ಈ ಪುಟವನ್ನು ಪ್ರಕಟಿಸಲಾಗಿದೆ

122

ನಮ್ಮ ಕೂಡಲಸಂಗಮದೇವರನರಿಯದೆ
ನರಕಕ್ಕೆ ಭಾಜನರಾದಿರಲ್ಲಾ!
ಸ್ವಾಮಿಭತ್ಯ ಸಂಬಂಧಕ್ಕೆ ಆವುದು ಪಥವೆಂದರೆ
ದಿಟವ ನುಡಿವುದು, ನುಡಿದಂತೆ ನಡೆವುದು.
ನುಡಿದು ಹುಸಿವ, ನಡೆದು ತಪ್ಪುವ
ಪ್ರಪಂಚಯನೊಲ್ಲ ಕೂಡಲಸಂಗಮದೇವ.
ಸತ್ಯದ ತರುವಾಯ ಬಸವಣ್ಣನವರು ಪ್ರೇಮವನ್ನು ಬೆಳೆಸಲು,

ಬಳಸಲು ಬೋಧಿಸುವರು. ಪ್ರೇಮವು ಲೋಕದಲ್ಲಿ ದಯೆಯ ಶುದ್ಧ ಸ್ವರೂಪದಲ್ಲಿ ಕಾರ್ಯಕಾರಿಯಾಗಬೇಕೆಂದು ಬಸವಣ್ಣನವರು ಉಸಿರಿರುವರು.

ದಯವಿಲ್ಲದ ಧರ್ಮದಾವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ,
ದಯವೇ ಧರ್ಮದ ಮೂಲವಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ !

ತರುವಾಯ ಬಸವಣ್ಣನವರು ಕಾಮಕ್ರೋಧಾದಿ ವಿಕಾರಗಳನ್ನು ತಡೆಯಲು ಬೋಧಿಸುವರು. ಇದೇ ನೀತಿಯ ಸಂಯಮರೂಪಿಯಾದ ಪ್ರಧಾನ ಅಂಗ.

ನೂರನೋದಿ ನೂರ ಕೇಳಿದರೇನು?
ಆಸೆ ಹರಿಯದು, ರೋಷ ಬಿಡದು,
ಮಜ್ಜನಕ್ಕೆರೆದು ಫಲವೇನು?
ಮಾತಿನಂತೆ ಮನವಿಲ್ಲದ ಜಾತಿಡೊಂಬರ ನೋಡಿ
ನಗುವ ನಮ್ಮ ಕೂಡಲಸಂಗಮದೇವ.
ಆರತವಡಗದು, ಕ್ರೋಧ ತೊಲಗದು ;
ಕ್ರೂರ ಕುಭಾಷೆ ಕುಹಕ ಬಿಡದನ್ನಕ್ಕ
ನೀನೆತ್ತ ಶಿವನೆ ? ಹೋಗಯ್ಯಾ ಮರುಳೇ !
ಅಹಂಕಾರ ಮನವನಿಂಬುಗೊಂಡಲ್ಲಿ