ಈ ಪುಟವನ್ನು ಪ್ರಕಟಿಸಲಾಗಿದೆ
136

ಹರುಷದೊಳಿದಿರ್ಗೊಂಬೆ. ಬೇಡಿದುದ ಶರಣರ್ಗ ಇಲ್ಲೇನ್ನದೀವೆ. ಬೇಡಲೊಲ್ಲದವರ್ಗೆ ಮಿಗಿಲಾಗಿ ಆರಾಧಿಪೆ... ಜಂಗಮ ಪ್ರಾಣಿಯಾಗಿಪ್ಪೆ, ಶಿವಲಿಂಗಾರ್ಚಿತವಲ್ಲುದುದನಾಘ್ರಾಣಿಸಿ, ನೋಡೆ, ಕೇಳ, ನುಡಿಯ, ಮುಟ್ಟೆ ಶಿವಸಮಯನನುದ್ಧರಿಸುವೆ. ಪರಸಮಯಂ ಸಂಹರಿಸುವೆ. ಲಿಂಗದಲ್ಲಿ ಕಠಿಣಮಂ ಕೇಳೆ, ಜಂಗಮದಲ್ಲಿ ಜಾತಿಯನರಸೆ, ಪ್ರಸಾದದಲ್ಲಿ ಅಪವಿತ್ರತೆಯನ್ನರಿಯೆ, ಪರಾಂಗನೆಯರಂ ಹೆತ್ತ ತಾಯೆಗಳೆಂಬೆ, ಪರದ್ರವ್ಯಮಂ ಕಿಲ್ಪಿಷವೆಂದು ಮುಟ್ಟಿ ನುಡಿದು ಹುಸಿಯ, ಹಿಡಿದು ಬಿಡೆ, ಬಿಟ್ಟು ಹಿಂಗಲೀಯೇ, ಕೊಟ್ಟಂ ನೆನೆಯೆ, ನಟ್ಟಂ ಕೇಳೆ, ಮುಟ್ಟೆ ಪೆರಪಿಂಗೆ, ಕೂಡಿ ತಪ್ಪೆ ನೋಡಿ ನಿರಾಕರಿಸಿ, ನೆನೆದು ಮರೆಯೆ, ಮನದೊಳೊವರಿಯಿಲ್ಲ, ಬುದ್ಧಿಯೊಳು ವಿಸಂಚವಿಲ್ಲ, ಅಹಂಕಾರದೊಳು ಗರ್ವವಿಲ್ಲ ಚಿತ್ತದೊಳು ಹೊರೆ ಇಲ್ಲ ಕಾಮವಿಲ್ಲ ಕೋಪದ ಮಾತೇಕೆ ? ಲೋಭದ ಗಾಳಿ ತೀಡದು, ಮೋಹಕ್ಕೆ ತೆರಹಿಲ್ಲ. ಮದದ ಸಂಗಡ ಸೊಗಡು ಹೋದ್ದದು. ಮತ್ಸರಕ್ಕೆ ಇಂಬಿಲ್ಲ. ಬಸವರಾಜ ! ನಿನ್ನ ಗುಣಂಗಳಂ ಬಣ್ಣಿಸಲೆಮ್ಮಳವಲ್ಲ, ಈಶನ ಮೀಸಲಪ್ಪ ಭಕ್ತ ನಿನಗೆಣೆಯಲ್ಲ ಪಡಿಯಿಲ್ಲ. ಪಾಸಟಿಯಾವಂ? ಪಾಷಂಢಭೂಮಿಯೊಳು ಶಿವಭಕ್ತಿಯನು ಆರಂಭಿಸಿ, ಸಾಮರ್ಥ್ಯಮಂ ಬಿತ್ತಿ ಪ್ರತ್ಯಕ್ಷಂಗಳಂ ಬೆಳೆದು, ಗಣಪರ್ವಂಗಳಂ ಸುಫಲಂ ಮಾಡಲೆಂದು ಬಂದ ಕಾರಣಿಕ ಬಸವ ! ನಿನ್ನ ದೆಸೆಯಿಂದೆಮ್ಮ ಭಕ್ತಿ ಬಣ್ಣವೇರಿತು !೩೦
ಹರಿಹರನು ಬಸವಣ್ಣನವರ ಸದ್ಭಕ್ತಿ-ಸದಾಚಾರಗಳನ್ನು ಮನವಾರೆ ಕೊಂಡಾಡಿರುವ. ಬಸವಣ್ಣನವರ ಭಕ್ತಿ ನಿಷ್ಠೆ, ಅನನ್ಯತೆ, ಆತ್ಮಾರ್ಪಣಗಳು, ಅವರ ಸತ್ಯ, ಶೀಲ- ಛಲ, ಸರಲತೆ-ಸಮತೆ- ಔದಾರ್ಯ, ಆತಿಥ್ಯಗಳು ತುಂಬ ಅಪ್ರತಿಮವಾದವುಗಳು. ಅವರಲ್ಲಿ ಕಾಮವಿರಲಿಲ್ಲ. ಅವರು 'ಈಶನ ಮೀಸಲಪ್ಪ ಭಕ್ತರು. ಅವರು ಶಿವಸಮಯವನ್ನು ಶೈವಧರ್ಮವನ್ನು ಉದ್ದರಿಸಿದ ಕಾರಣಿಕ ಪವಾಡ
——
೩೦. ಬ. ರ. ಪು. ೫೦-೧೧