ಈ ಪುಟವನ್ನು ಪ್ರಕಟಿಸಲಾಗಿದೆ

14
ಕೂಡಲೇ ಅಲ್ಲಿಂದ ಮಾಯವಾದ.
ಯಥಾಕಾಲಕ್ಕೆ ಮಗುವಿನ ಜಾತಕರ್ಮಗಳು ನೆರವೇರಿಸಲಾದವು. ನಂದಿಕೇಶ್ವರನ ಪ್ರಸಾದದಿಂದ ಜನಿಸಿದ ಮೂಲಕ ಮಗುವಿಗೆ 'ಬಸವ' ಎಂಬ ಮುದ್ದು ಹೆಸರು ಇಡಲಾಯಿತು. ಬಸವನು ಕೆಲಕಾಲ ತನ್ನ ಮುಗ್ಧಲೀಲೆಗಳಿಂದ ತಂದೆತಾಯಂದಿರನ್ನು ಸಂತಸದ ಕಡಲಲ್ಲಿ ತೇಲಿಸಿದನು, ಮುಳುಗಿಸಿದನು. ಆದರೆ ಆತನ ಬಾಲಕೇಳಿಗಳನ್ನು ಕಂಡು ತಣಿಯುವ ಭಾಗ್ಯ ಅವರಿಗೆ ಲಭಿಸಲಿಲ್ಲ. ಹಾಗೂ ಅವರ ಒಲವಿನ ನೆಳಲಲ್ಲಿನಲಿಯುವ ಭಾಗ್ಯ ಅವನಿಗೆ ಬಹುಕಾಲ ದೊರೆಯಲಿಲ್ಲ. ಕೂಸು ಇನ್ನೂ ಚಿಕ್ಕದು ಇರುವಾಗಲೇ ತಂದೆ ತಾಯಂದಿರು ಕೈಲಾಸಕ್ಕೆ ತೆರಳಿದರು. ಮುಂದೆ ಅದು ತನ್ನ ಶಿವಭಕ್ತಿ ಮುತ್ತಂತಿರ್ದ ಮುತ್ತಜ್ಜಿಯ' ಪಕ್ಕದೊಳು ಸುಖದಿಂದ ಬೆಳೆಯಿತು.

ಬಾಲ್ಯ-ವಿದ್ಯಾರ್ಜನೆ

ಬಾಲ ಬಸವನು ತನ್ನ ಬಗೆಬಗೆಯ ಲೀಲೆಗಳಿಂದ ತನ್ನ ಪೂಜ್ಯಳಾದ ಮುತ್ತಜ್ಜಿಯನ್ನೂ ಪ್ರಿಯ ಅಕ್ಕನನ್ನೂ ನಲಿಸುತ್ತಿದ್ದನು. ಸ್ವಲ್ಪ ದೊಡ್ಡವ ಆದ ಮೇಲೆ ಅವನು ಅಲ್ಲಿಯ ಬಾಲಕರ ಬಳಗವನ್ನು ಸೇರಿ, ಅವರೊಡನೆ ಆಟಪಾಟಗಳಲ್ಲಿ ಮೈಮರೆಯತೊಡಗಿದನು. ಅವನ ಅಂದವಾದ ರೂಪವೂ ಬುದ್ಧಿಯೂ ವಿಶಾಲ ಹೃದಯವೂ ಮೃದುಮಧುರ ವಾಣಿಯೂ ಬಸವನಿಗೆ ಬಾಲಕರ ಬಳಗದಲ್ಲಿ ಒಂದು ಹಿರಿಯ ಸ್ಥಾನವನ್ನು ಸಹಜವಾಗಿಯೇ ಕಲ್ಪಿಸಿಕೊಟ್ಟವು. ಆತನ ವ್ಯಕ್ತಿತ್ವದ ಆಕರ್ಷಣವು ಅಂದಿನಿಂದಲೂ ಕಾಣಿಸಿಕೊಳ್ಳುತ್ತಿತ್ತು, ಬಾಲಕರೆಲ್ಲ ಆತನ ಮಾತನ್ನು ಕೇಳಲು, ಆತನು ಹೇಳಿದಂತೆ ನಡೆಯಲು, ಆತನನ್ನು ಎಲ್ಲೆಲ್ಲಿಯೂ ಹಿಂಬಾಲಿಸಲು ಸದೈವ ಸಿದ್ಧರಿರುತ್ತಿದ್ದರು. ಬಸವನು ನುಡಿದಂತೆ ನಡೆವ, ತನ್ನಂತೆ ಪರರನ್ನು ಬಗೆವ, ಪರರ ನೋವಿನಿಂದ ನೊಂದುಕೊಳ್ಳುವ, ಅವರ ನಲಿವಿನಿಂದ ನಲಿವ. ಆಗಾಗ ಭಕ್ತಿಪರವಶನಾಗಿ ಶಿವಧ್ಯಾನದಲ್ಲಿ ಮೈಮರೆಯುವ. ಆಗ ಅವನು ಊರ ನೆರೆಯಲ್ಲಿ ನಂದೀಕೇಶ್ವರನ ದೇವಾಲಯಕ್ಕೆ ತೆರಳುವ. ಅವನೆದುರು ಧ್ಯಾನಮಗ್ನನಾಗಿ