದೆ
123

ಲಿಂಗ ತಾನೆಲ್ಲಿ ಬಪ್ಪುದೋ ?
ಅಹಂಕಾರಕ್ಕೆ ಎಡೆಗುಡದೆ ಲಿಂಗ ತನುವಾಗಿರಬೇಕು.
ಅಹಂಕಾರರಹಿತವಾದಲ್ಲಿ ಸನ್ನಿಹಿತ, ಕಾಣಾ,
ಕೂಡಲಸಂಗಮದೇವ.

ಮೇಲ್ಕಾಣಿಸಿದ ವಿಕಾರಗಳನ್ನು ತೊರೆದ ಭಕ್ತನು ತನ್ನಂತರಂಗದಲ್ಲಿ ವಿನಯಭಾವವನ್ನು ಬೆಳೆಸಬೇಕು. ವಿನೀತಭಾವದಿಂದ ನಡೆಯಬೇಕು, ನುಡಿಯಬೇಕು. ಅದರಿಂದ ಅವನಿಗೆ ಸದಾಶಿವನ ಒಲುಮೆಯು ಲಭಿಸುವದು, ಎಂಬುದು ಬಸವಣ್ಣನವರ ಹೇಳಿಕೆ :

ಕಂಡ ಭಕ್ತರಿಗೆ ಕೈ ಮುಗಿವಾತನೇ ಭಕ್ತ:
ಮೃದುವಚನವೇ ಸಕಲ ಜಪಂಗಳಯ್ಯಾ,
ಮೃದುವಚನವೇ ಸಕಲ ತಂಪಂಗಳಯ್ಯಾ,
ಸದುವಿನಯವೇ ಸದಾಶಿವನೊಲಿಮೆಯಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.
ನುಡಿದರೆ ಮುತ್ತಿನ ಹಾರದಂತಿರಬೇಕು.
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು.
vನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು.
ನುಡಿದರೆ ಲಿಂಗ ಮೆಚ್ಚಿ ಅಹುದಹುದೆ'ನಬೇಕು.
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯಾ?

ನಡೆನುಡಿಯಲ್ಲಿಯ ಈ ಬಗೆಯ ವಿನಯದ ಜೊತೆಯಲ್ಲಿ ಭಕ್ತನಲ್ಲಿ ಛಲವಿರಬೇಕು, ಸದಾಗ್ರಹಬೇಕು, ಹಿಡಿದ ನೇಮವನ್ನು ಕೊನೆಯವರೆಗೆ ನಡೆಯಿಸುವ ಹಟ ಬೇಕು.

ಛಲ ಬೇಕು ಶರಣಂಗೆ 'ಪರಧನವನೊಲ್ಲೆನೆಂಬ
ಛಲ ಬೇಕು ಶರಣಂಗೆ 'ಪರಸತಿಯನೊಲ್ಲೆನೆಂಬ
vಛಲ ಬೇಕು ಶರಣಂಗೆ 'ಪರದೈವವನೊಲ್ಲೆನೆಂಬ
ಛಲ ಬೇಕು ಶರಣಂಗೆ 'ಲಿಂಗಜಂಗಮ ಒಂದೇ' ಎಂಬ