ಈ ಪುಟವನ್ನು ಪ್ರಕಟಿಸಲಾಗಿದೆ
149

ಜಗತ್ತನ್ನೇ ಕಾಣುವದಿಲ್ಲ.. ನಮ್ಮ ನೆರೆಯವರೆಂದರೆ ನಾವೇ ಇರುವ ಮೂಲಕ, ಅವರನ್ನು ನಾವು ಪ್ರೀತಿಸಬೇಕು. ಈ ಪ್ರೀತಿಯು ಪ್ರಕೃತಿಯಲ್ಲಿಯ ಹಾಗೂ ಸದ್ರೂಪದಲ್ಲಿಯ ಏಕತೆಯ ಅರಿವಿನ ಫಲ - ಕುರುಹು, ಆದುದರಿಂದ ಪ್ರೇಮವು ಸತ್ಯದಿಂದ ಭಿನ್ನವಾದ, ಬೇರೆಯಾದ ಮಾತಲ್ಲ, ಅದು ಜೀವನದಲ್ಲಿ ಏಕತೆಯಿದೆ ಎಂಬ ಸತ್ಯದ, ಭಾವನೆಯ ಮುಖಾಂತರ ಪ್ರತೀತವಾದ ಅರಿವು, ಪ್ರೇಮವು ತೀರ ಸಹಜವಾದುದು. ಪ್ರೇಮದಲ್ಲಿ ಒತ್ತಾಯಕ್ಕೆ, ಕರ್ತವ್ಯಬುದ್ಧಿಗೆ ಎಡೆಯಿಲ್ಲ.
ಮಾನವನಲ್ಲಿಯ ಈ ಪ್ರೀತಿಯ ಹೊನಲು ಭಗವಂತನೆಡೆ ಹರಿಯಿತೆಂದರೆ, ಅದು ಭಕ್ತಿಯಾಗಿ ಪರಿಣಮಿಸುವದು. ಭಕ್ತವರರಾದ ಬಸವಣ್ಣನವರು ಅಂಥ ಭಕ್ತಿಯನ್ನು ಬಲವಾಗಿ ಬೋಧಿಸಿರುವರು. ಭಗವಂತನು ಅದೆಂತಹನು? ಅವನು ಅದೆಲ್ಲಿರುವ? ಭಗವಂತನು “ಏಕೋದೇವನು', 'ದೇವನೊಬ್ಬ ನಾಮ ಹಲವು ಎಂಬುದು ಬಸವಣ್ಣನವರ ಹೇಳಿಕೆ. ಇದು 'ಏಕಂ ಸತ್ ವಿಪ್ರಾ ಬಹುಧಾ ವದಂತಿ', ಸಚ್ಚಿದಾನಂದ ಪರಮಾತ್ಮನು ಒಬ್ಬನು, ಹಿರಿಯರು ಆತನನ್ನು ಬಗೆಬಗೆಯ ಹೆಸರುಗಳಿಂದ ಕರೆದಿರುವರು ಎಂಬ ನಮ್ಮ ಋಷಿಗಳ ವಚನದ ಅನುವಾದವೇ ಸರಿ! ಬಸವಣ್ಣನವರ ಈ ಮಾತನ್ನು ಅವರ ಪರಂಪರೆಯಲ್ಲಿ ಬೆಳೆದ ಮುಂದಿನ ಶರಣರು ಚೆನ್ನಾಗಿ ವಿಶದೀಕರಿಸಿರುವರು. ಅವರಲ್ಲಿ ಸರ್ವಜ್ಞನು ಅರುಹುದೇನೆಂದರೆ :
ಒಬ್ಬನಲ್ಲದೆ ಜಗಕೆ ಇಬ್ಬರುಂಟೇ ಮತ್ತೆ ।
ಒಬ್ಬ ಸರ್ವಜ್ಞ ಕರ್ತನು, ಜಗಕೆಲ್ಲ ।
ಒಬ್ಬನೇ ದೈವ ಸರ್ವಜ್ಞ ॥
ಆ ದೇವ ಈ ದೇವ ಮಾದೇವನೆನಬೇಡ ।
ಆ ದೇವರ ದೇವ ಭುವನ ಪ್ರಾಣಿಗಳ ।
ಗಾದವನೆ ದೇವ ಸರ್ವಜ್ಞ ॥
ದೇವನು ಒಬ್ಬ. ಆತನೇ ದೇವರ ದೇವ. ಆತನೇ ಭುವನಕ್ಕೂ ಪ್ರಾಣಿಗಳಿಗೂ 'ಆದವನು' ಅಂದರೆ ಅವರ ಸೃಷ್ಟಿ-ಸ್ಥಿತಿ-ಲಯಗಳಿಗೆ