ಈ ಪುಟವನ್ನು ಪ್ರಕಟಿಸಲಾಗಿದೆ

24

ಆಗ 'ಅಕ್ಕನದು ಅದೆಂಥ ಅಕ್ಕರೆ, ಭಾವನದು ಅದೆಂಥ ಪ್ರೀತಿ ನನ್ನ ಮೇಲೆ! ಅವರಿಗೆ ತಿಳಿಸದೆ ತೆರಳಬೇಕೆ? ಹೀಗೆ ಮಾಡುವದು ಉಚಿತವೇ?.... ಆದರೆ ತಿಳಿಸಿದರೆ ಅವರು ನನ್ನನ್ನು ತಡೆಯಲಿಕ್ಕಿಲ್ಲವೇ? ಹಾಗಾದರೆ ಸಂಗನ ಕರೆಯನ್ನು ಮೀರಿದಂತಾಗಲಿಕ್ಕಿಲ್ಲವೇ? ಅದನ್ನು ಮೀರುವದು ಒಳಿತೆ?... ಸರಿ. ತಿಳಿಸದೆ ತೆರಳುವುದೇ ಯೋಗ್ಯ. ಅದರಿಂದ ಅವರಿಗೆ ತುಂಬ ವ್ಯಸನವಾಗಬಹುದು, ನಿಜ. ನನ್ನನ್ನು ಕರೆದ ಸಂಗನು ಅವರನ್ನು ಸಂತೈಸಬಲ್ಲ, ನನಗೇಕೆ ಅದರ ಚಿಂತೆ?’ ಬಸವಣ್ಣನು ಸ್ವಲ್ಪ ತಡೆದ. ಏನನ್ನೋ ಯೋಚಿಸಿದ. ಬಳಿಯಲ್ಲಿಯ ಮಾಡಿನಲ್ಲಿಯ ಒಂದು ಕಾಗದದ ತುಂಡಿನ ಮೇಲೆ ಏನನ್ನೋ ಬರೆದು, ಅದನ್ನು ಅಲ್ಲಿಯೇ ಇರಿಸಿದ. ಭಕ್ತಿಭಾವದಿಂದ ಸಂಗನನ್ನು ಮನದಲ್ಲಿ ವಂದಿಸಿ 'ಜಯ ಸಂಗಮನಾಥ! ಕಾವುದು! ಎಂದು ಪ್ರಾರ್ಥಿಸಿ ಮನೆಯಿಂದ ಹೊರಹೊರಟ. 'ಮನೆನೆಳಲ್ವಂ ನೆನೆಯದೆ, ಅರ್ಥಮಂ ಲೆಕ್ಕಿಸದೆ, ವೃತ್ತಿಯಂ ವಿಚಾರಿಸದೆ, ಬಂಧುಗಳಂ ಬಗೆಯದೆ, ಪುರಜನಮಂ ಪರಿಕಿಸದೆ, ಹರಿಭಕ್ತಿಯೊಳಾತುರದಿಂ ಬಾಗೇವಾಡಿಯಂ ಪೊರಮಟ್ಟು ಪೂರ್ವದಿಶಾಮುಖನಾಗಿ. ಸಂಗನನ್ನು ನೆನೆಯುತ್ತ ನಡೆದ. ಕೂಡಲಸಂಮಗದ ದಾರಿಯು ಅವನಿಗೆ ಗೊತ್ತಿತ್ತು. ಆದರೆ ಅದರ ಬಗೆಗೆ ಯಾವ ಯೋಜನೆಯನ್ನು ಮಾಡದೆ, ಕಾಲುಗಳು ಒಯ್ದತ್ತ ಝಪಝಪನೆ ಹೆಜ್ಜೆ ಇಕ್ಕುತ್ತ ಬಸವಣ್ಣ ನಡೆದ. ಮುಗಿಲು ಹರಿಯುವಷ್ಟರಲ್ಲಿ ಅವನು ಬಾಗೇವಾಡಿಯಿಂದ ಎಷ್ಟೋ ಮೈಲು ದಾರಿಯನ್ನು ಆಕ್ರಮಿಸಿದ.

ಇತ್ತ ಮನೆಯಲ್ಲಿ ಬೆಳಿಗ್ಗೆ ಗೊಂದಲವೇ ಗೊಂದಲ! ನಸುಕಿನಲ್ಲಿ ಅಕ್ಕಭಾವಂದಿರು ಎದ್ದು "ಬಸವಾ ಎಂದು ವಾಡಿಕೆಯಂತೆ ಬಸವಣ್ಣನನ್ನು ಕರೆದರು. ಕೋಣೆಯ ಒಳಗಿನಿಂದ ಉತ್ತರ ಬರಲಿಲ್ಲ, ಕದ ತೆರೆದು ನೋಡುತ್ತಾರೆ. ಒಳಗೆ ಬಸವಣ್ಣನಿರಲಿಲ್ಲ. ಹಾಸಿಗೆಯನ್ನು ಸುತ್ತಿ ಮೂಲೆಯಲ್ಲಿ ಇರಿಸಿತ್ತು. ಮನೆಯ ಬಾಗಿಲೂ ತೆರೆದಿದ್ದಿತು. ಬಸವಣ್ಣನು ಬಹಿರ್ದೆಶೆಗೆ ಹೋಗಿರಬಹುದು ಎಂದು ಯೋಚಿಸಿ, ಅವರು ತಮ್ಮ

——————

೯. ಬ.ರ.ಪು.೧೧