ಪುರುಷರು. ಅವರಿಗೆ 'ಪಾಸಟಿಯಾವಂ' ಸಮಾನರು ಯಾರು? ಎಂದು
ಹರಿಹರನು ಕೇಳುವ.
ಇದಾಯಿತು ಹಿಂದಿನ ಹಿರಿಯರು ಬಸವಣ್ಣನವರಿಗೆ ಸಲ್ಲಿಸಿದ
ಆದರದ ಅಂಜಲ. ಇನ್ನು ಇಂದಿನ ಹಿರಿಯರಿಬ್ಬರು, ಅವರ ಪುಣ್ಯಸ್ಮೃತಿಗೆ
ಅರ್ಪಿಸಿದ ಸಾದರ ಕಾಣಿಕೆಯನ್ನು ನೋಡಿ. ಮೇಲ್ಕಾಣಿಸಿದ ಬಣ್ಣನೆಯು
ಬಸವಣ್ಣನವರ ಉನ್ನತ ಜೀವನವನ್ನು ಬೆಳಗುವಂತೆ - ಮುಂದಿನದು
ಅವರ ಮಹಾಕಾರ್ಯದ ಅಲೌಕಿಕತೆಯನ್ನು ಎತ್ತಿ ತೋರಿಸುವದು.
“ಬಸವಣ್ಣನವರು ಕೈ ಹಿಡಿದು ಧೈರ್ಯವನ್ನೂ ತಿಳಿವಳಿಕೆಯನ್ನೂ
ತುಂಬ ನೈಜಶಕ್ತಿಯನ್ನೂ ನೈಜಸ್ವರೂಪವನ್ನೂ ತಿಳಿಯಪಡಿಸಿದ್ದರಿಂದ
ಅನೇಕರಲ್ಲಿ ಚಿಜ್ಯೋತಿಯು ಬೆಳಗಿ ಅಜ್ಞಾನಾಂಧಕಾರವು ತೊಲಗಿತು.
ಕರ್ಮಪಾಶಗಳು ಉರಿದುಹೋದವು. ಈ ಮಾನವ ಶರೀರದಲ್ಲಿ
ಅಡಗಿರುವ, ನಾನಾ ಕರ್ಮ ಬಂಧನಗಳಿಂದ ಬಿಗಿವಡೆದಿರುವ, ಅನೇಕ
ದೌರ್ಬಲ್ಯಗಳಿಂದ ಕುಗ್ಗಿ ಹೋಗಿರುವ, ಅಂತರಾತ್ಮನನ್ನು ಅವರು ಹೀಗೆ
ಬಿಡುಗಡೆ ಮಾಡಿದರು. ಆ ಅಂತರಾತ್ಮನನ್ನು ಸ್ವಯಂಪ್ರಕಾಶಕನೆಂಬುದು
ಲಕ್ಷಾಂತರ ಜನಗಳಿಗೆ ಗೋಚರಿಸಿತು. ಅವರೆಲ್ಲರೂ ಭೂಲೋಕದಲ್ಲಿದ್ದು
ಮುಕ್ತಜೀವರಾದರು. ಆ ಮಹಾನುಭಾವರೆಲ್ಲರೂ ತಾವು ಕಂಡುಕೊಂಡ
ಸತ್ಯವನ್ನು ಇಲ್ಲಿ ಪ್ರಸಾರಮಾಡತೊಡಗಿದರು... ತಮ್ಮಲ್ಲಿದ್ದ
ಅವಲೋಹವನ್ನು ಕಳೆದು ಅಪರಂಜಿಗಳನ್ನಾಗಿ ಮಾಡಿದ
'ಬಸವಣ್ಣನವರಿಗೆ, ಅವರು ಕೃತಜ್ಞರಾಗಿರರೇಕೆ !... ನೂರಾರು
ವರ್ಷಗಳಾದರೂ ಲಕ್ಷಾಂತರ ಜನರ ಮೇಲೆ ಬಸವಣ್ಣನವರ
ಪ್ರಭಾವಮುದ್ರೆಯು ಮಾಸದಿರಬೇಕಾದರೆ, ಆ ಮಹಾನುಭಾವರಲ್ಲಿ
ಅದ್ಭುತ ಮೂರ್ತಿಸ್ವರೂಪವಿದ್ದಿರಬೇಕು. ಅವರಲ್ಲಿ ದಿವ್ಯ ತೇಜಸ್ಸು
ಇದ್ದಿರಬೇಕು.
“ಬಸವಣ್ಣನವರ ಜೀವನ ಚರಿತ್ರೆಯು ಇಂತಹದು. ಅಭಿಮಾನಶಾಲಿಗಳಾದ ವೀರಶೈವ ಮಹಾಜನಗಳು ಬಸವಣ್ಣನವರನ್ನು ಕೇವಲ ನಂದೀಶ್ವರನ ಅವತಾರವೆಂದು ಭಾವಿಸಲಿ, ಅಭಿಜ್ಞರು ಅವರನ್ನು