ಈ ಪುಟವನ್ನು ಪ್ರಕಟಿಸಲಾಗಿದೆ

138
ಮಾನವರಾಗಿ ಜನಸಿ ದೇವತ್ವಕ್ಕೆ ಏರಿದ ಮಹಿಮಾಪುರುಷರೆಂದೇ ಭಾವಿಸಲಿ, ಬಸವಣ್ಣನವರು ಮಾಡಿದ ಕಾರ್ಯನಿರ್ವಾಹದಿಂದ ಅವರನ್ನು ನಾವು ಕಾರಣಪುರುಷರೆಂದು ಹೇಳಲೇಬೇಕು. ಪ್ರಪಂಚದ ಇತಿಹಾಸದಲ್ಲಿ ಮತಸ್ಥಾಪಕರೂ ಮತೋದ್ಧಾರಕರೂ ಯಾವುದೊಂದು ಚಿತ್ಕಳೆಯನ್ನು ಪಡೆದು ಭಗವಂತನ ಸಂಕಲ್ಪಕ್ಕಾಗಿ ಅವತರಿಸಿದರೋ, ಅದೇ ಚಿತ್ಕಳೆಯನ್ನು ಪಡೆದು ಬಸವಣ್ಣನವರ ಅವತಾರ ಮಾಡಿದರು. ಮತಪ್ರಚಾರಕರಾಗಿ ಅವರ ಸ್ಥಾನವು ಅತಿ ಉನ್ನತವಾಗಿದೆ. ತತ್ತ್ವಬೋಧಕರಾಗಿ ಅವರ ಸ್ಥಾನ ಇನ್ನೂ ಉನ್ನತವಾಗಿದೆ. ಭಕ್ತರಾಗಿ ಅವರ ಸ್ಥಾನ ಅತ್ಯುನ್ನತವಾಗಿದೆ. ಇಂತಹ ಮಹಾತ್ಮರು ಕರ್ನಾಟಕದಲ್ಲಿ ಅವತರಿಸಿದರು. ಕರ್ನಾಟಕದ ಕೀರ್ತಿ ಅವರಿಂದಲೂ ಹೆಚ್ಚಿರುವದು. ಸಮಾಜಸುಧಾರಣೆಗಾಗಲಿ, ರಾಷ್ಟ್ರಸುಧಾರಣೆಗಾಗಲಿ, ಅವರು ಹಾಕಿರುವ ಮೇಲ್ಪಜ್‌ಯನ್ನು ಇಂದಿಗೂ ನಾವು ಅನುಸರಿಸಬೇಕಾಗಿದೆ. ಅವರ ವಚನಗಳಿಂದ ಅವರ ಮೂರ್ತ ಸ್ವರೂಪವನ್ನು ಚಿತ್ರಿಸಿ, ಅವರ ಕಾರ್ಯಕಲಾಪಗಳಿಂದ ಅವರ ಮಹಿಮೆಯನ್ನು ರೂಪಿಸಿ, ಲೋಕದ ಮುಂದೆ ನಿಜವಾದ ಬಸವಣ್ಣನವರನ್ನು ಸ್ಥಾಪಿಸುವದೊಂದೇ ಅವರಿಗೆ ನಾವು ನ್ಯಾಯವಾಗಿ ಸಲ್ಲಿಸುವ ಭಕ್ತಿಯ ಕಾಣಿಕೆಯಾಗಿರುತ್ತದೆ. ಬಸವಣ್ಣನವರು ವೀರಶೈವರಿಗೆ ಮಾತ್ರ ಸಂಬಂಧಪಟ್ಟವರಲ್ಲ; ಅವರು ಇಡೀ ಭರತಖಂಡಕ್ಕೆ, ಇಡಿ ಪ್ರಪಂಚಕ್ಕೆ ಸಂಬಂಧಪಟ್ಟ ಮಹಾಪುರುಷರು.೩೧
ಬಸವಣ್ಣನವರ ವ್ಯಕ್ತಿತ್ವದ ಹಾಗೂ ಅವರ ವಚನಗಳ ಅಲೌಕಿಕ ಹಿರಿಮೆಯನ್ನು ಕುರಿತು, ಇನ್ನೊಬ್ಬ ಹಿರಿಯರ ಅಭಿಮತವನ್ನು ಅರುಹಿ ಮುಂದುವರಿಯುವೆ.
ಪ್ರಭುದೇವನು ಹಿರಿಯ ಜ್ಞಾನಿಯಾದರೆ, ಬಸವೇಶ್ವರನು ಹಿರಿಯ ಭಕ್ತ ಬೇರೆಬೇರೆಯಾಗಿ ಬೆಳೆದು ಎತ್ತರದಲ್ಲಿ ಬೆರೆತ ಮರಗಳಂತೆ ಅವರು
————
೩೧. ಭ.ಬ. ಪು. ೧೭೫-೧೭೬