ಈ ಪುಟವನ್ನು ಪ್ರಕಟಿಸಲಾಗಿದೆ
151

ಇನ್ನು ಈ ಭಕ್ತಿಯ ಸ್ವರೂಪವೇನು ? ಅದರ ಪ್ರಧಾನ ಅಂಗಗಳಾವವು ? ಭಗವಂತನಲ್ಲಿಯ ಪರಮಪ್ರೀತಿಯೇ ಭಕ್ತಿ, ಅದು ಪ್ರಖರ ವೈರಾಗ್ಯದಲ್ಲಿಯೂ ಸೇವೆಯಲ್ಲಿಯೂ ಅನನ್ಯ ಚಿಂತನದಲ್ಲಿಯೂ ಉತ್ಕಟ ಶರಣಾಗತಿಯಲ್ಲಿಯೂ ಪರಿಣಿತವಾಗಬೇಕು. ವಿಷಯ ಪ್ರೀತಿಯೂ ಭಗವಂತನ ಭಕ್ತಿಯೂ ಒಂದೆಡೆ ನಿಲ್ಲಲರಿಯವು. ಓರ್ವ ಹಿಂದೀ ಸಂತ ಕವಿಯು ಉಸುರಿದ ಮೇರೆಗೆ
ಚಾಖೇ ಚಾಹೇ ಪ್ರೇಮರಸ, ಚಾಖೇ ಚಾಹೇ ಮಾನ ।
ಏಕ ಮ್ಯಾನಮ್ ದೋ ಖಡ್ಗ ದೇಖಾ ಸುನಾ ನ ಕಾನ ॥

“ಬೇಕಾದರೆ ಭಕ್ತಿರಸವನ್ನು ಸವಿ, ಇಲ್ಲವೇ ಕೀರ್ತಿಯನ್ನು ಪಡೆ. ಎರಡೂ ಏಕಕಾಲಕ್ಕೆ ನಿನಗೆ ದೊರೆಯಲರಿಯವು. ಒಂದು ಒರೆಯಲ್ಲಿ ಎರಡು ಕತ್ತಿಗಳನ್ನಿಡಬಹುದೇ ? ಹಾಗೆ ಮಾಡಿದುದನ್ನು ನಾನು ಕಂಡಿಲ್ಲ ಕೇಳಿಲ್ಲ. ಇಲ್ಲಿ ಕೀರ್ತಿ-ಮಾನಮರ್ಯಾದೆ - ಇವು ವಿಷಯಸುಖದ ಪ್ರತೀಕಗಳು. ಅದಕ್ಕಾಗಿಯೇ ಬಸವಣ್ಣನವರು 'ವಿಷಯರಹಿತನ ಮಾಡಲು ಪರಶಿವನನ್ನು ಬೇಡಿಕೊಂಡರು. ಮುಕ್ತಿಮಿಚ್ಛಸಿ ಚೇತ್ ತಾತ, ವಿಷಯಾನ್ ವಿಷವತ್ ತ್ಯಜ !" "ಮುಕ್ತಿಯನ್ನು ಬಯಸುವಿಯಾದರೆ ವಿಷಯಗಳನ್ನು ವಿಷವೆಂದು ಬಗೆದು ಅವನ್ನು ತೊರೆ ಎಂದು ಬೇರೆ ಹಿರಿಯರೂ ಬೋಧಿಸಿರುವರು. ಶ್ರೀ ಸಮರ್ಥ ರಾಮದಾಸರೂ ಕೂಡ ಇದನ್ನೆಯೆ ಹೇಳಿರುವರು :

ವಿಷಯಜನಿತ ಜೇಖೇ ಸುಖ ತೇಥೇಚ ಹೋತೇ ಪರಮದುಃಖ
ಆಧೀ ಗೋಡ ಅಂತೀ ಶೋಕ । ನೇಮಸ್ತ ಆಹೇ ॥
ಜಯಾಸಿ ವಾಟೇ ಸುಖಚಿ ಅಸಾವೇ । ತೇಣೇ ರಘುನಾಥ ಭಜನೀ
ಲಾಗಾವೇ ।
ವಿಷಯ ಸಕಳ ಹಿ ತ್ಯಾಗಾವೇ । ದುಃಖಮೂಳ ಜೇ ॥
ವಿಷಯಜನಿತ ಸುಖವೇ ಹಿರಿಯ ದುಃಖವನ್ನು ನೀಡುವದು. ಅದು ಆದಿಯಲ್ಲಿ ಸಿಹಿ, ಕೊನೆಗೆ ಕಹಿಯಾಗಿರುವದು. ಆದುದರಿಂದ ನಿಜವಾದ