ಈ ಪುಟವನ್ನು ಪ್ರಕಟಿಸಲಾಗಿದೆ

2

ಪಂಜನ್ನು ಹಿಡಿದು ನೋಡಿದರೆ, ಇಂದಿನವರೆಗೆ ನಡೆದ ಹಲ ಸಂಗತಿಗಳು ನಮಗೆ ಅದೇನನ್ನು ಕಾಣಿಸುವವು? ಸಂಸ್ಕೃತಿ- ಮಂದಾಕಿನಿಯು ಕೆಲವು ಮಹಾಮಹಿಮರ ಉತ್ತುಂಗ ಶಿಖರಗಳಿಂದಿಳಿದು, ಬರಬರುತ್ತ ಅನೇಕರನ್ನು ಪಾವನಗೊಳಿಸುತ್ತ ಮಾನವತೆಯ ಮಹಾರ್ಣವವನ್ನು ಸಾರಲಿರುವಳು, ಸೇರಲಿರುವಳು. ಅದರ ಫಲವಾಗಿ ಮಾನವನು ಮೇಲ್ಕಾಣಿಸಿದ ಮೇರೆಗೆ ಅಶಾಶ್ವತವಾದ ಅನೇಕತೆಯಿಂದ, ಶಾಶ್ವತವಾದ ಏಕತೆಯೆಡೆಗೆ, ಅಳಿಯುವ ಭೌತಿಕ ಸುಖದಿಂದ ಅಳಿಯದ ಅತ್ಯಾನಂದದೆಡೆಗೆ, ಸಾಗಿರುವ. ಪರಮಾತ್ಮನಿಂದ ಕೆಳಗಿಳಿಸಿದ ವಿಶ್ವರಥವು ಮರಳಿ ಆತನೆಡೆ ನಡೆದಿದೆ. ಅದನ್ನು ಮುಂದೂಡಲು ಪರಮಾತ್ಮನು ಎರಡು ಸಾಧನಗಳನ್ನು ಬಳಸಿರುವ ಒಂದು ವಿಕಾಸ, ಇನ್ನೊಂದು ವಿಪ್ಲವ. ವಿಕಾಸದ ಕಾರ್ಯವು ತುಂಬ ನಿಧಾನವಾಗಿ ಸಾಗುವದು. ಆದರೆ ವಿಪ್ಲವದ ಪರಿವರ್ತನವು ಕೂಡಲೇ ಜರುಗುವದು. ವಿಶ್ವಜೀವನದ, ಮಾನವ ಜೀವನದ ಎಲ್ಲ ಕ್ಷೇತ್ರಗಳಲ್ಲಿ ನಾವು ಈ ಉಭಯವಿಧ ಸಾಧನಗಳ ಕೈವಾಡವನ್ನು ಕಾಣಬಹುದು. ಅದರ ಫಲವಾಗಿ,

ಹಳೆಯ ರೀತಿಯ ಅಳಿದು ಹೊಳೆಯುವದು ಹೊಸದಲ್ಲಿ.
ದೇವ ತನ್ನಿಷ್ಟ ನಡೆಸುವನು ಬಗೆಬಗೆಯಲ್ಲಿ!

ಇದೇ ಪ್ರಗತಿ-ಪುರೋಗಮನ!

ಇತಿಹಾಸ- ದರ್ಶನವು ಇನ್ನೊಂದು ಸಂಗತಿಯನ್ನು ಕಾಣಿಸುವುದು. ಈ ವಿಶ್ವರಥದ ಗತಿಯು ಅನಾದಿಯು, ಅನಂತವು. ಅದರ ಆದಿಯೂ ಕಾಣದು-ತಿಳಿಯದು, ಅಂತವೂ ಕಾಣದು-ತಿಳಿಯದು. ಅದು ಸಾಗಿರುವುದು ತುಂಬ ನಿಧಾನವಾಗಿ. ಆದರೆ ಅದರೊಡನೆ ಹೊರಟ ಕೆಲವು ಹಿರಿಯ ಮಾನವರು, ತುಂಬ ಭರದಿಂದ ನಡೆದು ತಮ್ಮ ಪ್ರಗತಿಯನ್ನು ಬೇಗ ಸಾಧಿಸಿಕೊಂಡಿರುವರು. ತಮ್ಮ ಬುದ್ದಿಬಲದಿಂದ ಅವರು ಭಗವಂತನನ್ನು ಅರಿತು, ಭಾವಬಲದಿಂದ ಆತನನ್ನು ಒಲಿಸಿದರು, ನಲಿಸಿದರು; ತಪೋಬಲದಿಂದ ಜಪ-ಧ್ಯಾನಾದಿ ಸಾಧನ ಬಲದಿಂದ ಆತನ ಕರುಣವನ್ನು ಪಡೆದರು; ಹಾಗೂ ಜಾಗೃತವಾದ ಅಂತಃಪ್ರಜ್ಞೆಯ