ಈ ಪುಟವನ್ನು ಪ್ರಕಟಿಸಲಾಗಿದೆ

ಅಲೆ : ಒಂದು

ಪೀಠಿಕೆ

ಈಶ-ಸಂಕಲ್ಪ:

ಅಸತಿನಿಂದ ಸತ್ಯದೆಡೆಗೆ | ಕತ್ತಲೆಯಿಂದ ಜ್ಯೋತಿಯೆಡೆಗೆ |
ಮೃತ್ಯುವಿನಿಂ ಅಮೃತಬಾಳಿ | ನೆಡೆಗೆ ನಡೆಯಿಸೈ ||

ಅಸತ್ತು ಅಶಾಶ್ವತ-ಅನೇಕ ; ಸತ್ತು ಶಾಶ್ವತ- ಏಕ. ಕತ್ತಲೆಯು ಅಜ್ಞಾನ; ಜ್ಯೋತಿಯು ಜ್ಞಾನ. ಮೃತ್ಯು ದುಃಖ, ಅಮೃತವು ಆನಂದ. ವಿಶ್ವವು ಅಶಾಶ್ವತ- ಅನೇಕ ; ವಿಶ್ವಂಭರನು ಶಾಶ್ವತನು-ಏಕನು, ವಿಶ್ವವು ಅಜ್ಞಾನಮಯ ; ವಿಶ್ವಂಭರನು ಜ್ಞಾನಮಯನು. ವಿಶ್ವವು ದುಃಖಪೂರ್ಣ; ವಿಶ್ವಂಭರನು ಆನಂದಪೂರ್ಣನು. ಈ ಅಶಾಶ್ವತವಾದ ಅನೇಕತೆಯಿಂದ, ಈ ಮರವಿನ ಕತ್ತಲೆಯಿಂದ, ಈ ಸಾವಿನ ನೋವಿನಿಂದ, ಶಾಶ್ವತವಾದ ಏಕನೆಡೆಗೆ, ಆರವಿನ ಜ್ಯೋತಿಯೆಡೆಗೆ, ಸಾವಿರದ ನಲಿವಿನೆಡೆಗೆ, ತಮ್ಮನ್ನು ನಡೆಯಿಸಲು, ಋಷಿಗಳು ಭಗವಂತನನ್ನು ಪ್ರಾರ್ಥಿಸಿರುವರು. ಅದೇ ಮಾನವನು ಮುಟ್ಟಬೇಕಾದ ಹಿರಿಯ ಗುರಿ; ಅದೇ ಮಾನವ ಜೀವನದ-ಮಾನವತೆಯ ಜೀವನದ ದಿವ್ಯ ಆದರ್ಶ. ಈಶನೂ ಅದನ್ನೆಯೇ ಬಯಸುವಂತೆ ಕಾಣುವುದು. ತನ್ನ ಮಾಯೆಯ ತೆರೆಯ ಮರೆಯಲ್ಲಿ ನಿಂತು ಅವನು ಅದನ್ನೆಯೆ ನಡೆಸಿರುವನು. ಅದರ ಫಲವಾಗಿಯೇ -

ಒಂದರಾ ಮೊದಲಲ್ಲಿ ಬಂದಿರುವ ಜಗವೆಲ್ಲ
ಒಂದರಾನಂದದಲಿ ನಲಿವುದಕೆ ನಡೆದಿಹುದು !

ಆದರೆ ಈ ಸಂಕಲ್ಪವನ್ನು ಅರಿಯುವದೆಂತು ? ಓರ್ವ ಆಧುನಿಕ ಅನುಭಾವಿಗಳು ಉಸುರಿದ ಮೇರೆಗೆ - “ಭಗವಂತನು ಹಲವು ಘಟನೆಗಳ ಮುಖಾಂತರವಾಗಿ ತನ್ನ ಸಂಕಲ್ಪವನ್ನು ಅರುಹುವನು." (God speaks through events) ಇತಿಹಾಸ ದರ್ಶನದ ಪ್ರಬಲ